Friday, August 8, 2014

ನೊಂದವರಿಗೆ ನೆಮ್ಮದಿ ಸಿಗಲಿ..


ನೊಂದವರಿಗೆ ನೆಮ್ಮದಿ ಸಿಗಲಿ....

ನನ್ನ ಆತ್ಮೀಯರಲ್ಲೊಬ್ಬರಾದ ಸಚಿವ ಎಸ್ ಆರ್ ಪಾಟೀಲ್ ಅವರೊಂದಿಗೆ ಮಾತಾಡಿದೆ....ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಪಾಟೀಲ್ ಅವರ ಹತ್ತಿರ ಸೂಳಿಕೇರಿಯ ರೈತ ಹನುಮಂತ ಹಟ್ಟಿಯವರ ಮಗ ಕೊಳವೆ ಬಾವಿಗೆ ಬಿದ್ದದ್ದು...ಕಾರ್ಯಾಚರಣೆ ನೆಡೆಸಿದ್ದು...ಸುರಂಗ ತೋಡಿದ್ದು....ರೋಬೋ ತರಿಸಿದ್ದು ಎಲ್ಲಾ ವಿಚಾರ ಮಾತಾಡಿದೆವು...ಆ ರೈತನ ಮಗ ತಿಮ್ಮಣ್ಣನನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೀವಿ...ದೇವರ ಕೃಪೆ ಇದ್ದರೆ ಮಗು ಬದುಕುತ್ತದೆ ಎಂದರು...ಅದೇ ಸಂದರ್ಭದಲ್ಲಿ ನಾ ಅವರಿಗೆ ಹೇಳಿದೆ...ದಯವಿಟ್ಟು ಆ ರೈತನ ಹೊಲವನ್ನು ಮೊದಲಿನಂತೆ ಮಾಡಬೇಕಾದ ಜವಬ್ದಾರಿ ತಮ್ಮದಿದೆ..ಹಾಗು ಆ ರೈತನ ಆರ್ಥಿಕ ಸಂಕಷ್ಟಕ್ಕೂ ತಾವು ಸಹಕರಿಸಬೇಕು..ಮತ್ತು ಆ ವ್ಯಕ್ತಿಗೆ ನೈತಿಕವಾದ ಬೆಂಬಲ ನೀಡಬೇಕು ಸಾರ್ ಅಂದೆ....ಸಂಪಾ ಅವರೆ ನೀವು ಹೇಳಿದ ಸಲಹೆ ಸೂಕ್ತವಾದದ್ದು...ಖಂಡಿತಾ ಆ ಹೊಲವನ್ನು ಮೊದಲಿನಂತೆ ಮಾಡಿಕೊಡುತ್ತೇವೆ..ಮತ್ತು ಆ ರೈತನ ಆರ್ಥಿಕ ಸಂಕಷ್ಟಕ್ಕೆ ಜೊತೆಯಾಗಿರ್ತೇನೆ ಅಂದ್ರು...ಒಬ್ಬ ನಾಯಕನಾದವನಿಗೆ ಸ್ಪಂದನೆಯ ಗುಣ ಇರಬೇಕು..ಮತ್ತು ಭರವಸೆಗೆ ಮೀಸಲಾಗದೆ ಕೆಲಸ ಮಾಡಬೇಕು ಹಾಗು ನಂಬಿದವರ ರಕ್ಷಣೆ ಆಗಬೇಕು.ಅವರಿಗೆ ಸಹಕಾರಿಯಾಗಿ ನಿಲ್ಲಬೇಕೆಂಬ ಬದ್ದತೆಯನ್ನು ಸಚಿವರಾದ ಎಸ್ ಆರ್ ಪಾಟೀಲ್ ಪ್ರದರ್ಶಿಸುತ್ತಾರೆಂಬ ನಂಬಿಕೆ ಇದೆ....ಮತ್ತು ಆ ಶಕ್ತಿಯೂ ಅವರಿಗಿದೆ.
ಅವರ ಒಳ್ಳೆಯ ಕೆಲಸಕ್ಕೆ ನಮ್ಮ ಸಂಪದ ಸಾಲು ಪತ್ರಿಕಾ ಬಳಗ ಬೆಂಬಲ ವ್ಯಕ್ತ ಪಡಿಸುತ್ತಾ ಅವರಿಗೆ ಶುಭ ಹಾರೈಸುತ್ತದೆ..... .ರೈತನ ಬದುಕು ಹಸನಾಗಲಿ...ನೊಂದವರಿಗೆ ನೆಮ್ಮದಿ ಸಿಗಲಿ.......

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu