Sunday, September 21, 2014

ಮತ್ತೊಮ್ಮೆ ಗುಲಾಮರಾಗಬಾರದು....!..? ಸ್ವಾತಂತ್ರ ಬೇಕು....ಸ್ವೇಚ್ಛಾಚಾರ ಬೇಡ . venkatesha sampa


  1. ಮತ್ತೊಮ್ಮೆ ಗುಲಾಮರಾಗಬಾರದು....!..?
    ಸ್ವಾತಂತ್ರ ಬೇಕು....ಸ್ವೇಚ್ಛಾಚಾರ ಬೇಡ .

    ಸರ್ವರಿಗೂ ಸ್ವಾತಂತ್ರೋತ್ಸವದ ಶುಭಾಷಯಗಳು .

    ನಮಗೆ
    ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರ ವಲ್ಲ
    ಭ್ರಷ್ಟಾಚಾರ ಮುಗಿಲು ಮುಟ್ಟಿದೆ.ಅದು ಕೇವಲ
    ಆರ್ಥಿಕ ಭ್ರಷ್ಟಾಚಾರವಲ್ಲ.
    ಮಾನಸಿಕ..ನೈತಿಕ.ಸಾಮಾಜಿಕ.ಸಾಮೂಹಿಕ.
    ಧಾರ್ಮಿಕ ಭ್ರಷ್ಟಾಚಾರ
    ಎಗ್ಗಿಲ್ಲದೇ ಸಾಗಿದೆ.ಮತ್ತು ಬೆಕ್ಕಿನ ಕೊರಳಿಗೆ
    ಗಂಟೆ ಕಟ್ಟಲಾಗದಂತ ಸ್ತಿತಿ
    ತಲುಪಿಸಿದೆ.ಹಾಗು ಈ ಬೃಹತ್ ಭ್ರಷ್ಟಾಚಾರದ
    ಕೂಪದಲ್ಲಿ ರಾಜಕಾರಣದ
    ಶಾಸಕಾಂಗ..ಕಾನೂನು ಹೇಳುವ ನ್ಯಾಯಾಂಗ..
    ಅಧಿಕಾರಿವರ್ಗದ ಕಾರ್ಯಾಂಗ..
    ಜನಗಳಲ್ಲಿ ಜಾಗೃತಿ ಮೂಡಿಸಬೇಕಾದ
    ಮಾದ್ಯಮಗಳು....ಇದೆಲ್ಲದರ ಪ್ರಯೋಜನ
    ಪಡೆಯುವ ಜನ ಸಾಮಾನ್ಯನೂ ...ಹೀಗೆ
    ಭ್ರಷ್ಟಾಚಾರದ ಕೂಪದಲ್ಲಿ ಒದ್ದಾಡುತ್ತಿದ್ದಾ
    ರೆ
    ನಮಗೆ
    ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರವಲ್ಲ
    .
    ದೇಶದ ಅಭಿವೃದ್ದಿಗೆ ಬೇಕಿರುವುದು ಸಾಮಾನ್ಯ
    ಜ್ಣಾನ ಮತ್ತು ಇಚ್ಚಾಶಕ್ತಿಯೇ ವಿನಃ ಕೋಟಿ
    ಕೋಟಿ ಹಣವಲ್ಲ.
    ನಮಗೆ
    ಬೇಕಿರುವುದು ಸ್ವಾವಲಂಬನೆಯೇ ವಿನಃ ಶ್ರೀಮಂತಿಕೆಯಲ್ಲ.
    .
    ನಮಗೆ ಬೇಕಿರುವುದು ಜಗತ್ತೇ ಗೌರವಿಸುವ
    ನಮ್ಮತನವೇ ವಿನಃ ಶೋಕಿ ತೋರಿಸುವ
    ಬೂಟಾಟಿಕೆಯ ಜೀವನ ಪದ್ದತಿಯಲ್ಲ.
    ನಮಗೆ ಬೇಕಿರುವುದು ಪ್ರಕೃತಿಯನ್ನು ನಾಶ
    ಮಾಡದ ನೈಜ
    ಅಭಿವೃದ್ದಿಯೇ ವಿನಃ ಬಾಷಣಗಳಲ್ಲ...
    ಮತ್ತೊಮ್ಮೆ ನಮ್ನ ದೇಶ
    ಗುಲಾಮನಂತಾಗಬಾರದು.ಭವ್ಯ ಭರತ
    ಖಂಡದಲ್ಲಿ ಹುಟ್ಟಿ..ಪವಿತ್ರ
    ಪ್ರಜಾಪ್ರಭುತ್ವದಲ್ಲಿ ಬೆಳೆಯುತ್ತಿರುವ ನಮಗೆ
    ನಾವೇ ಶಪಥ ಮಾಡಬೇಕಿದೆ...ಈ ದೇಶದ
    ಅಭಿವೃದ್ದಿಗೆ...ಈ ಸಂಸ್ಕಾರಯುತ ಸಂಪದ್ಬರಿತ
    ರಾಷ್ಟ್ರ ನಿರ್ಮಾಣಕ್ಕಾಗಿ ಜಾತಿ ಧರ್ಮದ
    ಯೋಚನೆ ಮಾಡುವುದಿಲ್ಲ.ಮತ್ತು ಸಹಜ
    ಮತ್ತು ಸರಳ ಜೀವನ ಸಾಗಿಸುತ್ತೇನೆ.ಮತ
    ್ತು ದೇಶದ ವಿಚಾರ ಬಂದಾಗ
    ನಾವು ಒಂದಾಗುತ್ತೇವೆ...ನನ್ನ ದೇಶ
    ನನ್ನದು...
    ನನ್ನನ್ನು ನಾನು ಪ್ರೀತಿಸಿಕೊಂಡಷ್ಟೇ ನನ್ನ
    ದೇಶವನ್ನು ಪ್ರೀತಿಸುತ್ತೇನೆ.
    ಎಂದು ತೀರ್ಮಾನಿಸಿ ಕಾರ್ಯಪ್ರವೃತ್ತರಾದ
    ದಿನವೇ ಸ್ವಾತಂತ್ರ ದಿನಾಚರಣೆಗೆ ಅರ್ಥ
    ಬರುತ್ತದೆ.ಏಕೆಂದರೆ ಗುರಿ ಮುಟ್ಟುವ
    ಮೊದಲೇ ದಾರಿ ತಪ್ಪಬಾರದು ಅಲ್ಲವೇ?!?!
    ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ
    ವ್ಯತ್ಯಾಸವೇನು?೬೯ ವರ್ಷ ಸಾಧಿಸಿದ್ದೇನು?
    ನಮ್ಮ ಸ್ಥಿತಿಗೆ ಕಾರಣವೇನು?ಅದಕ್ಕೆ
    ಪರಿಹಾರವೇನು? ಅಂತ ತಿಳಿಯಲು ಈ ಬಾರಿಯ
    ಸಂಪದ ಸಾಲು ಪತ್ರಿಕೆಗೆ ಚೆಂದದಾರರಾಗಿ ಓದಿ.
    "ಬದಲಾವಣೆ ಬರಲಿ.ಪರಿವರ್ತನೆ ತರಲಿ
    ಇದು ಸಂಪದ ಸಾಲು ಪತ್ರಿಕಾ ಅಭಿಯಾನ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu