Friday, August 8, 2014

ಹೃದಯವಂತನಿಗೆ ಹೃದಯಾಘಾತವಾಯಿತೆ!?!? ಮರೆಯಲಾರದ ಮೀಸೆ ರಂಗಣ್ಣ.

ಹೃದಯವಂತನಿಗೆ ಹೃದಯಾಘಾತವಾಯಿತೆ!?!?
ಮರೆಯಲಾರದ ಮೀಸೆ ರಂಗಣ್ಣ.

ಪ್ರತಿಯೊಬ್ಬರನ್ನು ಪ್ರೀತಿಯಿಂದ ಗೌರವಿಸಿ"ನಾನು ಮೀಸೆ ರಂಗಣ್ಣ...ನಮಸ್ಕಾರ ಕಾಣ್ರಿ"ಅಂತ ಕರೆದು ಕಲ್ಲನ್ನೂ ಮಾತಾಡಿಸುತ್ತಿದ್ದ ರಂಗಣ್ಣ ತನ್ನ ಮೀಸೆ ಮೇಲೆ ಅಗಾಧ ಅಭಿಮಾನ ಹೊಂದಿದ್ದರು.ನನ್ನ ಮೀಸೆ ಅಂದ್ರೆ ಡಾ.ರಾಜಕುಮಾರಗೂ ಇಷ್ಟ ಆಗಿತ್ತು ಕಾಣ್ರಿ..ಅಂತ ಆ ಪೋಟೋವನ್ನೇ ತನ್ನ ಮೊಬೈಲ್ ಸ್ಕ್ರೀನ್ ಸೇವರ್ ಮಾಡಿಕೊಂಡಿದ್ರು.. ನನ್ನನ್ನು ಎಲ್ಲಿ ನೋಡಿದ್ರು " ವಾಟ್ ಮಿಷ್ಟರ್ ಯಂಗ್ ಮ್ಯಾನ್"ಅಂತ ಹೆಗಲ ಮೇಲೆ ಕೈ ಹಾಕಿ ಸಂಪದ ಸಾಲು ಚೆನ್ನಾಗಿ ಬರ್ತಿದೆ...ಬೆಳಿಯಪ್ಪ ಚೆನ್ನಾಗಿ...ಅನ್ನುತ್ತಾ ಮೀಸೆ ಮುಟ್ಟಲ್ವಾ?!ಕೇಳುತ್ತಿದ್ದುದು ನೆನಪಾಯ್ತು... ಇಂತ ಹೃದಯವಂತ ಪತ್ರಕರ್ತ ಮೀಸೆ ರಂಗಣ್ಣ ತೀವ್ರ ಹೃದಯಾಘಾತದಿಂದ ನಮ್ಮನ್ನು ಅಗಲಿದರು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮನಸ್ಸಿಗ್ಯಾಕೋ ಬೇಸರದ ಛಾಯೆ ಆವರಿಸುತ್ತಿದೆ.....ಒಮ್ಮೆ ಪ್ರೆಸ್ ಕ್ಲಬ್ ಲ್ಲಿ ಕಾಫಿ ಕುಡಿತಾ ಮಾತಾಡ್ತಾ ಇದ್ವಿ.ನನ್ನಪ್ಪಾಜಿ ನಮ್ಮನ್ನಗಲಿದ ದುಃಖ ನನ್ನನ್ನಾವರಿಸಿತ್ತು...ಅದನ್ನು ನಾ ಹೇಳಿದ ತಕ್ಷಣ ಮೀಸೆ ರಂಗಣ್ಣ ತನ್ನ ಧರ್ಮಪತ್ನಿಯನ್ನು ಕಳೆದುಕೊಂಡಿದ್ದನ್ನು ನೆನೆಸಿ ಗದ್ಗದಿತರಾದರು.ನನ್ನ ಕೈ ಹಿಡಿದು ಮಾತಾಡ್ತಾ ಆಕೆ ನನ್ನ ಪಾಲಿನ ಪ್ರೀತಿಯ ದೇವರಾಗಿದ್ದಳು...ಆಕೆ ಇದ್ದಿದ್ದರೆ ಅನ್ನುತ್ತಾ ಕಣ್ಣೀರಿಟ್ಟರು... ನನ್ನ ದುಃಖದ ಜೊತೆ ಅವರ ದುಃಖವೂ ಸೇರುವಂತೆ ಮಾಡಿತ್ತು....

ಅವರು ಪತ್ರಕರ್ತರಾಗಿ ಏನೆಲ್ಲಾ ಬರೆದಿದ್ದಾರೋ?!ನನಗೆ ಗೊತ್ತಿಲ್ಲ.ಆದರೆ ಒಬ್ಬ ಹೃದಯವಂತನಾಗಿ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿಯಾಗಿದ್ದರು.....ಅಂತ ಹೃದಯವಂತನೊಬ್ಬ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ ಎಂಬುದು ನಿಜಕ್ಕೂ ಬೇಸರ...ನಿಮ್ಮ ನೈಜ ಆತ್ಮೀಯತೆಗೆ ನನ್ನದೊಂದು ಸಲಾಂ..ವಿ ಮಿಸ್ ಯು ಮೀಸೆ ರಂಗಣ್ಣ..........

#ಓದಿ ಸಂಪದ ಸಾಲು

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu