Saturday, May 30, 2020

ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?! #ವೆಂಕಟೇಶ ಸಂಪ

ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?!
                 #ವೆಂಕಟೇಶ ಸಂಪ

ಮೇಖ್ರಿ ಸರ್ಕಲ್ ಬಳಿ ನಿಂತಿದ್ದೆ .ಜೊತೆಗೆ ಗೆಳೆಯನೂ ಇದ್ದ..ಅತ್ತಿಂದ ಇತ್ತ...ಇತ್ತಿಂದ ಅತ್ತ ವಾಹನಗಳು ಚಲಿಸುತ್ತಿದ್ದವು....ಆಗಾಗ ಸಿಗ್ನಲ್ ಗಳು ಬದಲಾಗುತ್ತಾ ನಿಂತು ಹೋಗುವ ವಾಹನಗಳು ನೋಡಿದಾಗ..ಜೀವನದಲ್ಲಿ ಎಷ್ಟೇ ವೇಗವಾಗಿ ಓಡಿದರೂ ಮದ್ಯದಲ್ಲೇಲ್ಲೋ ಯಾರೋ ನಿಯಂತ್ರಿಸುತ್ತಾರೆಂಬ ಸೂಚನೆಯಂತಿತ್ತು.....

ಈ ನಿಂತು ಹೋಗುವ ವಾಹನಗಳ ನಡುವೆಯೇ ಒಂದಷ್ಟು ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದರು.ಅದರಲ್ಲಿ ಮಂಗಳಮುಖಿಯರೂ ....ನಿದ್ದೆ ಇಂಜಕ್ಷನ್ ಕೊಟ್ಟ ಮಗುವೂ..ಅದನ್ನೆತ್ತಿಕೊಂಡ ತಾಯಿಯೂ....ಶಾಲೆಗೆ ಹೊಗಬಹುದಾದ ಮಕ್ಕಳೂ....ಗಟ್ಟಿ ದೇಹ ಹೊಂದಿದ್ದ ಗಂಡಸೂ ಇದ್ದರು.....

ಇದು ನನ್ನ ಏರಿಯಾ..ಇಲ್ಲಿ ಬರಬೇಡ ಹೋಗು....ಬರಬೇಡ ಹೋಗು.....ಎನ್ನುತ್ತಾ ಮಂಗಳಮುಖಿಯೊಬ್ಬಳು ಮಗುವೆತ್ತಿಕೊಂಡಾಕೆಯನ್ನು ತಳ್ಳುತ್ತಿದ್ದಳು...ಒಂದು ಸಣ್ಣ ಜಗಳ...ಅಲ್ಲಿದ್ದವರಿಗೆ ಮನರಂಜನೆ ನೀಡುತ್ತಿದೆ ಅನಿಸಿತು...ಬಾರೋ ನೋಡೋಣ ಎಂತ ಘಲಾಟೆ ಅಂತ ನನ್ನ ಗೆಳೆಯನನ್ನು ಕರದೆ...ಲೇ ಸಂಪಾ ಸುಮ್ನಿರೋ...ಊರಿನ ಉಸಾಬರಿ ನಿಂಗ್ಯಾಕೋ...ಬೇಡ....ಬಾ....ಅಂದ.....ಇರಲಿ ಬಾರೋ ಅಂತ ಆತನನ್ನು ಎಳೆದುಕೊಂಡು ಹೋದೆ....ಸರಿ.....ಎನ್ರಮ್ಮಾ ನಿಮ್ಮ ಗಲಾಟೆ ಅಂತ ಹತ್ರ ಹೋದೆ.......ನೋಡಿ ಸಾರ್ ನಮ್ಮ ಏರಿಯಾ....ದಲ್ಲಿ ಭಿಕ್ಷೆ ಬೇಡ್ತಾ ಇದಾರೆ......ಅದ್ಕೆ .........ಅವರಿನ್ನ ಬಿಡಲ್ಲಾ.....ಹಾಗೆ ಹೀಗೆ ಅಂತಾ ಕೂಗಾಡಿದ ಮಂಗಳಮುಖಿಗೆ ಕೇಳಿದೆ....ಬಿಕ್ಷೆ ಬೇಡೋದೆ ಅಪರಾದ....ಅದರಲ್ಲಿ ಏರಿಯಾ ನಂದು ಅಂತಾ ಅವಾಜು ಬೇರೇನಾ.....ನಮ್ಮ ತೋಟದಲ್ಲಿ ಕೆಲಸ ಮಾಡೊದಾದ್ರೆ ನಾ ಸಂಬಳ ಕೊಡ್ತಿನಿ....ಭಿಕ್ಷೆ ಕೇಳ್ಬೇಡಿ.....ಈಗ ಪೋಲಿಸ್ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಪೋನ್ ಮಾಡ್ತಿನಿ....ಇರಿ...ಏಯ್ ಪೋಟೋ ತೆಕ್ಕೋಳ್ಳೋ ಅಂದೆ.........!?!?

ನನ್ನ ಗೆಳೆಯ ಕ್ಯಾಮರ ತೆಗೆಯುವುದ್ರೋಳಗೆ.....ಅಲ್ಲಿದ್ದ ಆ ಮಕ್ಕಳು....ಆ ಮಗು ಎತ್ತಿಕೊಂಡ ತಾಯಿ....ಗಂಡಸು....ಶಾಲೆಗೆ ಹೋಗಬಹುದಾದ ಮಗು....ನನ್ನ ಏರಿಯಾ ಅಂತ ಅವಾಜು ಹಾಕ್ತಿದ್ದ ಮಂಗಳಮುಖಿ.....ಯಾರು ಇರಲಿಲ್ಲ.....ಚಲಿಸುತ್ತಿದ್ದ ವಾಹನಗಳ ನಡುವೆ ನಮ್ಮಿಂದ ದೂರವಾದರು....

ದಯವಿಟ್ಟು ದೇಹದಲ್ಲಿ ಗಟ್ಟಿಯಾಗಿರೋ ಜನಗಳಿಗೆ ಭಿಕ್ಷೆ ನೀಡಿ ಒಳ್ಳೆಯವರಾಗುವ ಪ್ರಯತ್ನ ಮಾಡಬೇಡಿ...ಸರ್ಕಾರದ ಕಾನೂನಿನ ಪ್ರಕಾರ ಬಿಕ್ಷೆ ಬೇಡೋದು ಮತ್ತು ಕೊಡೋದು ಎರಡೂ ಅಪರಾಧ...ಅಂಗವಿಕಲರಾದವರೇ ಸಾಧನೆ ಮಾಡುತ್ತಿರುವ ಸಾವಿರಾರು ಜನ ಇದ್ದಾರೆ.....ಅಂತಹ ಜನಗಳ ನಡುವೆ ಗಟ್ಟಿಮುಟ್ಟಾದ ಜನ ಸರಳವಾಗಿ ಹಣ ಮಾಡೋ ಅಕ್ರಮ ದಂಧೆ ಶುರು ಮಾಡಿದ್ದಾರೆ..ಕಷ್ಟದಲ್ಲಿರೋರಿಗೆ ಸಹಾಯ ಮಾಡೋಣ...ಆದರೆ ಅದು ಬಿಕ್ಷೆಯ ರೂಪದಲ್ಲಿ ಅಲ್ಲ...ಸಾಧ್ಯವದಷ್ಟು ದುಡಿಯಲು ಅವಕಾಶ ಮಾಡಿಕೊಡೋಣ... ಭಿಕ್ಷಾಟನೆ ಬಿಟ್ಟು ಕೆಲಸಕ್ಕೆ ಬರುವ ಒಂದಷ್ಟು ಜನಕ್ಕೆ ನನ್ನ ತೋಟದಲ್ಲಿ ಕೆಲಸ ನೀಡಲು ಸಿದ್ದನಿದ್ದೇನೆ......ದಯವಿಟ್ಟು ಭಿಕ್ಷಾಟನೆಗೆ ಪ್ರೋತ್ಸಾಹ ನೀಡಬೇಡಿ...ದುಡಿಯುವ ಕೈಯನ್ನು ನಿಷ್ಕ್ರಿಯಗೊಳಿಸದಿರಿ......

"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".9448219347
sampadasaalu@gmail.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu