Saturday, May 30, 2020

ದೇಶದ ಒಳಿತಿಗಾಗಿ ಬಂದ ಕಾನೂನನ್ನು ಗೌರವಿಸಲೇಬೇಕು#ವೆಂಕಟೇಶಸಂಪ

ದೇಶದ ಒಳಿತಿಗಾಗಿ ಬಂದ ಕಾನೂನನ್ನು ಗೌರವಿಸಲೇಬೇಕು

#ವೆಂಕಟೇಶಸಂಪ 


ಪಕ್ಕದ ಮನೆಯವನೊಬ್ಬ ನನ್ನ ಮನೆಗೆ ಅತಿಥಿಯಾಗಿ ಬರಬಹುದು. ಹೆಚ್ಚೆಂದರೆ ನಾಲ್ಕು ದಿನ ಉಳಿಯಬಹುದು ಆದರೆ ಆತನನ್ನು ನಮ್ಮನೆಯವನನ್ನಾಗಿ ಸ್ವೀಕರಿಸಿದರೆ ಲಾಭಕ್ಕಿಂತ ಅಪಾಯವೇ ಜಾಸ್ತಿ.ಆತನನ್ನು ನಮ್ಮನೆಯವನು ಅಂತ ಒಪ್ಪಿಕೊಂಡು ಎಲ್ಲ ಸ್ವಾತಂತ್ರ್ಯ ಕೊಟ್ಟರೆ ಮನೆಯವರೇ ಹೊರಗಿನವರಾಗುವ ಅಪಾಯದ ಸಣ್ಣ ಕಲ್ಪನೆ ಮಾಡಿಕೊಂಡರೆ ಸಾಕು ನಮ್ಮ ಭಾರತಕ್ಕೆ ಪೌರತ್ವ ಕಾಯಿದೆಯ ಅನಿವಾರ್ಯತೆ    ಅರ್ಥವಾಗುತ್ತದೆ.
ನಮ್ಮ ದೇಶದವರಲ್ಲ,ನಮ್ಮ ದೇಶದ ಮೂಲ ನಿವಾಸಿಗಳೂ ಅಲ್ಲದವರು ಅವರ ಯಾವ್ಯಾವುದೋ ಕಾರಣಕ್ಕೆ ಗೊತ್ತಿಲ್ಲದಂತೆ ನಮ್ಮ ದೇಶಕ್ಕೆ ನುಸುಳಿ ಅಲ್ಲಲ್ಲಿ ಸೇರಿಕೊಂಡು ಬದುಕು ನಿರ್ಮಿಸಿಕೊಳ್ಳಲು ಹೊರಟರೆ 130 ಕೋಟಿ ಜನಸಂಖ್ಯೆ ದಾಟಿದ ಭಾರತದ ಆರ್ಥಿಕ ಸಾಮಾಜಿಕ ಸ್ಥಿತಿ ಗತಿ ಏನಾಗಬಹುದು? ಒಮ್ಮೆ ಯೋಚಿಸಿ.
ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ನಮ್ಮ ಮನೆಯ ನಾಲ್ಕು ಜನರ ಬದುಕಿಗೆ ಮಾತ್ರಾ ಸಾಕಾಗುವಷ್ಟಿದ್ದು ಅಕ್ರಮವಾಗಿ ಮನೆಗೆ ಬಂದಾತ ಅದನ್ನು ಕಬಳಿಸಿಬಿಟ್ಟರೆ ಮನೆಯ ಜನ ಎಲ್ಲಿ ಹೊಗಬೇಕು?
ಹೆಚ್ಚುತ್ತಿದೆ ಕ್ರೈಂ... 
ಈ ತರಹದ ಅಕ್ರಮ ನುಸುಳುವಿಕೆಯ ಪರಿಣಾಮ ಎಲ್ಲೆಂದರಲ್ಲಿ ಕೊಲೆ ಕಳ್ಳತನ ಮತ್ತು ಅಕ್ರಮ ಚಟುವಟಿಕೆ ನಡೆಯುತ್ತಿದೆ.ಆದರೆ ಅಕ್ರಮಿಗರನ್ನು ಹಿಡಿಯೋದು ಹೇಗೆ?
ಕ್ರೈಮ್ ಗಳನ್ನು ನಿಯಂತ್ರಿಸೋದು ಹೇಗೆ?

ದೇಶದ ಸುರಕ್ಷತೆಗಿಂತ ರಾಜಕಾರಣ ಮುಖ್ಯವಾಗಬಾರದು
ನಮ್ಮ ಮನೆಯೇ ಅಪಾಯಕ್ಕೆ ಬಂದಿದೆ ಎಂದಾದರೆ ಮನೆಯ ಜನರೇ ಕಿತ್ತಾಡಬಾರದು.ಮನೆಯವರ ನಡುವೆ ಅಭಿಪ್ರಾಯ  ಭೇದವಿರಬಹುದು ಆದರೆ ಅದು ಹೊರಗಿನವರ ವಿಚಾರಕ್ಕೆ ಒಗ್ಗಟ್ಟು ಇಟ್ಟುಕೊಳ್ಳಲೇಬೇಕು.
ಭಾರತದಲ್ಲಿಯೇ ಹುಟ್ಟಿ ಬೆಳೆದ ಅಕ್ರಮಿಗರಲ್ಲದವರಿಗೆ ಏನು ತೊಂದರೆ ಇಲ್ಲವೆಂದರೂ ಪ್ರತಿಭಟನೆ ಗಲಾಟೆ ಮತ್ತು ಹಿಂಸೆ  ಮಾಡಿದರೆ ಏನು ಪ್ರಯೋಜನ?     

ಯಾವುದೇ ವಿಚಾರಗಳಿರಲಿ ಚರ್ಚೆಯಾಗಬೇಕು.   ಬದಲಾವಣೆ ಪರಿವರ್ತನೆಯ ಪ್ರಯತ್ನ ಮಾಡಬೇಕು.ಆಗಲಿಲ್ಲವೆಂದರೆ ವ್ಯವಸ್ಥೆಯನ್ನು ಹಾಳು ಮಾಡಬಾರದು. ಆಡಳಿತ ವ್ಯವಸ್ಥೆಯಲ್ಲಿ ಇವತ್ತು ಇದ್ದವರು ನಾಳೆ ಇರುತ್ತಾರೆಂಬ ನಂಬಿಕೆ ಇಲ್ಲ.ಇದ್ದಷ್ಟು ದಿವಸ ಭವಿಷ್ಯದ ಭಾರತದ ಕಲ್ಪನೆ ಇರಲೇಬೇಕು. ಆ ನಿಟ್ಟಿನಲ್ಲಿ ಪೌರತ್ವ ಕಾಯ್ದೆ  ಭಾರತಕ್ಕೆ ಅನಿವಾರ್ಯ. ದೇಶದ ಒಳಿತಿನ ಯೋಜನೆಗೂ ರಾಜಕೀಯ ಮಾಡಿದರೆ ದೇಶವನ್ನೇ ಅಪಾಯಕ್ಕೆ ತಂದಂತೆ ಎನ್ನುವುದು ನೆನಪಿರಲಿ. 
ಒಳ್ಳೆಯ ಕಾಯ್ದೆಗೆ ಎಲ್ಲರ ಬೆಂಬಲ ಇರಲೇಬೇಕು.     ದೇಶದ ಸುರಕ್ಷತೆಗಾಗಿ ಒಳಿತಿಗಾಗಿ ಯಾವುದೇ ಪಕ್ಷದ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡರೆ ಅವರ ಜೊತೆ ನಿಲ್ಲಬೇಕಾದ್ದು ಜನರ ಕರ್ತವ್ಯ .
We should support it...Because  ಎಲ್ಲಕ್ಕಿಂತ ದೇಶ ದೊಡ್ಡದು. ..
ವೆಂಕಟೇಶ ಸಂಪ 
9448219347

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu