Saturday, May 30, 2020

5 ವರ್ಷದ ಹಿಂದೆ ಬರೆದಿದ್ದು! "ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಹಿಂದೆ....ಲಕ್ಷ ಲಕ್ಷ ಮಂದಿ........ # ವೆಂಕಟೇಶ ಸಂಪ

5 ವರ್ಷದ ಹಿಂದೆ ಬರೆದಿದ್ದು! 

"ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಹಿಂದೆ....ಲಕ್ಷ ಲಕ್ಷ ಮಂದಿ........
                         # ವೆಂಕಟೇಶ ಸಂಪ

ನನ್ನ ಪರಿಚಿತರೊಬ್ಬರಿಗೆ ಯಾರೋ ಹೇಳಿದ್ದರಂತೆ..."ಸಂಪದ ಸಾಲು ಪತ್ರಿಕೆನಾ....ಅದು ಸಣ್ಣ ಪತ್ರಿಕೆ"ಅಂತ...
ಎಸ್...ಹೌದು...ನಮ್ಮದು ಸಣ್ಣ ಪತ್ರಿಕೆ...ಆದರೆ ಕೆಟ್ಟ ಪತ್ರಿಕೆ ಅಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ....
ದೊಡ್ಡ ನದಿಯೊಂದು ವಿಸ್ತಾರವಾಗಿ ಹರಿಯುವ ಮುನ್ನ...ತನ್ನ ಉಗಮದಲ್ಲಿ ಅದು ಚಿಕ್ಕ ಹನಿಯಾಗೇ ಪ್ರಾರಂಭವಾಗಿರುತ್ತದೆ...ಹಾಗೆಯೇ ಚಿಕ್ಕ ಮಗುವೊಂದು ತನ್ನ ವಿಶಿಷ್ಟತೆಯಿಂದ ಬೆಳೆದು ದೊಡ್ಡವನಾಗುತ್ತಾನೆ ವಿನಃ ಹುಟ್ಟಿದ ಕೂಡಲೇ ದೊಡ್ಡವನಾಗಲು ಸಾಧ್ಯವಿಲ್ಲ...

ಅದಿರಲಿ...

ಬರೋಬ್ಬರಿ ಎಂಟು ವರ್ಷಗಳ ಹಿಂದಿನ ಮಾತು...ಗಲ್ಲಿ ಗಲ್ಲಿಗಳಲ್ಲಿ ಜೀವನೋಪಾಯಕ್ಕಾಗಿ ಪತ್ರಿಕೆ ಹಂಚಿ ವಿದ್ಯಾಬ್ಯಾಸ ಮಾಡುತ್ತಿದ್ದ ನನಗೆ ಪತ್ರಿಕೆ ಆರಂಭಿಸಲೇಬೇಕೆಂಬ ಛಲವಿತ್ತು.ಆಸೆ ಇತ್ತು...ಕನಸಿತ್ತು....ಆ ಕೂಡಲೇ ಕೇಂದ್ರ ಸರ್ಕಾರದಿಂದ ನೊಂದಾಯಿಸಿ ಪತ್ರಿಕೆ ಪ್ರಾರಂಭಿಸಿದೆ....ನನಗೆ ಅರಿವೇ ಇಲ್ಲದಂತೆ ದಾಖಲೆ ಆದದ್ದು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಪತ್ರಿಕೆಯೊಂದನ್ನು ನೊಂದಾವಣೆ ಮಾಡಿ ಪ್ರಾರಂಭಿಸಿದ ಚಿಕ್ಕ ವಯಸ್ಸಿನ ಸಂಪಾದಕ ಎಂದು.....

ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಈ ಪುಟ್ಟ ಪತ್ರಿಕೆ ಇಂದು ರಾಜ್ಯಾದ್ಯಂತ 5766 ಗ್ರಾಮಗಳನ್ನೊಳಗೊಂಡಂತೆ..29823 ಹಳ್ಳಿಗಳನ್ನೂ ಸೇರಿಕೊಂಡು ರಾಜ್ಯದ ಎಲ್ಲೆಡೆ ಸದಸ್ಯರನ್ನು ಹೊಂದಿದೆ..ಮತ್ತು ಅಂತರ್ಜಾಲದ ಮೂಲಕ ವಿಶ್ವದೆಲ್ಲೆಡೆ ತನ್ನ ಪುಟ್ಟ ಹೆಜ್ಜೆಯನ್ನಿಟ್ಟಿದೆ...

ಪತ್ರಿಕೆಯ ಪ್ರಾರಂಭವಾದಂದಿನಿಂದ ಈ ವರೆಗೆ 468 ಕ್ಕೂ ಹೆಚ್ಚು ಹೊಸ ಬರಹಗಾರರು ನಮ್ಮ ಸಂಪದ ಸಾಲು ಪತ್ರಿಕೆಯಿಂದಲೇ ತಮ್ಮ ಬರವಣಿಗೆ ಪ್ರಾರಂಭಿಸಿದ್ದಾರೆ..

ಈ ವರೆಗೆ ಎಂಟು ಬಾರಿ ಕರ್ನಾಟಕ ವಿಧಾನ ಪರಿಷತ್ ಮತ್ತು ವಿಧಾನ ಸಭೆಯಲ್ಲಿ ನಮ್ಮ ಪತ್ರಿಕೆಯಲ್ಲಿ ಬಂದ ಲೇಖನಗಳನ್ನು ಉಲ್ಲೇಖಿಸಿ ಮಾತಾಡಿದ್ದಾರೆ..

ಕೇಂದ್ರ ಸರ್ಕಾರ ಗುರುತಿಸಿದ ಕೆಲವೇ ನಿಯತಕಾಲಿಕೆಯಲ್ಲಿ ನಮ್ಮ ಸಂಪದ ಸಾಲು ಒಂದು ಎನ್ನುವುದಕ್ಕೆ ಹೆಮ್ಮೆ ಅನಿಸುತ್ತದೆ.

ಪತ್ರಿಕೆಯ ಮೊದಲನಿಂದಲೂ ಈವರೆಗೂ ನಮ್ಮ ಪತ್ರಿಕೆಯಲ್ಲಿ ಕ್ರೈಮ್ ಗಳ ವೈಭವೀಕರಣ ಮಾಡಿಲ್ಲ..ಸೆಕ್ಸ್ ಅನ್ನೇ ಸರ್ವಸ್ವ ಎಂಬಂತೆ ಬಿಂಬಿಸಿಲ್ಲ..

ಕಲರ್ ಕಲರ್ ಮಾಡಿ ಪತ್ರಿಕೆ ಪುಟಗಳನ್ನು ಶೃಂಗರಿಸಲಿಲ್ಲ..ಆದರೆ ವಿಷಯಗಳ ವೈವಿದ್ಯತೆಯ ಹುಡುಕಾಟಕ್ಕೆ ಅವಕಾಶ ನೀಡಿದ್ದೇವೆ..

ಟೆಂಪ್ಟೇಷನ್ ಮಾಡುವಂತ ಬರವಣಿಗೆ ಹಾಕಲಿಲ್ಲ..ಮೋಟಿವೇಷನ್ ಆಗುವಂತೆ ವಿಷಯ ಮಂಡನೆ ಮಾಡಿರುವ ಅಭಿಮಾನವಿದೆ...

ನಮ್ಮ ಪತ್ರಿಕೆಯನ್ನು ಓದಿ ಪರಿವರ್ತನೆಯಾದವರು ಸಾಕಷ್ಟಿದ್ದಾರೆ...ಆದರೆ ಅದು ಶುದ್ದ ಸರಸ್ವತಿಗೆ ಇರುವ ಶಕ್ತಿಯೇ ವಿನಃ ನಮ್ಮ ಬರವಣಿಗೆಯೇ ಬದಲಾವಣೆ ತಂದಿದೆ ಎಂಬ ಅಹಂಕಾರವಲ್ಲ..

ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನದಡಿ ಕಲಿಕೆಯ ಜೊತೆ ಗಳಿಕೆಯ ದಾರಿ..ಮತ್ತು ರಕ್ತದಾನ ..ನೇತ್ರದಾನ...ಇದರಿಂದ ಜೀವದಾನ  ಹಾಗು ಸಹಜತೆಯೇ ಶ್ರೇಷ್ಟತೆ ಎಂಬ ವಿಶಿಷ್ಟ ಕಾರ್ಯಕ್ರಮ..ರೈತರು ಮತ್ತು ಸ್ವಾವಲಂಬನೆ ಹೀಗೆ ಹಲವಾರು ವಿಚಾರದಲ್ಲಿ ಕರ್ನಾಟಕದಾದ್ಯಂತ ಕಾರ್ಯಕ್ರಮ ನೀಡಿ ಯಶಸ್ವಿಯಾಗಿದೆ..

ಪತ್ರಿಕೆ ಸಿಕ್ಕಾಪಟ್ಟೆ ದುಡ್ಡು ಮಾಡಿಲ್ಲ. ಆದರೂ ತನ್ನ ಕಾಲ ಮೇಲೆ ತಾನು ನಿಂತು ಜನರನ್ನು ಗಳಿಸಿ ಸ್ವಾವಲಂಬನೆಯೇ ಶ್ರೇಷ್ಟ ಎಂಬುದನ್ನು ತೋರಿಸಿದೆ..

ಸಂಪದ ಸಾಲು ತನ್ನದೇ ಕಚೇರಿ ನಿರ್ಮಿಸಿಕೊಂಡು ರಾಷ್ಟ್ರ ಮಟ್ಟದ ಹಲವಾರು ಸಾಧಕರು ಬಂದು ಹೋಗಿದ್ದಾರೆ ಮತ್ತು ಬರುತ್ತಿದ್ದಾರೆಂಬುದು ಸಂತಸದ ವಿಷಯ..

ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ಜೀವನವನ್ನೇ ಸೆಲಬ್ರೇಟ್ ಮಾಡುವ ಸಾಮಾನ್ಯ ಜನರಲ್ಲೂ ಒಂದಷ್ಟು ಆಶಾ ಭಾವನೆ ಮೂಡಿಸಲು..ಕಾರಣವಾಗಿದೆ..ನಮ್ಮ ಸಂಪದ ಸಾಲು....

ನಾಡಿನ ಹೆಸರಾಂತ ಬರಹಗಾರರಾದ ಡಾ;ನಾಡಿಸೋಜ..ದೊಡ್ಡರಂಗೇಗೌಡ.ಚಂದ್ರಶೇಖರ ಕಂಬಾರ..ವಸುಮತಿ ಉಡುಪರಂತಹ ಘಟಾನುಘಟಿ ಸಾಹಿತಿಗಳೂ ನಮ್ಮ ಪತ್ರಿಕೆಗೆ ಬರೆದಿದ್ದಾರೆ..

ಯಾವುದೇ 'ಇಸಂ' ಗಳಿಗೆ ಅಂಟಿಕೊಳ್ಳದೇ ವಾಸ್ತವತೆ ಮತ್ತು ಸರಳತೆಗೆ ಕಟಿಬದ್ದರಾಗಿ ಪಾಸಿಟೀವ್ ಜರ್ನಲಿಸಂ ಹುಟ್ಟು ಹಾಕಿದ ಕೀರ್ತಿ ನಮ್ಮ ಬಳಗಕ್ಕಿದೆ...

ಸಿಕ್ಕಾಪಟ್ಟೆ ಒಳ್ಳೆ ಲೇಖನ ಪ್ರಕಟವಾಗದೇ ಇರಬಹುದು...ಆದರೆ ಸಿಕ್ಕಾಪಟ್ಟೆ ಕೆಟ್ಟ ಬರವಣಿಗೆಯನ್ನು ಪ್ರಕಟಿಸಿಲ್ಲ ಎಂಬುದು ಒಂದು ಸಾಧನೆಯೇ ಆಗಿದೆ...

ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಹಿಂದೆ ಲಕ್ಷ ಲಕ್ಷ ಮಂದಿ ಜೊತೆಯಾಗಿದ್ದಾರೆ....ಸಣ್ಣ ಬಿಂದುವೊಂದು ದೊಡ್ಡ ಸಮುದ್ರವಾಗಬೇಕಿದೆ...

ಕ್ರಮಿಸಿದ ದಾರಿಯಲ್ಲಿ ಮುಳ್ಳುಗಳಿದ್ದವು...ತೊಡಕುಗಳಿದ್ದವು..ಆದರೆ ಅದೆಲ್ಲವೂ ನಮ್ಮ ಏಳ್ಗೆಗೆ ಮೈಲುಗಲ್ಲಾಯಿತು ಎಂಬುದು ಸೂರ್ಯನಷ್ಟೇ ಸತ್ಯ..

ಸಾಧಿಸಿದ್ದು ಕೇವಲ ಒಂದು ಬಿಂದುವಿನಷ್ಟು...ಸಾಧಿಸಬೇಕಾದ್ದು ಸಾಗರದಷ್ಟಿದೆ...

"ಇವನೆಂತಾ ಪತ್ರಿಕೆ ಮಾಡ್ತಾನೆ...ಇದೆಂತಾ ಪತ್ರಿಕೆ...ಆತ ಬರೀ ಮಾತು ಅಂದವರು...ಪತ್ರಿಕೆ ಮೆಂಬರ್ ಆಗ್ತೀನಿ..ಇಂದು ಬನ್ನಿ..ನಾಳೆ ಬನ್ನಿ ಅಂತ ಕಾಗೆ ಹಾರಿಸಿದವರು..ಕನ್ನಡ ಪತ್ರಿಕೆ ಓದಿ ಸದಸ್ಯರಾಗಿ ಬೆಂಬಲಿಸಿ ಅಂದಾಗ ಅಕ್ಷರಶಃ ಬಿಕ್ಷುಕನಂತೆ ನೋಡಿದವರೂ...ನಾನು ಬರಿತೀನಿ..ನಿಮ್ಮ ಜೊತೆ ಇರ್ತೀನಿ ಅಂತ ಹೇಳಿ ಕೈಗೆ ಸಿಗದಷ್ಟು ದೂರ ಹೋದವರು...ಸಬ್ಸ್ಕ್ರಿಪ್ಸನ್ ಕೇಳಿದ್ದಕ್ಕೇ ಸ್ನೇಹ ಬಿಟ್ಟವರು..ನಿಂದಿಸಿದವರು...ಅಸೂಯೆಪಟ್ಟವರು....ಕಾರಣವೇ ಇಲ್ಲದೆ ಮನಸ್ಸಲ್ಲೇ ಬೈದುಕೊಂಡವರು...ಹೊಗಳಿದವರು......
ಇವರೆಲ್ಲರ ನಡುವೆ ಈತ ನಮ್ಮ ಹುಡುಗ ಅಂತ ಜೊತೆಯಾದವರೂ...ಯಾವುದೇ ಅಪೇಕ್ಷೆ ಇಲ್ಲದೆ ಬೆಂಬಲಿಸಿದವರು..ಪ್ರಚಾರ ಕೊಟ್ಟವರು...ಅಂಗವಿಕಲನಾದರೂ ಕೂಲಿ ಕಾರ್ಮಿಕನಾದರೂ ನಿಮ್ಮ ಪತ್ರಿಕೆಗೆ ನಾವಿದ್ದೇವೆ ಅಂತ ಹತ್ತು ರೂಪಾಯಿ ಕೊಟ್ಟು ಬೆನ್ನು ತಟ್ಟಿದವರು..ನನ್ನ ಗೆಳೆಯ..ಅಣ್ಣಾ...ತಮ್ಮಾ...ಜೊತೆಗಾರ...ಆತ್ಮೀಯ....ಅಂತೆಲ್ಲಾ ಕೈಲಾದಷ್ಟು ಕೊಟ್ಟು ಬೆನ್ನೆಲುಬಾಗಿ ನಿಂತವರು...ಎಷ್ಟೇ ಕಷ್ಟ ಇದ್ದರೂ ಒಂದೇ ಮಾತಿಗೆ ತಮ್ಮ ಬರವಣಿಗೆ ಕಳುಹಿಸಿದವರು..ನಮ್ಮ ಹುಡುಗ ಅಂತ ಪ್ರೀತಿಯಿಂದ ಹೊತ್ತು ಹೆತ್ತು ಸಾಕಿದ ಮನೆಯವರು...ಮನೆ ಮಗನಂತೆ ಆತ್ಮಿಯರಾದವರು.....ಜಾಹೀರಾತು ಕೊಟ್ಟವರು...ಮೆಂಬರ್ ನ್ನು ಮಾಡಿಸಿದವರು.....ದುಡ್ಡು ಕೊಟ್ಟು ಪತ್ರಿಕೆ ಓದುತ್ತಿರುವವರು....ಸರಿಯಾದ ಸಮಯಕ್ಕೆ ಡಿಸೈನ್ ಮಾಡುವವರೂ...ಪ್ರಿಂಟ್ ಮಾಡುವವರು...ಪೋಸ್ಟ್ ಗೆ ಕಳುಹಿಸುವವರು.....ಸರಿಯಾದ ಸಮಯಕ್ಕೆ ಓದುಗರಿಗೆ ತಲುಪಿಸುವ ಅಂಚೆ ಇಲಾಖೆಯವರು.....ಹೀಗೆ ಜೊತೆಯಾದವರೇ ನಮ್ಮ ಸಂಪದ ಸಾಲು ಬಳಗ.....ಇವರೆಲ್ಲರಿಗೂ ನಾನು ಚಿರ ಋಣಿ...

ಕ್ರಮಿಸಿದ ದಾರಿ ಕೇವಲ ಕಿಲೋಮಿಟರ್ ಗಳಷ್ಟು...ಕ್ರಮಿಸಬೇಕಾದ ದಾರಿ ಇನ್ನೂ ಜ್ಯೋತಿರ್ವರ್ಷಗಳಷ್ಟಿದೆ...ನಿಮ್ಮೆಲ್ಲರ ಸಹಕಾರ..ಪ್ರೀತಿ....ಬೆಂಬಲ.....ಮತ್ತೊಮ್ಮೆ ಬಯಸುತ್ತೇನೆ..ಹಾಗು ನೀವು ಕೊಡಬಹುದಾದ ಚಿಕ್ಕದೊಂದು ಸಬ್ಸ್ಕ್ರಿಪ್ಸನ್ ನಮ್ಮ ಕೆಲಸಕ್ಕೆ ಜೊತೆಯಾಗುತ್ತದೆ..ಬೆಳಕು ಮೂಡಿಸುವ ಕಾರ್ಯದಲ್ಲಿ ನಿಮ್ಮದೂ ಚಿಕ್ಕ ಕೊಡುಗೆಯಾಗುತ್ತದೆ.. ಚಿಕ್ಕ ಚಿಕ್ಕ ಆಲೋಚನೆ ಮತ್ತು ಕೆಲಸಗಳೇ ದೊಡ್ಡ ದೊಡ್ಡ ಸಾಧನೆಗೆ ದಾರಿದೀವಿಗೆಯಾಗುತ್ತದೆ.....

ಇಂದೇ ಸಂಪದ ಸಾಲು ಪತ್ರಿಕೆಗೆ ಚಂದಾದಾರರಾಗಿ....ನಮ್ಮ ಕಚೇರಿ ಸಂಖ್ಯೆ 9448219347

"ಬದಲಾವಣೆ ಬರಲಿ..ಪರಿವರ್ತನೆ ತರಲಿ..ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿಸಂಪದಸಾಲುಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu