Sunday, September 21, 2014

ಕೊಳಕು ಪಟಾಲಂ ಇಲ್ಲದ ರಾಜಕಾರಣಬೇಕಿದೆ. # ವೆಂಕಟೇಶ ಸಂಪ



ಕೊಳಕು ಪಟಾಲಂ ಇಲ್ಲದ ರಾಜಕಾರಣಬೇಕಿದೆ.
# ವೆಂಕಟೇಶ ಸಂಪ

ಖಾಸಗಿ ಟಿವಿ ಚಾನಲ್ ಒಂದರ ಕಾರ್ಯಕ್ರಮ ಮುಖ್ಯಸ್ಥನಾಗಿದ್ದ ದಿನಗಳವು.ಪಾಸಿಟೀವ್ ಪಾಲಿಟಿಕ್ಸ್ ಎಂಬ ಕಾರ್ಯಕ್ರಮದಡಿಯಲ್ಲಿ ಮಾಜಿ ಸಭಾದ್ಯಕ್ಷರಾದ ರಮೇಶ್ ಕುಮಾರ್ ಅವರ ಜೊತೆ ಮಾತಾಡುತ್ತಿದ್ದೆ....ಆ ಮಾತುಕತೆಯ ಕೆಲವು ಆಯ್ದ ವಿಷಯಗಳು ಎಷ್ಟು ಪ್ರಸ್ತುತ ಅನಿಸುತ್ತೆ....ಒಮ್ಮೆ ಓದಿ ಬಿಡಿ.....

ಒಬ್ಬ ರಾಜಕಾರಣಿ ಅನಿಸಿಕೊಂಡವನು ಎಮ್ ಎಲ್ ಎ ಆಗಬೇಕೆಂದರೆ ಲಕ್ಷಾಂತರ ಜನಗಳ ಮತ ಪಡೆಯಬೇಕಾಗುತ್ತದೆ.ಒಮ್ಮೆ ಗೆದ್ದ ನಂತರ ಮತ್ತು ರಾಜಕಾರಣದಲ್ಲಿ ಒಂದಷ್ಟು ಪಟಾಲಂ ಜೊತೆಗಿರುತ್ತದೆ..ಇವರು ಗೆದ್ದ ನಂತರ ದಿನಕ್ಕೊಂದು ಬಾರಿ ಒಂದೈವತ್ತು ಮಂದಿ ನಮ್ಮ ಸುತ್ತ ಸುತ್ತುತ್ತಾರೆ..ತಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ರಾಜಕಾರಣಿಗಳು ಮಾಡಿದ್ದೆಲ್ಲಾ ಸರಿ ಎಂಬಂತೆ ಈ ಪಟಲಾಂ ಸುಖಾಸುಮ್ಮನೆ ಜೈಕಾರ ಹಾಕುತ್ತಾರೆ.ಯಾಕೆಂದರೆ ಆತನದ್ದು ಯಾವುದೋ ಟ್ರಾನ್ಸಪರ್ರೋ,ಕಮಿಶನ್ ವ್ಯವಹಾರವೋ ಇರತ್ತೆ..ಅದಕ್ಕೆ ನಾವು ಆತನ ಜೈಕಾರ ಕ್ಕೆ ಮರುಳಾಗಿ ಆತ ಹೇಳಿದ್ದೆಲ್ಲಾ ಸರಿ ಅಂದುಬಿಡುತ್ತೇವೆ...ಕೇವಲ ಈ ಐವತ್ತು ನೂರು ಮಂದಿಗಳು ದಿನ ನಮ್ಮ ಸುತ್ತ ಗಿರ್ಕಿ ಹೊಡೆಯುತ್ತಾರೆ...ದುರಂತ ಅಂದ್ರೆ ಓಟ್ ಹಾಕಿದ ಲಕ್ಷಾಂತರ ಜನರನ್ನು ಮರಿತೀವಿ...ಈ ಪಟಾಲಂ ಅನ್ನೇ ಜನ ಅಂದುಕೊಳ್ತೀವಿ...ಈ ಐವತ್ತು ಹೊಗೊಳೋ ಭಟರನ್ನೇ ಜನ ಅಂದುಕೊಳ್ತೀವಿ....ಹಾಗು ಅವರು ಹೇಳಿದ ಕೆಲ್ಸವನ್ನೇ ಮಾಡ್ತಿವಿ....ಜನಗಳಿಗೆ ನಾವು ಮಾಡೊ ಕೆಲ್ಸ ಬೇಕೋ ಬೇಡವೋ ಯೋಚಿಸೋದಿಲ್ಲ...ಯಾವತ್ತು ಈ ಪಟಲಾಂಗಳನ್ನು ದೂರ ಇಟ್ಟುಕೊಳ್ಳಬೇಕು....

ಇನ್ನೊಂದು ಈ ಆಪ್ತ ಸಹಾಯಕರು...ಪಿ ಎ ಗಳು ಅಂತ ನೇಮಕ ಮಾಡಿಕೊಳ್ಳೋ ಮಂತ್ರಿಗಳು...ಶಾಸಕರುಗಳು...ಒಮ್ಮೆ ಯೋಚಿಸಬೇಕು...ಈ ಮನುಷ್ಯ ಡೀಲ್ ಮಾಷ್ಟರ್ರಾ?! ಅಥವಾ ಕೆಲಸ ಕೊಡಸ್ತೀನಿ ಅಂತಾ ಹೆಣ್ಣುಮಕ್ಕಳಿಗೆ ಆಸೆ ತೋರಿಸಿ ಮೋಸ ಮಾಡಿದವನಾ?!ಈತನಿಗೆ ತಲೆ ಇದೆಯಾ?!ಮಾನವೀಯ ಹೃದಯ ಇದೆಯಾ?!ಅಥವಾ ಶೋಕಿವಾಲ ನಾ?!ಅಥವಾ ಶಾಸಕನ ಹೆಸರಲ್ಲಿ ದುಡ್ಡು ಪೀಕುವವನಾ?!ಅಂತ ಯೋಚಿಸಬೇಕು...ಇಲ್ಲದಿದ್ದರೆ ಆ ರಾಜಕಾರಣಿಯೂ ಹಾಳು....ಈ ಅನಿಷ್ಟ ಪಿ ಎ ಯಿಂದ ಸಮಾಜವೂ ಹಾಳು.....

ಗೆಲುವು ಮತ್ತು ಅಧಿಕಾರ ಬಂದ ಮೇಲೆ ನಮ್ಮ ಜೊತೆಯಲ್ಲಿರುವವರ ಬಗ್ಗೆ ಜಾಗೃತರಾಗಿರಬೇಕು...ಜೊತೆಗೆ ಕೆಲಸ ಮಾಡುವವರು ಮತ್ತು ಪಟಾಲಂ ಗಳು ಅಭಿವೃದ್ದಿಗೆ ಪೂರಕವಾಗಬೇಕೇ ವಿನಃ ಜನ ಸಾಮಾನ್ಯರ ಬದುಕಿಗೇ ತಡೆ ಗೋಡೆಯಾಗಬಾರದು....

ಸಾಮಾನ್ಯ ಜ್ಞಾನ ಮತ್ತು ಮಾನವೀಯ ಮೌಲ್ಯ ಹಾಗು ಯಾರನ್ನು ಯಾವ ರೀತಿ ಬಳಸಿಕೊಳ್ಳಬೇಕು ಮತ್ತು ಯಾರಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಅರಿಯಬೇಕು.....

ಇಂದಿನ ಬಹುತೇಕ ರಾಜಕಾರಣಿಗಳನ್ನು ಮತ್ತು ಮಂತ್ರಿ ಮಹೋದಯರನ್ನು ನೋಡಿದ್ದೇನೆ..ಅವರ ಆಪ್ತ ಸಹಾಯಕರ ದುರಹಂಕಾರ ಮತ್ತು ಡೀಲ್ ಸ್ವಭಾವವನ್ನೂ ನೋಡಿದ್ದೇನೆ... ಕಂಡ ಕಂಡವರ ಜೊತೆ ಆಟ ಆಡುವ ಇಂತವರನ್ನು ನೋಡಿದಾಗ ನಮ್ಮ ರಮೇಶ್ ಕುಮಾರ್ ಅವರ ಮಾತು ಸದಾ ನೆನಪಾಗತ್ತೆ.......

ತೊಲಗಬೇಕು ದುರಹಂಕಾರಿಗಳು...."ಬೇಕು ಪಾಸಿಟೀವ್ ಪಾಲಿಟಿಕ್ಸ್"

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu