Friday, August 8, 2014

ಜೋಗದ ಸಿರಿ ಬೆಳಕಿನಲ್ಲಿ..........ಸಂಪದ ಸಾಲು ಸೃಷ್ಟಿಯಲ್ಲಿ............


ನಮಗೆ ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರವಲ್ಲ



ನಮಗೆ ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರವಲ್ಲ

ಭ್ರಷ್ಟಾಚಾರ ಮುಗಿಲು ಮುಟ್ಟಿದೆ.ಅದು ಕೇವಲ ಆರ್ಥಿಕ ಭ್ರಷ್ಟಾಚಾರವಲ್ಲ.ಮಾನಸಿಕ..ನೈತಿಕ.ಸಾಮಾಜಿಕ.ಸಾಮೂಹಿಕ.ಧಾರ್ಮಿಕ ಭ್ರಷ್ಟಾಚಾರ ಎಗ್ಗಿಲ್ಲದೇ ಸಾಗಿದೆ.ಮತ್ತು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗದಂತ ಸ್ತಿತಿ ತಲುಪಿಸಿದೆ.ಹಾಗು ಈ ಬೃಹತ್ ಭ್ರಷ್ಟಾಚಾರದ ಕೂಪದಲ್ಲಿ ರಾಜಕಾರಣದ ಶಾಸಕಾಂಗ..ಕಾನೂನು ಹೇಳುವ ನ್ಯಾಯಾಂಗ.. ಅಧಿಕಾರಿವರ್ಗದ  ಕಾರ್ಯಾಂಗ..
ಜನಗಳಲ್ಲಿ ಜಾಗೃತಿ ಮೂಡಿಸಬೇಕಾದ ಮಾದ್ಯಮಗಳು....ಇದೆಲ್ಲದರ ಪ್ರಯೋಜನ ಪಡೆಯುವ ಜನ ಸಾಮಾನ್ಯನೂ ...ಹೀಗೆ ಭ್ರಷ್ಟಾಚಾರದ ಕೂಪದಲ್ಲಿ ಒದ್ದಾಡುತ್ತಿದ್ದಾರೆ


ನಮಗೆ ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರವಲ್ಲ.

ದೇಶದ ಅಭಿವೃದ್ದಿಗೆ ಬೇಕಿರುವುದು ಸಾಮಾನ್ಯ ಜ್ಣಾನ ಮತ್ತು ಇಚ್ಚಾಶಕ್ತಿಯೇ ವಿನಃ ಕೋಟಿ ಕೋಟಿ ಹಣವಲ್ಲ.


ನಮಗೆ ಬೇಕಿರುವುದು ಸ್ವಾವಲಂಬನೆಯೇ ವಿನಃ ಶ್ರೀಮಂತಿಕೆಯಲ್ಲ..

ನಮಗೆ ಬೇಕಿರುವುದು ಜಗತ್ತೇ ಗೌರವಿಸುವ ನಮ್ಮತನವೇ ವಿನಃ ಶೋಕಿ ತೋರಿಸುವ ಬೂಟಾಟಿಕೆಯ ಜೀವನ ಪದ್ದತಿಯಲ್ಲ.


ನಮಗೆ ಬೇಕಿರುವುದು ಪ್ರಕೃತಿಯನ್ನು ನಾಶ ಮಾಡದ ನೈಜ ಅಭಿವೃದ್ದಿಯೇ ವಿನಃ ಬಾಷಣಗಳಲ್ಲ...

ಮತ್ತೊಮ್ಮೆ ನಮ್ನ ದೇಶ ಗುಲಾಮನಂತಾಗಬಾರದು.ಭವ್ಯ ಭರತ ಖಂಡದಲ್ಲಿ ಹುಟ್ಟಿ..ಪವಿತ್ರ ಪ್ರಜಾಪ್ರಭುತ್ವದಲ್ಲಿ ಬೆಳೆಯುತ್ತಿರುವ ನಮಗೆ ನಾವೇ ಶಪಥ ಮಾಡಬೇಕಿದೆ...ಈ ದೇಶದ ಅಭಿವೃದ್ದಿಗೆ...ಈ ಸಂಸ್ಕಾರಯುತ ಸಂಪದ್ಬರಿತ ರಾಷ್ಟ್ರ ನಿರ್ಮಾಣಕ್ಕಾಗಿ ಜಾತಿ ಧರ್ಮದ ಯೋಚನೆ ಮಾಡುವುದಿಲ್ಲ.ಮತ್ತು ಸಹಜ ಮತ್ತು ಸರಳ ಜೀವನ ಸಾಗಿಸುತ್ತೇನೆ.ಮತ್ತು ದೇಶದ ವಿಚಾರ ಬಂದಾಗ ನಾವು ಒಂದಾಗುತ್ತೇವೆ...ನನ್ನ ದೇಶ ನನ್ನದು... ನನ್ನನ್ನು ನಾನು ಪ್ರೀತಿಸಿಕೊಂಡಷ್ಟೇ ನನ್ನ ದೇಶವನ್ನು ಪ್ರೀತಿಸುತ್ತೇನೆ.ಎಂದು ತೀರ್ಮಾನಿಸಿ ಕಾರ್ಯಪ್ರವೃತ್ತರಾದ ದಿನವೇ ಸ್ವಾತಂತ್ರ ದಿನಾಚರಣೆಗೆ ಅರ್ಥ ಬರುತ್ತದೆ.ಏಕೆಂದರೆ ಗುರಿ ಮುಟ್ಟುವ ಮೊದಲೇ ದಾರಿ ತಪ್ಪಬಾರದು ಅಲ್ಲವೇ?!?!

ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ ವ್ಯತ್ಯಾಸವೇನು?೬೯ ವರ್ಷ ಸಾಧಿಸಿದ್ದೇನು? ನಮ್ಮ ಸ್ಥಿತಿಗೆ ಕಾರಣವೇನು?ಅದಕ್ಕೆ ಪರಿಹಾರವೇನು? ಅಂತ ತಿಳಿಯಲು ಈ ಬಾರಿಯ ಸಂಪದ ಸಾಲು ಪತ್ರಿಕೆಗೆ ಚೆಂದದಾರರಾಗಿ ಓದಿ.

"ಬದಲಾವಣೆ ಬರಲಿ.ಪರಿವರ್ತನೆ ತರಲಿ ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

be subscriber of our magazine....it
ನಿಮ್ಮದೇ ಪತ್ರಿಕೆಗೆ ಚಂದದಾರರಾಗಿ...
Account name: sampada saalu
vijayabank.sagara branch 577401
 Accountno 142901011003877
 IFSC code VIJB0001429
ಇದಕ್ಕೆ ಹಣ ಕಳುಹಿಸಿ...ಚಂದದಾರರಾಗಬಹುದು.
subscription details
1000/- fr 10 years
2500/- fr 25 years
5000/- fr life membershp
10000/- fr life membershp with free
advertisement

our adress
sampada saalu patrike
post box 32.sagara 577401
9448219347
u can send ur article to
sampavenki@gmail.com plz send it in nudi font


ಇವರು ನನ್ನೋರು!?! * ವೆಂಕಟೇಶ ಸಂಪ.



ಇವರು ನನ್ನೋರು!?!
* ವೆಂಕಟೇಶ ಸಂಪ.

ಹೊತ್ತು ಹೆತ್ತು ಸಾಕಿದವರು
ಹೊಟ್ಟೆ ತುಂಬ ಹಾಕಿದವರು
ಬದುಕು ಹೀಗೆ ಎಂದವರು
ಹಗಲು ರಾತ್ರಿ ಚಿಂತಿಸಿದವರು
ಇವರು ನನ್ನೋರು!

ಹೆಜ್ಜೆ ಇಡು ಎಂದೋರು
ಹೆಜ್ಜೆ ನೋಡಿ ನಕ್ಕೋರು
ಹೆಜ್ಜೆಯಲ್ಲಿ ಮುಳ್ಳು ಸುರಿದೋರು
ಕಾಣದಂತೆ ಕಲ್ಲು ಇಟ್ಟೋರು
ಇವರು ನನ್ನೋರು!

ನೆಡೆವ ದಾರೀಲಿ ಸಿಕ್ಕೋರು
ಸಿಕ್ಕು ಸಂತೋಷ ಕೊಟ್ಟೋರು
ಸಂತೋಷದ ನೆಪದಲ್ಲಿ ದುಃಖ ತಂದೋರು
ಇವನು ನಮ್ಮೋನು ಎಂದೋರು
ಇವರು ನನ್ನೋರು!

ಪ್ರೀತಿ ಕೊಡುವೆ ಎಂದೋರು
ಇದ್ದ ಪ್ರೀತಿ ಕಸಿದೋರು
ಕನಸು ಕಟ್ಟಿ ಹೋದೋರು
ಮನಸು ಬಿಚ್ಚಿ ಇಟ್ಟೋರು
ಇವರು ನನ್ನೋರು!

ಕತ್ತಲೆಯಲ್ಲಿ ಉಳಿದೋರು
ಬೆಳಕು ಹಚ್ಚಿ ನಿಂತೋರು
ಸಾವು ಮರೆಸಿ ಬದುಕ ನೆನಸಿ ಜಗವ ಉಳಿಸಿ ಬೆಳೆಸೋರು
ಇವರು ನನ್ನೋರು!

ಒಳಿತು ಕೆಡುಕು ಎರಡೂ ಬೇಕು
ಬದುಕು ಮುಖ್ಯ ಆಗಬೇಕು
ನಿಜದ ಪ್ರೀತಿ ಉಳಿಯಬೇಕು
ಮರುಭೂಮಿಯಲ್ಲೂ ಮಳೆ ಸುರಿಯಬೇಕು
ಇಂತ ಆಸೆ ಹೊತ್ತೋರು
ಸದಾ ನನ್ನೋರು.....
ಇವರೇ ನನ್ನೋರು!!!!!!

#ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

ಪ್ರಪಂಚದ ಪ್ರಸಿದ್ದ ಪಾಪ್ ಗಾಯಕ ಮೈಕಲ್ ಜಾಕ್ಸನ್ ಜಗತ್ತಿನಲ್ಲಿಯೇ ಅತ್ಯುನ್ನತ ಅವಾರ್ಡ್ ತೆಗೆದುಕೊಂಡ ಕ್ಷಣದಲ್ಲಿ ಆತ ಹೇಳಿದ ಮಾತು .
"ಈ ಚಿಕ್ಕ ತಗಡಿನ ಚೂರಿಗಾಗಿ ನನ್ನ ಬದುಕಿನ ಅದೆಷ್ಟೋ ರಜೆಯ ದಿನಗಳನ್ನು,ಸುಖದ ದಿನಗಳನ್ನು ಕಳೆದುಕೊಂಡೆನೋ ಗೊತ್ತಿಲ್ಲ.ನನಗೆ ಈ ಸಂಗೀತವೇ ಉಸಿರು..ಈ ಸಂಗೀತವೇ ಊಟ.ಪ್ರತಿಯೊಂದು ಕ್ಷಣವೂ ಸಂಗೀತವನ್ನು ಬಿಟ್ಟು ಬೇರೇನೂ ಚಿಂತಿಸಲೂ ಆಗಲಿಲ್ಲ."
ಈ ಮಾತು ನೆನಸಿಕೊಂಡರೆ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಬಿಟ್ಟರೆ ಬೇರೆ ಮಾರ್ಗ ಇಲ್ಲ ಎಂಬುದು ಅರಿವಾಗುತ್ತದೆ.

# ಓದಿ ಸಂಪದ ಸಾಲು

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

sampada saalu awareness


ಮೊನ್ನೆ ಯಾವುದೋ ಶೂಟಿಂಗ್ ನ ಕಾರಣಕ್ಕೆ ಕಾರು ತೆಗೆದುಕೊಂಡು ಮಲ್ಲೇಶ್ವರಂನಿಂದ ಹೊರಟಿದ್ದೆ.ಯಶವಂತಪುರದ ಸರ್ಕಲ್ ಹತ್ತಿರ ಒಂದು ಬದಿಯಲ್ಲಿ ನಾನಿದ್ದೆ,ವಾಹನಗಳು ಕಿಕ್ಕಿರಿದು ರಸ್ತೆಯಲ್ಲಿ ನಿಂತಿದ್ದವು.ಮುಂದೆಯೂ ಚಲಿಸಲಾರದ ಹಿಂದೆಯೂ ಹೋಗಲಾರದ ಸ್ತಿತಿ.ಪೋಲಿಸ್ ಪೇದೆಯೊಬ್ಬ ಸುಗಮ ಸಂಚಾರಕ್ಕೆ ಒದ್ದಾಡುತ್ತಿದ್ದ.ಹಿಂದಿನಿನಿದ ಜೋರಾಗಿ ಸೈರನ್ ಮಾಡುತ್ತಾ ಅಂಬುಲೆನ್ಸ್ ದಾರಿಗಾಗಿ ಹಾತೊರಿಯುತ್ತಿತ್ತು.ಆ ಸೈರನ್ ಕೇಳಿದೊಡನೆ ನನ್ನ ಎದೆಯಲ್ಲೂ ಬಡಿತ ಹೆಚ್ಚಾಯ್ತು.ಸಾಯುವ ಜೀವ ಬದುಕಲಿ ಎಂಬ ಆಸೆ ಹೆಚ್ಚಾಯ್ತು.ಪೋಲಿಸ್, ಅಂಬುಲೆನ್ಸ್ ಗೆ ದಾರಿ ಮಾಡಿ ಕೊಡುವ ಪ್ರಯತ್ನ ಮಾಡುತ್ತಿದ್ದು,ಅದರಲ್ಲಿ ಅಸಹಾಯಕನಾದಂತೆ ಕಾಣುತ್ತಿದ್ದ.ಅಲ್ಲಿದ್ದ ಬಹುತೇಕ ಜನ,ಅಂಬುಲೆನ್ಸ್ ಗೆ ದಾರಿ ಬಿಡುವ ಬದಲು ಸಿಕ್ಕ ಸ್ವಲ್ಪ ದಾರಿಯಲ್ಲಿ ತಾವು ನುಗ್ಗಿ ಹೋಗುವ ಪ್ರಯತ್ನದಲ್ಲಿದ್ದರು.ನನ್ನ ಕಾರು ಎಡ ಬಾಗದಲ್ಲಿ ಇದ್ದುದ್ದರಿಂದ ಅಲ್ಲೇ ನಿಲ್ಲಿಸಿ,ಪೋಲಿಸ್ ಗೆ ಸಹಾಯ ಮಾಡೋಣ ಅಂತ ತಿರ್ಮಾನಿಸಿ ಟ್ರಾಫಿಕ್ ಪೋಲಿಸ್ ಕೆಲಸ ಮಾಡಿದೆ.ಹತ್ತು ನಿಮಿಷದಲ್ಲಿ ಅಂಬುಲೆನ್ಸ್ ಸೈರನ್ ಮಾಡುತ್ತಾ ಮುಂದೆ ಹೋಯಿತು.ಅದರಲ್ಲಿದ್ದ ರೋಗಿಯ ಸಂಬಂದಿಕರಿರಬಹುದು.ಹೋಗುತ್ತಿರುವ ಅಂಬುಲೆನ್ಸ್ನಿಂದಲೇ ಕೈ ಮುಗಿದರು.ಅಂಬುಲೆನ್ಸ್ ದೂರ ಹೋದಂತೆ ಸೈರನ್ ಕಡಿಮೆ ಆದಂತೆ ಮನಸ್ಸು ನಿರಾಳವಾಗುತ್ತಿತ್ತು.ಪೋಲಿಸ್ ಕೂಡ ಕಣ್ಣಿನಲ್ಲೇ ಕೃತಜ್ಞತೆ ಅರ್ಪಿಸಿದ.ನನ್ನಪ್ಪಾಜಿ ಯಾವಾಗಲು ಹೇಳುತ್ತಿದ್ದ ಮಾತು ನೆನಪಿಗೆ ಬಂತು."ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲಿ ಆತ್ಮ ಸಂತೋಷವಿದೆ".ಎಂದದ್ದು.
ಥ್ಯಾಂಕ್ಸ್ ಅಪ್ಪ ಬದುಕನ್ನು ಕಲಿಸಿದ್ದಕ್ಕೆ.

ನಮಗೆ ಎಷ್ಟೇ ಗಡಿಬಿಡಿ ಇರಲಿ.ಅಂಬುಲೆನ್ಸ್,ಅಗ್ನಿಶಾಮಕದ ವಾಹನ ಬಂದಾಗ ದಯವಿಟ್ಟು ಅವರು ಮುಂದೆ ಚಲಿಸಲು ಅವಕಾಶ ಮಾಡಿಕೊಡಿ,ಸಾದ್ಯವಾದರೆ ಅವರಿಗೆ ಸಹಾಯ ಮಾಡಿ.
"ಹೋಗುವ ಜೀವ ಬದುಕಲಿ,ಆ ರೋಗಿಯ ಕುಟುಂಬದವರ ಆತಂಕ ಕಡಿಮೆ ಆಗಲಿ,".

# ಓದಿ ಸಂಪದ ಸಾಲು.
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."
ಆತ ತನ್ನ ಪಾಡಿಗೆ ತಾನು ನೆಡೆಯುತ್ತಾ ತನ್ನ ಕೆಲಸದಲ್ಲಿ ಮಗ್ನನಾಗಿ ಹೋಗುತ್ತಿದ್ದ..!!!!!!!!!.....

ಆತ ಹೋದ ದಾರಿಯಲ್ಲಿ ಬೆಳಕು ಮೂಡುತ್ತಾ ಸಾಗಿತು....!!!!!!!!!

ಯಾಕೆಂದರೆ.

ಆತನಲ್ಲಿ ಪಾಸಿಟೀವ್ ಆಲೋಚನೆ ಇತ್ತು.......

"ಪ್ರತಿಯೊಂದು ಆಲೋಚನೆಯಲ್ಲೂ ಬೇಕಿದೆ ಪಾಸಿಟೀವ್ ಥಿಂಕಿಂಗ್"

"ಬದಲಾವಣೆ ಬರಲಿ,ಪರಿವರ್ತನೆ ತರಲಿ,ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

ಪರೀಕ್ಷೆ ಪಾಸಾಗುವುದಷ್ಟೇ ವಿದ್ಯಾಭ್ಯಾಸವಲ್ಲ.ಸಾಧನೆಯ ಹಾದಿ ದೊಡ್ಡದಿದೆ.ಹುಟ್ಟಿದ ಮಗುವೊಂದು ದೊಡ್ಡದಾಗಿ ಬೆಳೆದು ಅಕ್ಷರಾಭ್ಯಾಸಕ್ಕೆ ಇಳಿದಾಗ,ಹಣದ ಥೈಲಿ ತುಂಬುವ ಉದ್ಯೋಗ ಹಿಡಿಯುವುದೊಂದನ್ನೇ ಬಯಸುತ್ತೇವೆ.ಅಂತಹ ಕೋರ್ಸ್ ಗಳನ್ನು ಹುಡುಕುತ್ತಾ ಕಾಲಕಳೆಯುತ್ತೇವೆ.ನಿಜವಾದ ಸಾಧನೆಗೆ ಇರುವ ಅವಕಾಶ ಮರೆಯಬಾರದು.ನೈಜ ಜ್ನಾನಾರ್ಜನೆ,ಕ್ರಿಯಾಶೀಲ ಮನೋಭಾವನೆ,ಹಣ ಗಳಿಕೆಯ ಜೊತೆ ವಿದ್ಯಾಭ್ಯಾಸ,ನೈಪುಣ್ಯತೆ,ಭಾರತೀಯ ಸಂಸ್ಕೃತಿಯ ಅಳವಡಿಕೆ,ಉದ್ಯಮಶೀಲತೆ,ವಿಜ್ನಾನ,ಅಧ್ಯಾತ್ಮ ಮುಂತಾದ ಪಾಸಿಟೀವ್ ಕಾರ್ಯಕ್ರಮ ಮಾಡುತ್ತಿದ್ದೇವೆ.ನಿಮ್ಮೆಲ್ಲರ ಸಹಕಾರ ಬೇಕು.ನೀವು ನಮ್ಮ ಸಂಪದ ಸಾಲು ಪತ್ರಿಕೆಗೆ ಆಗುವು ಚಿಕ್ಕ ಚಂದಾದಾರಿಕೆ ನಮ್ಮ ಈ ಎಲ್ಲಾ ಕಾರ್ಯಕ್ರಮಕ್ಕೆ ಸಹಕಾರವಾಗುತ್ತದೆ.ಇಂದೇ ಸಂಪದ ಸಾಲು ಪತ್ರಿಕೆಗೆ ಸದಸ್ಯರಾಗಿ.
#ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ". 

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

ಕೊಲೆ ಮಾಡಿದವ ಯಾರೇ ಆಗಿರಲಿ...ಆತನನ್ನು ಕ್ರಿಮಿನಲ್ ಎಂದೇ ನೋಡಬೇಕು....ಆತ ಹಿಂದು ಆಗಿರಲಿ...ಮುಸ್ಲಿಮ್ ಆಗಿರಲಿ....ಕ್ರಿಸ್ಚಿಯನ್ ಆಗಿರಲಿ.....ತಪ್ಪು ಯಾರು ಮಾಡಿದರೂ ತಪ್ಪು...ಸರಿಯಾದದ್ದನ್ನು ಯಾರು ಮಾಡಿದರೂ ಸರಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಯಾವಾಗ ಬರುತ್ತದೋ?!

ಕಂಡ ಕಂಡ ವಿಷಯದಲ್ಲಿರುವ ಮೀಸಲಾತಿ...ಜಾತಿ...ಧರ್ಮ ಎಂಬ ನಾಟಕ ನಿಲ್ಲುವುದು ಯಾವಾಗ?!

ಹೇಡಿಗಳನ್ನು ಹೇಡಿಗಳನ್ನಾಗಿ ನೋಡೋಣ...ಅಂತವರನ್ನು ಶಿಕ್ಷಿಸುವವರೆಗೆ ಹೋರಾಡೋಣ.....ಇಂತ ದೇಶದ್ರೋಹಿಗಳ ಹೆಸರಲ್ಲೂ "ಜಾತಿ ರಾಜಕಾರಣ" ಮಾಡುವವರಿದ್ದಾರೆ....ಅಂತವರಿಗೆ ಬುದ್ದಿ ಕಲಿಸಬೇಕಿದೆ... 

"ನಮಗೆ ಬೇಕಿರುವುದು ಪ್ರೀತಿ ತುಂಬಿದ ಆಡಳಿತವೇ ವಿನಃ,ಜಾತಿ ತುಂಬಿದ ರಾಜಕಾರಣವಲ್ಲ....."

# ಓದಿ ಸಂಪದ ಸಾಲು

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ". # ಓದಿ ಸಂಪದ ಸಾಲು

ಇವ್ರು ಯಾರ್ರಿ?! ನಮ್ಮ ದೇಶದಲ್ಲಿ ನಾವು ಪಂಚೆ ಉಡಬಾರದಂತೆ?!..ಚಪ್ಪಲಿ ಹಾಕಬಾರದಂತೆ!?

ಹೌದು....ಇದು ನಮ್ಮದೇ ಊರಿನ ಗಾಳಿ,ನೀರು,ಸಂಪತ್ತು ಎಲ್ಲಾ ಬಳಸುವ ಬಹುತೇಕ ಕ್ಲಬ್ ಗಳು ಪಂಚೆ ಉಟ್ಟವರಿಗೆ ಹಾಗು ಚಪ್ಪಲಿ ಹಾಕಿದವರಿಗೆ ಒಳಬಿಡುವುದಿಲ್ಲ.!?
ಲಕ್ಷಗಟ್ಟಲೆ ಹಣ ಕೊಟ್ಟು ಇದಕ್ಕೆ ಮೆಂಬರ್ ಕೂಡ ಆಗ್ತಾರೆ....ಇಂತಹ ಉಂಡ ಮನೆಗೆ ಕನ್ನ ಹಾಕೋರಿಗೆ ಏನು ಮಾಡ್ಬೆಕು ಹೇಳಿ?!
ಇನ್ನೊಂದು ದುರಂತ ಏನು ಗೊತ್ತಾ?!
ಬಹುರಾಷ್ಟ್ರಿಯ ಕಂಪನಿಯ ಒಡೆತನದ ಕಂಪನಿಗಳು ಮತ್ತು ಹೋಟೆಲ್ ಗಳಲ್ಲಿ ಕನ್ನಡ ಪತ್ರಿಕೆ ತೆಗೆದುಕೊಂಡು ಹೋಗುವಂತಿಲ್ಲ....ಅಂತೆ........

ದುಡಿಯೋಕೆ ನಮ್ಮ ನೆಲ ಜಲ ಗಾಳಿ ಬಳಸುವವರು,ಅದನ್ನು ಗೌರವಿಸುವುದನ್ನು ಇನ್ನಾದರು ಕಲಿಯಲಿ.....

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
# ಓದಿ ಸಂಪದ ಸಾಲು

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

"ನೀನು ದೊಡ್ಡವನಿರಬಹುದು.....ಆದರೆ ನಾನು ಸಣ್ಣವನಲ್ಲ".....ಎಂಬುದು ಸ್ವಾಭಿಮಾನದ ಸಂಕೇತವಾಗಬೇಕೇ ವಿನಃ ಅಹಂಕಾರವಾಗಬಾರದು....... 

ನಮ್ಮ ಪರಿಚಿತರು,ಸ್ನೇಹಿತರು,ಅಥವಾ ಸಮಾಜದ ಯಾವುದೋ ವ್ಯಕ್ತಿ ಹಣದಲ್ಲಿ ಮಾತ್ರ ದೊಡ್ಡ ವ್ಯಕ್ತಿ ಆಗಿದ್ದರೆ ಆತನ ಎದುರು ನಾವು ಅಸಹಾಯಕರಂತೆ ಕೂರಬಾರದು.

ಯಾವತ್ತೂ....ಯಾವ ಸಂಧರ್ಭದಲ್ಲೂ ಸ್ವಂತಿಕೆ ಬಿಡಬಾರದು........

# ಓದಿ ಸಂಪದ ಸಾಲು

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

ಕೊಲೆ ಮಾಡಿದವ ಯಾರೇ ಆಗಿರಲಿ...ಆತನನ್ನು ಕ್ರಿಮಿನಲ್ ಎಂದೇ ನೋಡಬೇಕು....ಆತ ಹಿಂದು ಆಗಿರಲಿ...ಮುಸ್ಲಿಮ್ ಆಗಿರಲಿ....ಕ್ರಿಸ್ಚಿಯನ್ ಆಗಿರಲಿ.....ತಪ್ಪು ಯಾರು ಮಾಡಿದರೂ ತಪ್ಪು...ಸರಿಯಾದದ್ದನ್ನು ಯಾರು ಮಾಡಿದರೂ ಸರಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಯಾವಾಗ ಬರುತ್ತದೋ?!

ಕಂಡ ಕಂಡ ವಿಷಯದಲ್ಲಿರುವ ಮೀಸಲಾತಿ...ಜಾತಿ...ಧರ್ಮ ಎಂಬ ನಾಟಕ ನಿಲ್ಲುವುದು ಯಾವಾಗ?!

ಹೇಡಿಗಳನ್ನು ಹೇಡಿಗಳನ್ನಾಗಿ ನೋಡೋಣ...ಅಂತವರನ್ನು ಶಿಕ್ಷಿಸುವವರೆಗೆ ಹೋರಾಡೋಣ.....ಇಂತ ದೇಶದ್ರೋಹಿಗಳ ಹೆಸರಲ್ಲೂ "ಜಾತಿ ರಾಜಕಾರಣ" ಮಾಡುವವರಿದ್ದಾರೆ....ಅಂತವರಿಗೆ ಬುದ್ದಿ ಕಲಿಸಬೇಕಿದೆ... 

"ನಮಗೆ ಬೇಕಿರುವುದು ಪ್ರೀತಿ ತುಂಬಿದ ಆಡಳಿತವೇ ವಿನಃ,ಜಾತಿ ತುಂಬಿದ ರಾಜಕಾರಣವಲ್ಲ....."

# ಓದಿ ಸಂಪದ ಸಾಲು

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

paper seller by venkatesha sampa

ನಾವು ಕೊಡೋ ನಾಲ್ಕು ರೂಪಾಯಿ ಇನ್ನೊಂದು ಬದುಕನ್ನು ನಿರ್ಮಿಸಬಲ್ಲದು.

ಬೆಳಗಿನ ಜಾವ!? ಬೆಂಗಳೂರಿನಿಂದ ರಾಜಹಂಸ ಬಸ್ಸಲ್ಲಿ ಸಾಗರಕ್ಕೆ ಬರುತ್ತಿದ್ದೆ..ಮುಂಚಿನ ದಿನದ ಕೆಲಸದೊತ್ತಡಕ್ಕೆ ಅನಿಸುತ್ತದೆ.ಬಸ್ ಹತ್ತಿದಕೂಡಲೇ ನಿದ್ದೆ ಆಕ್ರಮಿಸಿಬಿಟ್ಟಿತ್ತು.

ನಾ ನಿದ್ರೆಗಣ್ಣಿನಲ್ಲಿದ್ದೆ.ಯಾರೋ ಒಬ್ಬ ಹುಡುಗ ಬಂದು ಬಸ್ಸಲ್ಲಿದ್ದವರಿಗೆ "ಅಣ್ಣಾ ಪೇಪರ್ ತಗೊಳ್ಳಿ.ನಾ ಸ್ಕೂಲ್ ಗೆ ಹೋಗೊ ಹುಡುಗ.ನನಗೆ ಸಹಾಯ ಅಗತ್ತೆ..ಅಂತಿದ್ದ....ಬಸ್ಸಲ್ಲಿ ಕೂತಿದ್ದ ದೊಡ್ಡ ಮನುಷ್ಯನೊಬ್ಬ "ಏಯ್ ಬೆಳಿಗ್ಗೆ ಮುಂಚೆ ಬಿಕ್ಷೆ ಕೇಳ್ಬೇಡ.ಹೋಗಪ್ಪ."ಅಂತ ಗದರಿಸುತ್ತಿದ್ದ...ಆ ಹುಡುಗ ವಿಚಲಿತನಾಗದೇ ಹೇಳಿದ."ಅಣ್ಣಾ ನಾನು ದುಡಿಯುತ್ತಿದ್ದಿನಿ.ನಿಮಗೆ ಸಾಧ್ಯ ಆದ್ರೆ ಪೇಪರ್ ತಗೊಂಡು ತಗೊಳ್ಳಿ"ಹೇಳಿ ಮತ್ತೆ ಪೇಪರ್...ಪೇಪರ್ ಅಂದ.

ನನಗೆ ಹಳೆಯ ನೆನಪುಗಳು ಉಕ್ಕಿ ಬಂದವು.ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ಪೇಪರ್ ಹಂಚಿದ್ದು...ಬೆಳಿಗ್ಗೆ ಮುಂಚೆ ಪೇಪರ್ ಹಾಕುವಾಗ ನಾಯಿ ಅಟ್ಟಿಸಿಕೊಂಡು ಬಂದದ್ದು....ಎಲ್ಲವೂ ಒಂದು ಕ್ಷಣ ನೆನಪಾಯ್ತು....

ಆ ಬಸ್ಸಲ್ಲಿದ್ದ ಮಹಾನುಭಾವ,ಕಷ್ಟ ಪಟ್ಟು ದುಡಿಯುವವನಿಗೆ ಸಹಾಯ ಮಾಡೋದನ್ನ ಬಿಟ್ಟು ಬಿಕ್ಷೆ ಕೇಳ್ಬೇಡ ಅಂದಾಗಲೂ ಒಂದು ಕ್ಷಣ ನಮ್ಮ ಜನಗಳ ವರ್ತನೆ ಕಣ್ಣ ಮುಂದೆ ಬಂತು....
ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನ ಕ್ಕೆ ಹೋದಾಗ...ಪಾಸಿಟೀವ್ ಜರ್ನಲಿಸಂ ಗೆ ಸಪೋರ್ಟ್ ಮಾಡಿ ಅಂದಾಗ,ಕ್ರೈಮ್ ನ್ನು ವೈಭವೀಕರಿಸೋದಿಲ್ಲ ಎಂದಾಗಲೂ ಪತ್ರಿಕೆಗೆ ಮೆಂಬರ್ ಆಗದೆ ಏನೋ ಒಂದು ಕೊಂಕು ಮಾತಾಡಿ ಅಕ್ಷರಶಃ ಬಿಕ್ಷುಕರಂತೆ ನನ್ನನ್ನು ನೋಡಿದ್ದು ನೆನಪಾಯ್ತು......

ನಿದ್ರೆ ಹಾರಿ ಹೋಯ್ತು..ಆ ಪೇಪರ್ ಮಾರುವ ಹುಡುಗನನ್ನು ಕರೆದೆ..ಎನು ಪುಟ್ಟ ನಿನ್ನ ಹೆಸ್ರು ಅಂದೆ...ಅಣ್ಣಾ ನನ್ ಹೆಸ್ರು ರಮೇಶ ಅಂದ.ನಾಲ್ಕನೆ ಕ್ಲಾಸ್ ಓದ್ತಿದಿನಿ.ಅಪ್ಪ ಕೂಲಿ ಕೆಲ್ಸಕ್ಕೆ ಹೋಗ್ತಾರೆ.ದಿನ ಬೆಳ್ಗೆ 3 ಗಂಟೆಯಿಂದ 7 ಗಂಟೆವರೆಗೆ ಪೇಪರ್ ಮಾರುತ್ತೀನಿ.ನೂರು ರೂಪಾಯಿ ಸಿಗತ್ತೆ.ಅಮೇಲೆ ಶಾಲೆಗೆ ಹೋಗ್ತಿನಿ.ಸಂಜೆ ಒಂದು ಅಂಗಡಿಗೆ ಹೋಗಿ ಸಾಮಾನು ಕಟ್ಟುತ್ತೀನಿ..ಐವತ್ತು ರೂಪಾಯಿ ಕೊಡ್ತಾರೆ ಅಂದ.....

ಆತನ ಬಗ್ಗೆ ಹೆಮ್ಮೆ ಅನ್ನಿಸ್ತು.ಎಲ್ಲಾ ಪೇಪರ್ ಒಂದೊಂದು ಕೊಡು ಅಂದೆ.50 ರೂಪಾಯಿ ಕೊಟ್ಟೆ.ಚಿಲ್ದ್ರೆ ನೀನೆ ಇಟ್ಕೊ ಅಂದೆ...ಆತ ಹೇಳಿದ್ದು "ಅಣ್ಣಾ ನಾ ದುಡಿದ ಹಣ ಮಾತ್ರ ಸಾಕು ನಂಗೆ"ಅಂತ....
ಇನ್ನೂ ಹೆಮ್ಮೆ ಅನ್ನಿಸ್ತು.ನನ್ನ ಫೋನ್ ನಂಬರ್ ಕೊಟ್ಟೆ.ಎನಾದ್ರು ಸಹಾಯ ಬೇಕಾದ್ರೆ ಯಾವಾಗ ಬೇಕಾದ್ರು ಕಾಲ್ ಮಾಡು ಹೇಳ್ದೆ....

ಆತ ಹೊರಟು ಹೋದ...ಬಸ್ ಹೊರಡಲು ಅನುವಾಯ್ತು.....ಬಿಕ್ಷೆ ಬೇಡು ಅಂದ ಮಹಾನುಭಾವನಿಗೆ ಪಶ್ಚಾತ್ತಾಪ ಮೂಡಿತ್ತು.ಆತ ಕಂಡಕ್ಟರ್ ಗೆ ಒಂದ್ನಿಷ ಅಂದವನೇ ಆ ಹುಡುಗನನ್ನು ಹುಡುಕಿ ಎಲ್ಲಾ ಪೇಪರನ್ನು ಒಂದೊಂದು ತಗೊಂಡು ಬಂದವನೇ ನನ್ನ ಪಕ್ಕ ಕುಳಿತ....

ನನ್ನ ನೋಡುತ್ತಾ....ಪ್ಲೀಸ್ ನನ್ನನ್ನ ಕ್ಷಮಿಸಿ.....ಒಬ್ಬ ದುಡಿಯುವ ಹುಡುಗನ್ನು ಅವಮಾನಿಸಿದೆ.....ಅದಕ್ಕೀಗ ಪಶ್ಚಾತ್ತಾಪ ಆಗ್ತಿದೆ...ಇನ್ಯಾವತ್ತು ಈ ತರ ದುಡಿಯೋ ಮಂದಿಗಳನ್ನು ಅಗೌರವಿಸೋದಿಲ್ಲ...ಅಂದ......ನೀವೇನು ಮಾಡ್ತಿರಾ ಕೇಳಿದ...ನಾನು ಸಂಪದ ಸಾಲು ಪತ್ರಿಕೆಯವನು ಅಂದೆ.....

ಸಾರ್ ನಿಮ್ಮ ಪತ್ರಿಕೆ ಯಾವಾಗಲು ಓದ್ತೀನಿ....ಪತ್ರಿಕೆ ಬ್ಲಾಕ್ ಎಂಡ್ ವೈಟ್ ಆದ್ರು ಚೆನ್ನಾಗಿದೆ...ಆದ್ರೆ ಕಲರ್ ಮಾಡಿ ಸಾರ್ ಅಂದ.

ನಾಲ್ಕು ವರ್ಷದಿಂದ ನಿಮ್ಮ ಪತ್ರಿಕೆ ನಮ್ಮನೆಗೆ ಬರ್ತಿದೆ.ಆದ್ರೆ ನಾನು ಒಂದೇ ವರ್ಷದ ದುಡ್ದು ಕೊಟ್ಟಿದ್ದು...ಬಸ್ಸಲ್ಲಿ ದುಡ್ಡು ಕೊಟ್ಟೆ ಅನ್ಕೋಬೇಡಿ...ತಗೊಳ್ಳಿ ಅಂತ ಹತ್ತು ವರ್ಷದ ಮೆಂಬರ್ ಶಿಪ್ ತಗೊಂಡ....
ಆತನೇ ಹೇಳಿದ....ದುಡಿಯುವವರನ್ನು ಗೌರವಿಸಿ ಚಿಕ್ಕದಾದ ಬೆಂಬಲ ನೀಡಿದ್ರೆ ಎಷ್ಟು ಖುಶಿ ಅಲ್ವಾ? ಅಂದ...

ನಾನು ಹೇಳಿದೆ."ಸಪೋರ್ಟ್ ಮಾಡದಿದ್ದರೂ ಬೇಸರವಿಲ್ಲ.ಅವಮಾನಿಸಬಾರದು...ಈ ಹುಡುಗನ ಕತೆ ನೋಡಿ..ನಾವು ಕೊಡೋ ನಾಲ್ಕು ರುಪಾಯಿಯಲ್ಲಿ ಆತ ಬಿಲ್ಡಿಂಗ್ ಕಟ್ಟಲ್ಲ...ಆದ್ರೆ ಬದುಕನ್ನು ಕಟ್ಟಿ ಕೊಳ್ತಾನೆ....ಅಂದೆ....

ಆತನ ಮುಖದಲ್ಲಿ ಪರಿವರ್ತನೆಯ ನಗು ಮೂಡಿತು.....

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

be subscriber of our magazine....it
will suport to me
ನಿಮ್ಮದೇ ಪತ್ರಿಕೆಗೆ ಚಂದದಾರರಾಗಿ...
account name sampada saalu.vijaya
bank.sagara branch 577401 account
no 142901011003877 IFSC code
VIJB0001429 ಇದಕ್ಕೆ ಹಣ ಕಳುಹಿಸಿ...
ಚಂದದಾರರಾಗಬಹುದು.
subscription details
1000/- fr 10 years
2500/- fr 25 years
5000/- fr life membershp
10000/- fr life membershp with free
advertisement
our adress
sampada saalu patrike
post box 32.sagara 577401 u can send ur article to
sampavenki@gmail.com plz send it in nudi font

"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ"

ಲಕ್ಷ ಲಕ್ಷ ಡೊನೇಷನ್ ಕೊಟ್ಟು ಪ್ರೈವೇಟ್ ಸ್ಕೂಲ್ ಗೆ ಸೇರಿಸುವವರು,ನಮ್ಮ ಮಕ್ಕಳು ಇಂಗ್ಲಿಷ್ ಮಾತಾಡಿದ್ರೆ ಸಾಕು ಎನ್ನುವವರು,ಕಂಪ್ಯೂಟರ್ ಕಲಿತರೆ ಸರ್ವಸ್ವ ಎನ್ನುವವರು,
ಬದುಕು ಕಲಿಯದಿದ್ರೂ ಸಂಬಳ ತರುವ ಫ್ಯಾಕ್ಟರಿ ಆದ್ರೆ ಸಾಕು ತನ್ನ ಮಕ್ಕಳು ಅಂದುಕೊಳ್ಳೋರು....ಜೀವನ ಅಂದ್ರೆ ಬರೀ ದುಡ್ಡು ಅಂದುಕೊಂಡೋರು.......ಇದನ್ನು ಓದಲೇಬೇಕು......

"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ"

ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನದ ನಿಮಿತ್ತ ಸಾಗರದಿಂದ ಅನಂತಪುರಕ್ಕೆ ಕಾರಲ್ಲಿ ಹೊರಟಿದ್ದೆ.ಯಾರನ್ನು ಭೇಟಿಯಾಗಲಿ?!ಹೇಗೆ ಸದಸ್ಯತ್ವ ಪಡೆದುಕೊಳ್ಳೋದು?!ಅನ್ನೋ ಆಲೋಚನೆಯಲ್ಲಿದ್ದೆ.ಕಾರು ಚಲಿಸುತ್ತಿತ್ತು.ಯಾರೋ ಪುಟ್ಟ ಹುಡುಗಿ ಅಣ್ಣಾ ಹೂವು....ಅಣ್ಣಾ ಹೂವು....ಅಂತ ಕೂಗಿದಳು....ನಾನು ಪರಿವೆಯೇ ಇಲ್ಲದೆ ಮುಂದೆ ಹೋದೆ......

ಅರ್ದ ಕಿಲೋಮಿಟರ್ ಹೋದ ನನಗೆ ಅಪರಾಧಿ ಪ್ರಜ್ನೆ ಕಾಡತೊಡಗಿತು.ಕಾರನ್ನು ವಾಪಸ್ಸು ತಿರುಗಿಸಿದೆ.!

ಮತ್ತೆ ಅದೇ ಹುಡುಗಿ....ಅಣ್ಣಾ ಹೂವು.....ಅಂದಳು...
ಹೇಯ್ ಪುಟ ಏನು ಹೆಸ್ರು?ಏನು ಓದ್ತಿದಿಯಾ?ಕೇಳಿದೆ....

ನಾನು ವಿದ್ಯಾ ಅಂತ.....ಆರನೇ ಕ್ಲಾಸು ಓದ್ತಿದಿನಿ....ಇಲ್ಲೇ ಸರ್ಕಾರಿ ಸ್ಕೂಲಲ್ಲಿ..ಅಂದ್ಲು.

ನಂಗೆ ಖುಶಿ ಆಯ್ತು...ಹೂವು ಎಲ್ಲಿಂದ ತರ್ತಿಯಾ?!ಯಾವಾಗ ಇದನ್ನ ಮಾಲೆ ಮಾಡ್ತಿಯಾ?ಅಂತೆಲ್ಲಾ ಕೇಳ್ದೆ....

ಇವನ್ಯಾಕಪ್ಪ ತಲೆ ತಿಂತಾನಪ್ಪ?ಅನ್ಕೋತಾಳೆನೋ ಅನ್ಕೊಂಡೆ...ಹಾಗಾಗಲಿಲ್ಲ...ಆಕೆ ಖುಶಿಂದ ಹೇಳಿದ್ಲು....
"ಅಣ್ಣಾ ನಾನೇ ಅಪ್ಪ ನ ಹತ್ರ ಏರಿ ಮಾಡ್ಸಿಕೊಂಡು ಹೂವು ಬೆಳ್ದಿದೀನಿ.ಬೆಳ್ಗೆ ಎದ್ದು ಅರ್ಧ ಗಂಟೆ ಈ ಹೂವಿನ ಕೆಲ್ಸ ಮಾಡ್ತಿನಿ.ಮದ್ಯಾನ್ಹ ಬಂದ ಕೂಡ್ಲೇ ಮಾಲೆ ರೆಡಿ ಮಾಡ್ತೀನಿ...ದಿನಕ್ಕೊಂದು ಐವತ್ತು ರೂಪಾಯಿ ಸಿಗತ್ತೆ....ನನ್ನ ಸ್ಕೂಲ್ ಗೆ ಬೇಕಾದ ಹಣ ನಾನೇ ದುಡ್ಕೋತೀನಿ ಅಂತ ಹೆಮ್ಮೆಯಿಂದ ಹೇಳಿದ್ಲು.....

ಒಂದು ಕ್ಷಣ...

ನಾನು ಹೈಸ್ಕೂಲ್ ಗೆ ಹೋಗುವಾಗ ಅಪ್ಪ ಎಲ್ಲಿಂದಲೋ ತಂದ ಜೇನುತುಪ್ಪನ ನಮ್ಮ ಮೇಸ್ಟ್ರಿಗೇ ಮಾರಿ ಆ ವರ್ಷದ ಸ್ಕೂಲ್ ಖರ್ಚು ನೊಡ್ಕಂಡಿದ್ದು ನೆನಪಾಯ್ತು....

ಆ ಹುಡ್ಗಿ ಹೇಳಿದ್ಲು....ಅಣ್ಣಾ ಕತೆ ಕೇಳಿದ್ರಿ....ಹೂವು ತಗೊಳ್ಳಿ ಅಂದ್ಲು.....ಅಷ್ಟು ಹೂವು ತಗೊಂಡು ನನ್ನ ಕಾರಲ್ಲಿ ಇದ್ದ ಸಂಪದ ಸಾಲು ಪುಸ್ತಕದ ರಾಶಿ ಮೇಲಿಟ್ಟೆ....

ನಮ್ಮ ಪತ್ರಿಕೆಯ ಒಂದಷ್ಟು ಸಂಚಿಕೆಯನ್ನು ಆ ಹುಡ್ಗಿಗೆ ಕೊಟ್ಟೆ.ಇದನ್ನು ಓದು ಅಂದೆ.ಆಕೆ ಹೇಳಿದ್ಲು..".ಅಣ್ಣಾ ,ಜೋಗ ನೋಡೋಕೆ ಅಂತ ತುಂಬಾ ಪ್ರವಾಸಿಗರು ಹೋಗ್ತಾರೆ..ಸಂಜೆ ವರೆಗೆ ಕೂತು ಇದನ್ನು ಮಾರಿ ಹೋಗ್ತೀನಿ...ಕೆಲವೊಬ್ರು ನನ್ನನ್ನು ನೋಡಿ ಹಿಯಾಳಿಸ್ತಾ....ಹೋಯ್ ಅಂತ ಕೂಗ್ತಾ ಹೋಗ್ತಾರೆ....ಕೆಲವೊಬ್ರು ಹೂವು ತಗೊಂಡು ಇನ್ನು ಸ್ವಲ್ಪ ಕಡಿಮೆಗೆ ಕೊಡಮ್ಮಾ ಅಂತಾ ಚೌಕಾಶಿ ಮಾಡ್ತಾರೆ....ಹೀಗೆ ಎಲ್ಲಾ ತರದವರು ಕಾಣ್ತಾರೆ."... ಖುಶಿ ಆಗತ್ತೆ..

"ನಾನು ದೊಡ್ಡವಳಾಗಿ ಈ ತರ ಕಾರಲ್ಲಿ ಬಂದು ಶಾಲೆ ಹುಡುಗರು..ವಯಸ್ಸಾದ ಹೆಂಗಸರು...ಅಂಗವಿಕಲರು ಈ ತರ ಹೂವು ಮಾರ್ತಾ ಇದ್ರೆ ಅಷ್ಟೂ ತಗೋಳ್ತೀನಿ.......ಅಣ್ಣಾ."ಅಂದ್ಲು...

ಅರಿವಿಲ್ಲದೇ ನನ್ನ ಕಣ್ಣಿಂದ ನೀರು ಬಿದ್ದಿತ್ತು.....

ಮತ್ತೆ ಕಾರು ತಿರುಗಿಸಿ ಅಭಿಯಾನಕ್ಕೆ ಹೊರಟೆ...ನಾನು ಕಣ್ಣಿಗೆ ಕಾಣುವಷ್ಟು ದೂರ ಹೋಗುವವರೆಗೂ " ಟಾ ಟಾ "ಮಾಡುತ್ತಿದ್ದಳು .ಆ ಹುಡುಗಿ .....ಮತ್ತು ಆ ಹುಡುಗಿಯ "ಟಾ ಟಾ" ದಲ್ಲೂ ತನ್ನ ದುಡಿಮೆಯ ಜೊತೆಗಿನ ಕಲಿಕೆಯ ಬಗೆಗಿನ ಹೆಮ್ಮೆ ಎದ್ದು ಕಾಣುತ್ತಿತ್ತು...!......

.ಮನಸ್ಸಿಗೀಗ ನಿರಾಳ......

"ಬೇಕು ಕಲಿಕೆಯ ಜೊತೆ ಗಳಿಕೆ"

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು
 — 

deepa hacchOna

ಒಬ್ಬ.....

ಕತ್ತಲೆಯನ್ನು ಓಡಿಸಬೇಕು.....ಕತ್ತಲೆಯನ್ನು ಓಡಿಸುತ್ತೇನೆ........ಕತ್ತಲೆ ಇದ್ದರೆ ಕಷ್ಟ ಅಂತ ಜೀವನವಿಡೀ ಬಾಷಣ ಮಾಡುತ್ತಿದ್ದ?!

ಮತ್ತೊಬ್ಬ......

ಎನೂ ಮಾತಾಡಲಿಲ್ಲ.......ಸುಮ್ಮನೆ ಒಂದು ದೀಪ ಹಚ್ಚಿದ..........!?

ಅದು ಸಾವಿರಾರು ದೀಪವಾಯಿತು..........!

ಕತ್ತಲೆ ಗೊತ್ತಿಲ್ಲದಂತೆ ಓಡಿ ಹೋಯಿತು.....

ನಮ್ಮ ದೇಶದಲ್ಲಿ ನೆಡೆಯುತ್ತಿರುವ ದುರಂತ ಏನು ಗೊತ್ತಾ?

ಬರೀ ಬಾಷಣಗಳು.ಮಾತೆತ್ತಿದರೆ ಹೋರಾಟ ಅಂತಾರೆ....ಭ್ರಷ್ಟಾಚಾರ ನಿರ್ಮೂಲನೆ ಅಂತ ಕೂಗಾಡ್ತಾರೆ....

ಆದರೆ ಈ ಭ್ರಷ್ಟಾಚಾರ ನಿರ್ಮೂಲನೆ ಅನ್ನೋ ಬದಲು ಪ್ರಾಮಾಣಿಕತೆಯ ಆಹ್ವಾನ ಅಂದಿದ್ರೆ ಬಹುಶಃ ಪಾಸಿಟೀವ್ ಆದ ಮನಸ್ಥಿತಿ ನಿರ್ಮಾಣ ಆಗುತ್ತಿತ್ತು.....!

ಬದಲಾವಣೆಗೆ ಬೇಕಿರುವುದು ಬಾಷಣವಲ್ಲ....ಸಹಜವಾಗಿ ಆಲೋಚಿಸುವ ಪರಿವರ್ತನೆಗೆ ಒಪ್ಪಿಕೊಳ್ಳುವ ಮನಸ್ಥಿತಿ ಬೇಕು...

"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?! *ವೆಂಕಟೇಶ ಸಂಪ

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?!
*ವೆಂಕಟೇಶ ಸಂಪ

ಮೈಸೂರಿನಲ್ಲಿ ಬಿಬಿಎಂ ಓದುತ್ತಿದ್ದ ಸಂದರ್ಭ!ನಮ್ಮ ಮಹಾರಾಜ ಕಾಲೇಜು ಬೇಗ ಮುಗಿಯುತ್ತಿತ್ತು.ಮದ್ಯಾನ್ಹ ಮೂರು ಗಂಟೆಯ ನಂತರ ಸಾಕಷ್ಟು ಸಮಯವಿರುತ್ತಿತ್ತು.ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವವನೊಬ್ಬನಿಗೆ ಪಾರ್ಟ್ ಟೈಮ್ ಸಹಾಯ ಮಾಡುತ್ತಿದ್ದೆ.ಅದಕ್ಕೆ ಪ್ರತಿಯಾಗಿ ಆತ ನಂಗೆ ಓದಲು ಪುಸ್ತಕ ಕೊಡುತ್ತಿದ್ದ.ಸಂಜೆ ಹೊತ್ತಿಗೆ ಬಿಸಿ ಬಿಸಿ ಬೋಂಡ ಮತ್ತು ಕಾಫಿಯನ್ನು ಕೊಡಿಸುತ್ತಿದ್ದ.ಹೀಗೆ ಸಂಜೆಯವರೆಗೂ ಒಂದು ರೀತಿಯಲ್ಲಿ ಸರಸ್ವತಿ ಪುತ್ರನಾಗುವ ಅವಕಾಶ ನೀಡುತ್ತಿದ್ದ ಆತನ ಮೇಲೆ ಒಂತರಾ ಗೌರವ ಮೂಡಿತ್ತು.....!

ಒಂದು ದಿನ......! ಹೀಗೆ ಪುಸ್ತಕಗಳ ಜೊತೆ ವ್ಯಾಪಾರ ವ್ಯವಹಾರ ಮುಗಿಸಿ ಸುಮ್ಮನೆ ಸಿಟಿ ರೌಂಡ್ಸ್ ಹೊಡೆಯೋಣ ಅಂತ ಏಕಾಂಗಿಯಾಗಿ ಪೇಟೆ ಸುತ್ತಲು ಶುರು ಮಾಡಿದೆ....ಅಹಾ.....ಅದೆಷ್ಟು ವೈಯ್ಯಾರ....ಅದೆಷ್ಟು ಬಿನ್ನಾಣ....ಈ.ದೇವರಾಜುಅರಸು ರಸ್ತೆ!? ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣೊ ಈ ಮೈಸೂರು....ಈ ರಸ್ತೆಯಲ್ಲಿ ಮಾತ್ರ ಒಂತರಾ ವಿಭಿನ್ನವಾಗಿತ್ತು...ಸ್ವಲ್ಪ ಹೈಫೈ ಟಚ್ ಹೊಂದಿದ್ದ ಈ ರಸ್ತೆಯ ತುಂಬಾ ವ್ಯಾಪರಸ್ತರದ್ದೇ ಕಾರುಬಾರು?!ಎಲ್ಲಿ ನೋಡಿದರಲ್ಲಿ ಬರೀ ಕನ್ನಡಿಯೊಳಗಿನ ಗಂಟುಗಳೇ ಇದ್ದವು..ಆ ಕೈಗೆಟುಕದ ಗಾಜಿನ ಒಳಗೆ ಗೊಂಬೆಗಳು.....ಅದರ ಜೊತೆ ಬಟ್ಟೆಗಳ ಬರದ ಮಾರಾಟ.....ಅಲ್ಲಲ್ಲಿ ನಿಲ್ಲಿಸಿದ ಕಾರುಗಳು....ಮತ್ತೊಂದಿಷ್ಟು ಬೈಕುಗಳು..ಇಡೀ ರಸ್ತೆಗೆ ಒಂದೇ ಮರ!..ಪ್ರತಿಯೊಬ್ಬರು ತಮ್ಮ ಅಂಗಡಿಯ ಸ್ವಚ್ಚವಾಗಿರಿಸಿಕೊಳ್ಳುವ ಬರದಲ್ಲಿ ರಸ್ತೆಗೆ ಕಸ ಎಸೆದ ಮಂದಿ....ಶೋಕಿಯೇ ಶ್ರೀಮಂತಿಕೆ ಅನಿಸಿಕೊಂಡು ಖರೀದಿಗೆ ಬಂದ ಜನಗಳು....ಹೀಗೆ ನೋಡುತ್ತಾ ಮುಂದೆ ಸಾಗಿದೆ!.....

ಹಾಗೆ ಸಂದಿಗಳ ಒಳಹೊಕ್ಕಾಗ ಅಲ್ಲೇ ಇಕ್ಕೆಲಗಳಲ್ಲೆ ಚಿಕ್ಕ ಚಿಕ್ಕ ಗುಡಿಸಲು ಇತ್ತು....ಅದನ್ನೆಲ್ಲಾ ನೋಡುತ್ತಾ ತಣ್ಣನೆಯ ಗಾಳಿ ಸವಿಯುತ್ತಾ ದಾರಿಯುದ್ದಕ್ಕೂ ಕಂಡ ಕಂಡದ್ದನ್ನೆಲ್ಲಾ ನೋಡುತ್ತಾ...ರಸ್ತೆಯ ಮದ್ಯದಲ್ಲಿ ಅಪರೂಪಕ್ಕೆ ಕಾಣುವ ಕಾಲೇಜಿಗೆ ಹೋಗುವರಂತೆ ಕಾಣುವ ಬಣ್ಣದ ಚಿಟ್ಟೆಗಳನ್ನು ಗಮನಿಸುತ್ತಾ.....ಅವರ ಸೌಂದರ್ಯಕ್ಕೆ ನನಗೆ ನಾನೇ ಗುನುಗುತ್ತಾ........ಸುತ್ತಾಡುತ್ತಲೇ ಸುಮಾರು ಸಮಯ ಕಾಲ ಕಳೆದೆ.......!?

ರಾತ್ರಿ ಹೊತ್ತು ಬಾಯಿ ಚಪಲ....ರಸ್ತೆ ಬದಿಯ ಪಾನಿಪುರಿ ಅಂದ್ರೆ ಬಾಳ ಪ್ರೀತಿ....ಗೋಲುಗುಪ್ಪ ಮಾರುತ್ತಿದ್ದವನನ್ನು ನೋಡಿದ ನನಗೆ ಅಪರೂಪಕ್ಕೆ ಪರಿಚಿತ ಸಿಕ್ಕಾಗ ಆಗ ಖುಷಿ ಆಯ್ತು...ಐವತ್ತು ಪೈಸೆಗೆ ಒಂದು ಪೂರಿ....ಐದು ರೂಪಾಯಿಗೆ ಹತ್ತು ಪೂರಿ ಕೊಡುವವನು.....12 ಪೂರಿ ಕೊಟ್ಟ.....ಮಳೆ ಬರತ್ತೆ....ಅದ್ಕೆ ಕ್ಲೋಸ್ ಮಾಡ್ತೀನಿ ಅಂದ......ಸರಿ ಮನಸ್ಸಲ್ಲೊಂದು ತ್ಯಾಂಕ್ಸ್ ಅಂದ್ಕೊಂಡು ಅಲ್ಲಿಂದ ಮತ್ತೆ ಸಯ್ಯಾಜಿ ರಾವ್ ರಸ್ತೆ ಸೇರಿದೆ...ಮಳೆ ಶುರುವಾತು....!
..ಕೆ ಆರ್ ಸರ್ಕಲ್ ಸೇರಲು ಇನ್ನು ಹತ್ತು ನಿಮಿಷ ನೆಡೆಯಬೇಕಿತ್ತು...ತುಂತುರು ಮಳೆಯಲ್ಲಿ ತಲೆ ಮೇಲೆ ಕರ್ಚೀಫ್ ಹಕ್ಕೊಂಡು ನಿದಾನ ನೆಡೆದು ಬಂದೆ....ಕೆ ಆರ್ ಸರ್ಕಲ್ ಹತ್ತಿರದ ದೊಡ್ಡ ಗಡಿಯಾರ ಹತ್ತು ಗಂಟೆ ತೋರಿಸುತ್ತಿತ್ತು...!

ಆ ರಸ್ತೆಯ ಬದಿಯಲ್ಲೊಬ್ಬ ನಿಂತು ಎನೋ ಹುಡುಕುತ್ತಿದ್ದ!ಚಿಟಿ ಚಿಟಿ ಮಳೆ...ನಾನಿದ್ದ ತಾತಯ್ಯ ಅನಾಥಾಲಯ ಹಾಸ್ಟೆಲ್ ಗೆ ಸಂಜೆ ಏಳು ಮುಕ್ಕಾಲು ಒಳಗೆ ಹೋಗಬೇಕಿತ್ತು....ವಾರ್ಡನ್ ಗೆ ಗೊತ್ತಾಗದೆ ಒಳಗೆ ಹೋಗಲು ಮನಸಿನೊಳಗೆ ಪ್ಲಾನ್ ಮಾಡುತ್ತಾ ಹೋಗುತ್ತಿದ್ದ ನನಗೆ ಏನೋ ಹುಡುಕುವ ಈ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕನಿಸಲಿಲ್ಲ... ರಸ್ತೆ ದಾಟುವ ಹೊತ್ತಿಗೆ ಆತ ಹೋಯ್ ಹೋಯ್ ಯಾರೀದಿರಾ?!ಅಂತಾ ಕೂಗಾಡಿದ..!

ತತ್ತೆರಿಕೆ ಯಾಕಪ್ಪಾ ಈತ ಕರಿತಾವ್ನೆ....ಯಾರದ್ರು ಕುಡುಕ ಇರ್ಬಹುದು ಅಂತ ಮತ್ತೆ ತಿರುಗಿ ಹೊರಟೆ...ಆತ ಮತ್ತೆ ಕೂಗಿದ....ಅಣ್ಣಾ ಯಾರದ್ರೂ ಇದಿರಾ?ಆ ಕಡೆ ದಾಟಸ್ತಿರಾ?!... ಕೇಳಿದ....

ಸರಕ್ಕೆಂದು ಓಡಿ ಬಂದೆ...ಆತನ ಕೈ ಹಿಡಿದು ದಾಟಿಸಿದೆ...ಹಾಳದ್ದು ಕಂಡ ಕಂಡವರ ಬಗ್ಗೆ ತಿಳಿದುಕೊಳ್ಳುವ ಕುತೋಹಲ....ಸಾರ್ ಯಾವ್ದು ನಿಮ್ಮೂರು?ಎನ್ಮಾಡ್ತೀರಿ?ಹುಟ್ಟಿನಿಂದಲೇ ಕಣ್ಣು ಕಾಣಲ್ವಾ?ಹೀಗೆ ಪ್ರಶ್ನೆ ಕೇಳಿದೆ....

ಆತನಿಗೆ ಏನನ್ನಿಸಿತೋ ಏನೋ....ಸಾರ್ ನನ್ನನ್ನು ಆ ಹೂವಿನ ಮಾರ್ಕೆಟ್ ಹತ್ರ ಬಿಡ್ತಿರಾ?ಅಂದ..ಸರಿ ಅಂದೆ..ಹೊರಟೆ...ಆತ ತನ್ನ ಕತೆ ಶುರು ಮಾಡಿದ....!

ನನ್ನೂರು ಪಿರಿಯಾ ಪಟ್ಟಣದ ಹತ್ರ ಒಂದು ಹಳ್ಳಿ...ಅಲ್ಲೆ ಓದಿದ್ದು.ನಂಗೆ ತಿಳುವಳಿಕೆ ಬರೋದ್ರೊಳಗೆ ಅಪ್ಪ ಅಮ್ಮ ಇರ್ಲಿಲ್ಲ...ಏಳನೆ ಕ್ಲಾಸ್ ಮುಗಿಯೋ ಹೊತ್ತಿಗೆ ಕಣ್ಣುಗಳು ಮಂಜಾಗತೊಡಗಿತು...ಇದ್ದಕ್ಕಿದ್ದಂತೆ ಕೆಲವೇ ದಿನಗಳಲ್ಲಿ ಕಣ್ಣು ಪೂರ್ತಿಯಾಗಿ ಕಾಣದಾಯಿತು....!

ಅಶಕ್ತನಾದವನನ್ನು ಯಾರು ನೊಡ್ಕೋತಾರೆ?!ಆಸ್ಪತ್ರೆಗೆ ಕರ್ಕೋಂಡು ಹೋಗೋ ನೆಪ ಮಾಡ್ಕೊಂಡು ನಮ್ಮಣ್ಣ ಮೈಸೂರಿನ ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋದವನು ಎಲ್ಲಿ ಹೋದನೋ ಗೊತ್ತಿಲ್ಲ....ಇಲ್ಲೊಬ್ಬ ಹೂವು ಹಣ್ಣು ಮಾರುತ್ತಿದ್ದ.ಆತನೇ ನನ್ನನ್ನು ತನ್ನ ಜೊತೆ ಇಟ್ಕೊಂಡ.ಆತನ ಕೆಲ್ಸಕ್ಕೆ ನನ್ನ ಕೈಲಾದ ಸಹಾಯ ಮಾಡ್ತಿನಿ.ಆತ ನಂಗೊಂದು ಜೀವನ ಕೊಟ್ಟಿದ್ದಾರೆ..ಕೆ ಆರ್ ಆಸ್ಪತ್ರೆಗೆ ಹೋಗ್ಬಂದೆ..ಕಣ್ಣು ಬರಲ್ಲ ಅಂದ್ರು.ಆದ್ರೆ ದೊಡ್ಡ ಆಸ್ಪತ್ರೆಗೆಲ್ಲಾ ಹೋಗೋ ಶಕ್ತಿ ಇಲ್ಲ...ಹುಟ್ಟು ಕುರುಡ ಆಗಿದ್ರೆ ಬೇಸರವಿರ್ಲಿಲ್ಲ.ಆದ್ರೆ ಅಂದು ಒಂದಷ್ಟು ಜಗತ್ತನ್ನು ನೋಡಿದ ನನಗೀಗ ಜಗತ್ತೇ ಕತ್ತಲು!

ಅಂದು ಆಡಿದ ಆಟ...ಓಡಾಡಿದ ಜಾಗ...ಕಂಡ ಜನ...ಹಸಿರು ಹೊಲ....ನಮ್ಮೂರ ಕೆಂಪು ಬಸ್ಸು.....ಮನೆಯಲ್ಲಿ ಸಾಕಿದ್ದ ಬೀಳಿ ನಾಯಿ ಮರಿ.....ಇವೆಲ್ಲಾ ನಂಗೆ ಈಗ ನೆನಪುಗಳು ಮತ್ತು ಸಂಪೂರ್ಣ ಕತ್ತಲು!?!

ಯಾರಿಗೆ ಹೇಳಲಿ...?!ಊಟ ತಿಂಡಿ ನೆಡೆದಾಡೋದು..ಶೌಚ ಹೀಗೆ ಪ್ರತಿಯೊಂದಕ್ಕು ಇನ್ನೊಬ್ಬರನ್ನು ಕಾಯಬೇಕು...ಕೆಲವರು ಹೆಲ್ಪ್ ಮಾಡ್ತಾರೆ...ಕೆಲವರು ಓಡಿ ಹೋಗ್ತಾರೆ....

ಏನು ಮಾಡಲಿ...ಹೇಳಿ......"ಬದುಕಲೇ ಬೇಕಲ್ರಿ.....ಸಾವು ಬರುವ ತನಕ......"ಅಂದ......

ಯಾಕೋ...ಏನೋ .....ಮಾತಾಡಲು ಆಗಲಿಲ್ಲ......ಮೌನವೇ ಉತ್ತರವಾಗಿತ್ತು....ಆತನ ಕೈ ಹಿಡಿದಿದ್ದೆ......ಬೆನ್ನು ಸವರಿದೆ....ಅಣ್ಣಾ......ದೇವರು ಯಾಕೆ ಹೀಗೆ ಮಾಡ್ತಾನೋ ಗೊತ್ತಿಲ್ಲ.......ಆದರೆ ಈ ಕೆಟ್ಟ ಜಗತ್ತಿನಲ್ಲಿ ಹೊರ ನೋಟದ ಪ್ರಪಂಚಕ್ಕೆ ಕುರುಡರಾಗಿರಬಹುದು...ನಿಮ್ಮ ಒಳ ಕಣ್ಣು ಯಾವಾಗಲು ತೆರೆದಿದೆ......ಮುಂದೆ ಒಳ್ಳೆ ದಿನ ಬರುತ್ತದೆ ಅಣ್ಣಾ....ಅಂದೆ.....ಬೇರೆನೂ ಸಹಾಯ ಮಾಡದಷ್ಟು ಅಸಹಾಯಕನಾಗಿದ್ದೆ......ಮಳೆ ಬೀಳುತ್ತಿತ್ತು...!ನನ್ನ ಮತ್ತು ಅವನ ಕಣ್ಣಿನಿಂದ ಬೀಳುತ್ತಿದ್ದ ನೀರು ಅದೇ ಮಳೆ ನೀರಿನ ಜೊತೆ ಬೆರೆತು ಹೋಗುತ್ತಿತ್ತು....!....ಆತನಿಗೆ ಕಣ್ಣಿಲ್ಲ....ಆದರೆ ಕಣ್ಣೀರಿದೆ........

ದೂರದಿಂದ ಹಾಡೊಂದು ಕೇಳತೊಡಗಿತು....."ಮುರಿದು ಬಿದ್ದ ಕೊಳಲು ನಾನು...ನಾದವಿರದು ನನ್ನಲಿ.........ಸುನಾದವಿರದು ನನ್ನಲಿ"......ಅಂತ.

ಆ ನಂತರ ಡಿಗ್ರಿ ಮುಗಿಯುವವರೆಗೂ ಆತನನ್ನು ಭೇಟಿ ಆಗುತ್ತಿದ್ದೆ....ಹತ್ತು ನಿಮಿಷ ಮಾತಾಡಿಸಿ ಬರುತ್ತಿದ್ದೆ........ಮೊನ್ನೆ ಮೈಸೂರಿಗೆ ಹೋದಾಗ ಅಲ್ಲಿ ಹೋಗಿದ್ದೆ...ಅಲ್ಲಿ ಆತ ಇರಲಿಲ್ಲ...ಹೂವು ಮಾರುವವನೂ ಇರಲಿಲ್ಲ..ಅಲ್ಲೀಗ ಕೆಲವು ಕಮರ್ಷಿಯಲ್ ಕಟ್ಟಡಗಳಿದ್ದವು....ಅಲ್ಲೀಗ ದೊಡ್ಡ ಬುಸಿನೆಸ್ ಮಾಡುವ ಮಂದಿ ಇದ್ದರು....!!!!

ಮಾತಾಡಲೂ ಯಾರೂ ಇರಲಿಲ್ಲ.............ಉಳಿದದ್ದು ಆಗಿನ ನೆನಪುಗಳು ಮತ್ತು ಈಗ ಕಾಣುತ್ತಿರುವ ಮಾತೇ ಆಡದ ದೊಡ್ಡ ಬಿಲ್ಡಿಂಗ್ ಗಳು......!?!

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ...ಎನ್ನುತ್ತಾ ಪತ್ರಿಕಾ ಅಭಿಯಾನಕ್ಕೆಂದು ಮೈಸೂರಿಗೆ ಹೋದ ನನಗೆ ಕಾಡಿದ ಹಳೆ ನೆನಪುಗಳಿವು..........

# ಓದಿ ಸಂಪದ ಸಾಲು

ಸ್ನೇಹವೆಂದರೆ ಒಂದು ದಿನಕ್ಕೆ ಮುಗಿದು ಹೋಗುವ ಪ್ರಕ್ರಿಯೆಯಲ್ಲ..

ಸ್ನೇಹವೆಂದರೆ ಒಂದು ದಿನಕ್ಕೆ ಮುಗಿದು ಹೋಗುವ ಪ್ರಕ್ರಿಯೆಯಲ್ಲ...ಅದು ಒಂದು ರೀತಿಯ ನಿರಂತರ ಉಸಿರಾಟವಾಗಬೇಕು...

ಜಾಸ್ತಿ ಪ್ರೀತಿ,ಸ್ವಲ್ಪ ಕೋಪ,ಹೆಚ್ಚು ಕಾಳಜಿ,ತುಂಬಾ ನಂಬಿಕೆ,ಚೂರು ಅಸೂಹೆ,ಎಂತಹ ಸಂದರ್ಭದಲ್ಲಿಯೂ ನಾನು ಜೊತೆಗಿರುತ್ತೇನೆಂಬ ಆತ್ಮವಿಶ್ವಾಸದ ದೃಷ್ಟಿ,ಆತ ನನ್ನವನು ಕಾಣಯ್ಯ....ಈಕೆ ನನ್ನೋಳು ಕಾಣೆ ಎಂಬಷ್ಟು ಅಟ್ಯಾಚ್ ಮೆಂಟು, ಇದೆಲ್ಲಾ ಸ್ನೇಹದ ಸ್ವಬಾವವಾದರೆ ಅದೇ ನಿಜವಾದ ಸ್ನೇಹ....

ಫೇಸ್ಬುಕ್ ಅಲ್ಲಿ ಪರಿಚಯ ಆಗಿ,ವಾಟ್ಸಪ್ಪಲ್ಲಿ ಆತ್ಮೀಯರಾದಂತೆ ಅನ್ನಿಸಿ..ಕೇವಲ ಲೈಕು ಕಾಮೆಂಟ್ ಮಾಡಲಿಲ್ಲವೆಂದ ಕಾರಣಕ್ಕೆ ಅನ್ ಫ್ರೆಂಡ್ ಆಗಿಬಿಡುವ ಸ್ನೇಹ...ಸ್ನೇಹವಾಗುವುದಿಲ್ಲ......

ಅದಕ್ಕೇ ಹೇಳೋದು...ತೋರಿಕೆಯ ಪ್ರೀತಿ..ಸ್ನೇಹ...ಆತ್ಮೀಯತೆ....ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. .

ಅಮರವಾಗಲಿ ಸ್ನೇಹ...ಉಕ್ಕಿ ಹರಿಯಲಿ ಬಂಧ.. ಎಲ್ಲೆಡೆಯಲ್ಲೂ ಸ್ನೇಹ ಸೌಧ ನಿರ್ಮಾಣವಾಗಲಿ....... ಸ್ನೇಹ ಒಂದೇ ದಿನ ಶುಬಾಷಯದೊಂದಿಗೆ ಮುಗಿಯದಿರಲಿ.....ನೈಜ ಸ್ನೇಹ ಶುರುವಾಗಲಿ..

ಮನುಷ್ಯತ್ವ ಮೇಳೈಸಿದರೆ ಶತ್ರುಗಳ ನಡುವೆಯೂ ಗೆಳೆತನ ಮೂಡುತ್ತದೆ....... ..

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

ಹೃದಯವಂತನಿಗೆ ಹೃದಯಾಘಾತವಾಯಿತೆ!?!? ಮರೆಯಲಾರದ ಮೀಸೆ ರಂಗಣ್ಣ.

ಹೃದಯವಂತನಿಗೆ ಹೃದಯಾಘಾತವಾಯಿತೆ!?!?
ಮರೆಯಲಾರದ ಮೀಸೆ ರಂಗಣ್ಣ.

ಪ್ರತಿಯೊಬ್ಬರನ್ನು ಪ್ರೀತಿಯಿಂದ ಗೌರವಿಸಿ"ನಾನು ಮೀಸೆ ರಂಗಣ್ಣ...ನಮಸ್ಕಾರ ಕಾಣ್ರಿ"ಅಂತ ಕರೆದು ಕಲ್ಲನ್ನೂ ಮಾತಾಡಿಸುತ್ತಿದ್ದ ರಂಗಣ್ಣ ತನ್ನ ಮೀಸೆ ಮೇಲೆ ಅಗಾಧ ಅಭಿಮಾನ ಹೊಂದಿದ್ದರು.ನನ್ನ ಮೀಸೆ ಅಂದ್ರೆ ಡಾ.ರಾಜಕುಮಾರಗೂ ಇಷ್ಟ ಆಗಿತ್ತು ಕಾಣ್ರಿ..ಅಂತ ಆ ಪೋಟೋವನ್ನೇ ತನ್ನ ಮೊಬೈಲ್ ಸ್ಕ್ರೀನ್ ಸೇವರ್ ಮಾಡಿಕೊಂಡಿದ್ರು.. ನನ್ನನ್ನು ಎಲ್ಲಿ ನೋಡಿದ್ರು " ವಾಟ್ ಮಿಷ್ಟರ್ ಯಂಗ್ ಮ್ಯಾನ್"ಅಂತ ಹೆಗಲ ಮೇಲೆ ಕೈ ಹಾಕಿ ಸಂಪದ ಸಾಲು ಚೆನ್ನಾಗಿ ಬರ್ತಿದೆ...ಬೆಳಿಯಪ್ಪ ಚೆನ್ನಾಗಿ...ಅನ್ನುತ್ತಾ ಮೀಸೆ ಮುಟ್ಟಲ್ವಾ?!ಕೇಳುತ್ತಿದ್ದುದು ನೆನಪಾಯ್ತು... ಇಂತ ಹೃದಯವಂತ ಪತ್ರಕರ್ತ ಮೀಸೆ ರಂಗಣ್ಣ ತೀವ್ರ ಹೃದಯಾಘಾತದಿಂದ ನಮ್ಮನ್ನು ಅಗಲಿದರು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮನಸ್ಸಿಗ್ಯಾಕೋ ಬೇಸರದ ಛಾಯೆ ಆವರಿಸುತ್ತಿದೆ.....ಒಮ್ಮೆ ಪ್ರೆಸ್ ಕ್ಲಬ್ ಲ್ಲಿ ಕಾಫಿ ಕುಡಿತಾ ಮಾತಾಡ್ತಾ ಇದ್ವಿ.ನನ್ನಪ್ಪಾಜಿ ನಮ್ಮನ್ನಗಲಿದ ದುಃಖ ನನ್ನನ್ನಾವರಿಸಿತ್ತು...ಅದನ್ನು ನಾ ಹೇಳಿದ ತಕ್ಷಣ ಮೀಸೆ ರಂಗಣ್ಣ ತನ್ನ ಧರ್ಮಪತ್ನಿಯನ್ನು ಕಳೆದುಕೊಂಡಿದ್ದನ್ನು ನೆನೆಸಿ ಗದ್ಗದಿತರಾದರು.ನನ್ನ ಕೈ ಹಿಡಿದು ಮಾತಾಡ್ತಾ ಆಕೆ ನನ್ನ ಪಾಲಿನ ಪ್ರೀತಿಯ ದೇವರಾಗಿದ್ದಳು...ಆಕೆ ಇದ್ದಿದ್ದರೆ ಅನ್ನುತ್ತಾ ಕಣ್ಣೀರಿಟ್ಟರು... ನನ್ನ ದುಃಖದ ಜೊತೆ ಅವರ ದುಃಖವೂ ಸೇರುವಂತೆ ಮಾಡಿತ್ತು....

ಅವರು ಪತ್ರಕರ್ತರಾಗಿ ಏನೆಲ್ಲಾ ಬರೆದಿದ್ದಾರೋ?!ನನಗೆ ಗೊತ್ತಿಲ್ಲ.ಆದರೆ ಒಬ್ಬ ಹೃದಯವಂತನಾಗಿ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿಯಾಗಿದ್ದರು.....ಅಂತ ಹೃದಯವಂತನೊಬ್ಬ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ ಎಂಬುದು ನಿಜಕ್ಕೂ ಬೇಸರ...ನಿಮ್ಮ ನೈಜ ಆತ್ಮೀಯತೆಗೆ ನನ್ನದೊಂದು ಸಲಾಂ..ವಿ ಮಿಸ್ ಯು ಮೀಸೆ ರಂಗಣ್ಣ..........

#ಓದಿ ಸಂಪದ ಸಾಲು

ಪ್ರೀತಿಯಿಲ್ಲದ ಜಾತಿವಾದಕ್ಕೆ ಕೊನೆ ಎಂದು?!??!

ಪ್ರೀತಿಯಿಲ್ಲದ ಜಾತಿವಾದಕ್ಕೆ ಕೊನೆ ಎಂದು?!??!

ಸಾಮಾಜಿಕ ತಾಣಗಳು ಜಾತಿ ಧರ್ಮದ ಸಂಘರ್ಷಕ್ಕೆ ಬಲಿಯಾಗುತ್ತಿದೆಯೆ?!ಹೌದು ಅನಿಸುತ್ತಿದೆ ಇತ್ತೀಚಿನ ಕೆಲವು ಬೆಳವಣಿಗೆಗಳು.ಯಾಕೆ ಹೀಗೆ?!ಮಾನವೀಯತೆಯೆ ಸರ್ವಸ್ವ ಎಂಬ ಮನುಜ ಮತ...ವಿಶ್ವ ಪಥಕ್ಕೆ ಸಾಗಬೇಕಾದ ನಾವೆಲ್ಲ ಸಾಗುತ್ತಿರುವುದಾದರೂ ಎಲ್ಲಿ?!
ಹಣ ಸಂಸ್ಕ್ರತಿಯೇ ಜಗತ್ತನ್ನಾಳುತ್ತಿರುವಾಗ.. ಬಾವನೆಗಳೆಲ್ಲವೂ ಟಿ ವಿ ಸಿರಿಯಲ್ ಗಳಿಗೆ ಸೀಮಿತವಾಗುತ್ತಿವೆಯೆ?!
ಎಲ್ಲಾ ಧರ್ಮವೂ ಹೇಳುವುದು "ಶಾಂತಿಯ ಕ್ರಾಂತಿ ಆಗಬೇಕೆ ವಿನಃ ಕ್ರಾಂತಿಯಿಂದ ಶಾಂತಿ ಸ್ಥಾಪನೆ ಸಾದ್ಯವೇ ಇಲ್ಲ "ಎಂದು.
ಯಾವುದೇ ಧರ್ಮ ಮತ್ತು ಜಾತಿವಾದಗಳಿರಲಿ....ಅದು ಮನೆ ಮತ್ತು ಮನಸ್ಸಿನಲ್ಲಿರಬೇಕು.ಅದನ್ನು ಸಾರ್ವತ್ರಿಕಗೊಳಿಸಿದರೆ ಆಗುವುದು ಸಮರವೇ ವಿನಃ ಶಾಂತಿ ಅಲ್ಲ.ಏಕೆಂದರೆ ಪ್ರತಿಯೊಬ್ಬ ಹೆತ್ತವರಿಗೂ ತಮ್ಮ ಹೆಗ್ಗಣ ಮುದ್ದು ಅಲ್ಲವೇ?!

ಜಾಗತೀಕರಣದ ನಂತರದ ಕಾಲಗಟ್ಟದಲ್ಲೂ ನೆಡೆಯುವ ಇಂತಹ ಜಾತಿವಾದ ಮತ್ತು ಧರ್ಮ ಸಂಘರ್ಷ ಕೊನೆಗೊಳ್ಳಲಿ....ಕಾನೂನುಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸರ್ಕಾರ ಮತ್ತು ಅಧಿಕಾರಿಗಳು ಪಕ್ಷಬೇದ ಮರೆತು..ಧರ್ಮ ಬೇದ ಮರೆತು ಕ್ರಮ ತೆಗೆದುಕೊಳ್ಳಬೇಕು..ಅದನ್ನು ಬಿಟ್ಟು ತಪ್ಪು ಮಾಡದವರನ್ನೂ ಶಿಕ್ಷಿಸುವ ಗೊಡವೆಗೆ ಹೋಗಬಾರದು..ತಪ್ಪಿಗೆ ತಕ್ಕ ಶಿಕ್ಷೆ ಆಗಬೇಕೆ ವಿನಃ ಕಾಮೆಂಟ್ ಹಾಕುವವರಿಗೆಲ್ಲಾ ಗುಂಡಾ ಕಾಯ್ದೆ ಹಾಕಿ ಅದೆನೋ ಸಾಧಿಸಿದೆವು ಎಂದುಕೊಂಡರೆ ಅದು ಸಾಮಾಜಿಕ ಸಾಮರಸ್ಯಕ್ಕೆ ಕೊಡಲಿಪೆಟ್ಟು ನೀಡಿದಂತಾಗುತ್ತದೆ.

"ಇಸಂ"ಗಳೇ ತುಂಬಿರುವ ನಿರ್ಧಾರಗಳು.."ಜೀವನಪ್ರೀತಿ"ಇಲ್ಲದ ಧರ್ಮ ಪ್ರಭೋದನೆ ...ಮಾನವೀಯ ಮೌಲ್ಯಗಳೇ ಇಲ್ಲದ ಆಚರಣೆ....ಬದ್ದತೆಯೇ ಇಲ್ಲದ ಆಡಳಿತ ವ್ಯವಸ್ಥೆ.....ಸಾಮಾನ್ಯಜ್ಞಾನವೂ ಇಲ್ಲದ ಅಧಿಕಾರಿವರ್ಗ......ಒಂದು ಕಣ್ಣಿಗೆ ಸುಣ್ಣ.. ಇನ್ನೊಂದು ಕಣ್ಣಿಗೆ ಬೆಣ್ಣೆ ಮಾಡುವ ನ್ಯಾಯ ವ್ಯವಸ್ಥೆ.....ಪಾಸಿಟೀವ್ ಕಲ್ಪನೆ ಇಲ್ಲದ ಮಾಧ್ಯಮಗಳು....ಇನ್ನೊಬ್ಬರನ್ನು ನೆಗೆಟಿವ್ ಆಗಿಯೆ ನೋಡುವ ದೃಷ್ಟಿಕೋನ....ಕಂಡ ಕಂಡವರ ಬಗ್ಗೆ ಕೆಟ್ಟದಾಗಿ ಮಾತಾಡುವ ಸ್ವಭಾವ......!....

ಇದೆಲ್ಲವೂ ವ್ಯವಸ್ಥೆ ಮತ್ತು ಬದುಕನ್ನು ಕೆಡಗುತ್ತದೆಯೇ ವಿನಃ ಬದುಕು ಮತ್ತು ವ್ಯವಸ್ಥೆಯನ್ನು ಕಟ್ಟುವುದಿಲ್ಲ .

ಬೇಕಿದೆ....ಪ್ರೀತಿ ತುಂಬಿದ ಜಾತಿವಾದ.....
ಬೇಕಿದೆ..... ಶಾಂತಿಯ ಕ್ರಾಂತಿ ...
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

ಒಂದು ಕೊಳವೆ ಬಾವಿ ಇಡೀ ಬದುಕನ್ನು ಕೊಲ್ಲದಿರಲಿ.....!?!?!?

ಒಂದು ಕೊಳವೆ ಬಾವಿ ಇಡೀ ಬದುಕನ್ನು ಕೊಲ್ಲದಿರಲಿ.....!?!?!?

ಮಗುವೊಂದು ಕೊಳವೆ ಬಾವಿಗೆ ಅಚಾನಕ್ಕಾಗಿ ಬೀಳುತ್ತದೆ!?!.ಬ್ರೇಕಿಂಗ್ ನ್ಯೂಸ್ ಅಲ್ಲಿ ಶುರುವಾಗುವ ಸುದ್ದಿ ಆ ಮಗುವಿನ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ....ಸರ್ಕಾರ ಮತ್ತು ಅಧಿಕಾರಿಗಳು ನಿದ್ದೆಯಿಂದ ದಿಡೀರ್ ಅಂತ ಎದ್ದಂತೆ ಕೆಲಸ ಮಾಡುತ್ತಾರೆ...ಆಮ್ಲಜನಕ ನೀರು ಅಹಾರದ ಕೊರತೆಯಿಂದ ಬಿದ್ದ ಮಗು ಬದುಕುವುದು ತುಂಬಾ ಕಷ್ಟ...ಆದರೂ ಮಾದ್ಯಮಗಳು ಮತ್ತು ಜನರ ಕಣ್ಣು ಮುಚ್ಚಿಸುವ ಸಲುವಾಗಿ ಕಾರ್ಯಾಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಈ ಟಿವಿ ಮಾದ್ಯಮಗಳು ಮಾಡುವ ತಪ್ಪೇನು ಗೊತ್ತಾ?!ಜೆಸಿಬಿ ಡ್ರೈವರನಿಂದ ಹಿಡಿದು ಕೊಳವೆ ಬಾವಿ ಅಂದರೆ ಏನೆಂದೇ ಗೊತ್ತಿಲ್ಲದವರ ಬಳಿಯೂ ಅರ್ಥವೇ ಇಲ್ಲದ ಪ್ರಶ್ನೆ ಕೇಳುವುದು.. ಶ್ರದ್ದೆಯಿಂದ ಸುರಂಗ ತೋಡುವವನ ಬಳಿ ಎಷ್ಟು ಅಡಿ ತೋಡಿದರು?! ಎಂದು ನಿಮಿಷಕ್ಕೊಂದು ಬಾರಿ ಪ್ರಶ್ನೆ ಕೇಳುವುದು....ಮತ್ತು ಗೊತ್ತಿಲ್ಲದ ವಿಷಯಗಳನ್ನು ಗೊತ್ತಿದ್ದಂತೆ ಹೇಳಿಬಿಡುವುದು....

ಸರಿ..ಕಾರ್ಯಾಚರಣೆ ಯಶಸ್ವಿಯಾಗಿ ಮಗು ಬದುಕಿ ಬಂದರೆ ಬಹಳ ಸಂತೋಷ...ಮಗು ಬದುಕಲಿಲ್ಲವಾದರೆ ಆ ರೈತನ ಹೊಲಗಳಲ್ಲೆಲ್ಲಾ ಸುರಂಗ ತೋಡಿ ಆತನ ಬದುಕಿನ ಆದಾಯವೇ ಇಲ್ಲದಂತಾಗುವ ಆತನ ಪರಿಸ್ತಿತಿಯನ್ನು ಯಾರೂ ಯೋಚಿಸುವುದಿಲ್ಲ....ಆ ರೈತನ ಸ್ಥಿತಿ "ಹೋದ ಕಣ್ಣು ಹೋಯತಣ್ಣ..ಇದ್ದ ಕಣ್ಣು ವಿನಾಶ"ವಾದಂತೆ ಮಗುವೂ ಇಲ್ಲ..ಹೊಲವೂ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ.
ನಾವೆಲ್ಲಾ ಪುಕ್ಸಟ್ಟೆ ಸಲಹೆ ನೀಡಬಹುದು...ಏನು ಬೇಕಾದರೂ ವಿಶ್ಲೇಷಣೆ ಮಾಡಬಹುದು...ಸರ್ಕಾರವೂ ಒಮ್ಮೆ ಸಹಾಯ ಮಾಡಿಬಿಡಬಹುದು...ಆದರೆ ಸಮಸ್ಯೆಯನ್ನು ಅನುಭವಿಸುವವನು ಅದೇ ರೈತ ಅಲ್ಲವೇ?!
ಕಾರ್ಯಾಚರಣೆ ಮಾಡಿದ್ದು ಸರಿ...ಅಗೆದ ಮಣ್ಣನ್ನು ಮತ್ತೆ ತುಂಬಿ ಕೊಡಬೇಕು ಇಲ್ಲವೇ ಆತನಿಗೆ ಬೇರೆ ಹೊಲ ಕೊಡಬೇಕು...ಇಲ್ಲದಿದ್ದರೆ ಬಾಗಲಕೋಟೆಯ ಸೂಳಿಕೆರಿಯ ರೈತನ ಬದುಕು ನಾಶವಾಗುತ್ತದೆ.
ಇನ್ನೊಂದು, ಸಣ್ಣ ವಿಷಯವಾದರೂ ಮಹತ್ವದ್ದು..ನಮಗೆ ಕಾಣುವ ಯಾವುದೇ ಕೊಳವೆ ಬಾವಿ ತೆರೆದಿದ್ದರೆ ಕೂಡಲೇ ಸರ್ಕಾರಕ್ಕೆ ಕಾಯದೇ ನಾವೇ ಮುಚ್ಚುವುದು....ಹಾಗು ಕೊಳವೆ ಬಾವಿ ಮುಚ್ಚುವುದೇ ಪ್ರಚಾರದ ಸರಕಾಗದಂತೆ ನೋಡಿಕೊಳ್ಳುವುದು...ಮತ್ತು ನೀರು ಬಾರದ ಬೋರ್ ವೆಲ್ ಅನ್ನು ಆ ಕಂಪನಿಯೇ ಮುಚ್ಚುವುದು ಕಡ್ಡಾಯವಾಗಬೇಕು.

"ಹೋದವರು ಹೋದರು..ಇದ್ದವರು ಸಾಯಬಾರದು" .ಕಂಡ ಕಂಡಲ್ಲಿ ಕೊಳವೆಬಾವಿ ಕೊರೆಯುವುದೇ ಅಂತರ್ಜಲದ ಕುಸಿತಕ್ಕೆ ಕಾರಣ ಎನ್ನುವುದನ್ನು ನೆನಪಿಡಬೇಕು...

ಕೊಳವೆ ಬಾವಿ ತೆರೆದಿಟ್ಟು. ಇನ್ಯಾರೋ ಬಿದ್ದು....ವಾರಗಟ್ಟಲೆ ಕಾರ್ಯಾಚರಣೆ ಮಾಡಿ...ಪ್ರತಿಕ್ಷಣವೂ ಬ್ರೇಕಿಂಗ್ ನ್ಯೂಸ್ ಆಗಿ....ಸರ್ಕಾರ ಮತ್ತು ಅಧಿಕಾರಿಗಳು ಒಮ್ಮೆಲೆ ಬ್ಯಾಟ್ರಿ ಚಾರ್ಜ್ ಆದವರಂತೆ ಕುಣಿದಾಡಿ....ಜನಗಳೆಲ್ಲಾ ಮರುಗಿ.... ಮತ್ತದೇ ರಾಗ...ಮತ್ತದೇ ತಾಳ...ಮತ್ತದೇ ಗೋಳು ಆಗದಿರಲಿ.......ಮುಗ್ದ ಮಕ್ಕಳು.... ಮತ್ತವರ ಕುಟುಂಬದವರ ಬದುಕು ನಾಶವಾಗದಿರಲಿ......ನೊಂದವರಿಗೆ ನೆಮ್ಮದಿ ಸಿಗಲಿ

"ಬದಲಾವಣೆ ಬರಲಿ ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

ನೊಂದವರಿಗೆ ನೆಮ್ಮದಿ ಸಿಗಲಿ..


ನೊಂದವರಿಗೆ ನೆಮ್ಮದಿ ಸಿಗಲಿ....

ನನ್ನ ಆತ್ಮೀಯರಲ್ಲೊಬ್ಬರಾದ ಸಚಿವ ಎಸ್ ಆರ್ ಪಾಟೀಲ್ ಅವರೊಂದಿಗೆ ಮಾತಾಡಿದೆ....ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಪಾಟೀಲ್ ಅವರ ಹತ್ತಿರ ಸೂಳಿಕೇರಿಯ ರೈತ ಹನುಮಂತ ಹಟ್ಟಿಯವರ ಮಗ ಕೊಳವೆ ಬಾವಿಗೆ ಬಿದ್ದದ್ದು...ಕಾರ್ಯಾಚರಣೆ ನೆಡೆಸಿದ್ದು...ಸುರಂಗ ತೋಡಿದ್ದು....ರೋಬೋ ತರಿಸಿದ್ದು ಎಲ್ಲಾ ವಿಚಾರ ಮಾತಾಡಿದೆವು...ಆ ರೈತನ ಮಗ ತಿಮ್ಮಣ್ಣನನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೀವಿ...ದೇವರ ಕೃಪೆ ಇದ್ದರೆ ಮಗು ಬದುಕುತ್ತದೆ ಎಂದರು...ಅದೇ ಸಂದರ್ಭದಲ್ಲಿ ನಾ ಅವರಿಗೆ ಹೇಳಿದೆ...ದಯವಿಟ್ಟು ಆ ರೈತನ ಹೊಲವನ್ನು ಮೊದಲಿನಂತೆ ಮಾಡಬೇಕಾದ ಜವಬ್ದಾರಿ ತಮ್ಮದಿದೆ..ಹಾಗು ಆ ರೈತನ ಆರ್ಥಿಕ ಸಂಕಷ್ಟಕ್ಕೂ ತಾವು ಸಹಕರಿಸಬೇಕು..ಮತ್ತು ಆ ವ್ಯಕ್ತಿಗೆ ನೈತಿಕವಾದ ಬೆಂಬಲ ನೀಡಬೇಕು ಸಾರ್ ಅಂದೆ....ಸಂಪಾ ಅವರೆ ನೀವು ಹೇಳಿದ ಸಲಹೆ ಸೂಕ್ತವಾದದ್ದು...ಖಂಡಿತಾ ಆ ಹೊಲವನ್ನು ಮೊದಲಿನಂತೆ ಮಾಡಿಕೊಡುತ್ತೇವೆ..ಮತ್ತು ಆ ರೈತನ ಆರ್ಥಿಕ ಸಂಕಷ್ಟಕ್ಕೆ ಜೊತೆಯಾಗಿರ್ತೇನೆ ಅಂದ್ರು...ಒಬ್ಬ ನಾಯಕನಾದವನಿಗೆ ಸ್ಪಂದನೆಯ ಗುಣ ಇರಬೇಕು..ಮತ್ತು ಭರವಸೆಗೆ ಮೀಸಲಾಗದೆ ಕೆಲಸ ಮಾಡಬೇಕು ಹಾಗು ನಂಬಿದವರ ರಕ್ಷಣೆ ಆಗಬೇಕು.ಅವರಿಗೆ ಸಹಕಾರಿಯಾಗಿ ನಿಲ್ಲಬೇಕೆಂಬ ಬದ್ದತೆಯನ್ನು ಸಚಿವರಾದ ಎಸ್ ಆರ್ ಪಾಟೀಲ್ ಪ್ರದರ್ಶಿಸುತ್ತಾರೆಂಬ ನಂಬಿಕೆ ಇದೆ....ಮತ್ತು ಆ ಶಕ್ತಿಯೂ ಅವರಿಗಿದೆ.
ಅವರ ಒಳ್ಳೆಯ ಕೆಲಸಕ್ಕೆ ನಮ್ಮ ಸಂಪದ ಸಾಲು ಪತ್ರಿಕಾ ಬಳಗ ಬೆಂಬಲ ವ್ಯಕ್ತ ಪಡಿಸುತ್ತಾ ಅವರಿಗೆ ಶುಭ ಹಾರೈಸುತ್ತದೆ..... .ರೈತನ ಬದುಕು ಹಸನಾಗಲಿ...ನೊಂದವರಿಗೆ ನೆಮ್ಮದಿ ಸಿಗಲಿ.......

ನೀವಿದನ್ನು ಶೇರ್ ಮಾಡಲೇಬೇಕು....ನೀರು ಉಳಿಸಿ... ಬದುಕು ಬೆಳೆಸಿ.... ಕೊಳವೆ ಬಾವಿ ಮುಚ್ಚುವುದರ ಬದಲು ಅದನ್ನು ಅಂತರ್ಜಲದ ವೃದ್ದಿಯಾಗುವಂತೆ ಮಾಡಬಹುದು # ವೆಂಕಟೇಶ ಸಂಪ

ನೀವಿದನ್ನು ಶೇರ್ ಮಾಡಲೇಬೇಕು....ನೀರು ಉಳಿಸಿ... ಬದುಕು ಬೆಳೆಸಿ....

ಕೊಳವೆ ಬಾವಿ ಮುಚ್ಚುವುದರ ಬದಲು ಅದನ್ನು ಅಂತರ್ಜಲದ ವೃದ್ದಿಯಾಗುವಂತೆ ಮಾಡಬಹುದು
# ವೆಂಕಟೇಶ ಸಂಪ

ತೆರೆದ ಬೋರ್ ವೆಲ್ ನಲ್ಲಿ ನೀರು ಬರಲಿಲ್ಲ ಎಂದ ಕಾರಣಕ್ಕೆ ಅದನ್ನು ಮುಚ್ಚುವುದೊಂದೇ ಅದಕ್ಕೆ ಪರಿಹಾರವಲ್ಲ.ಎಲ್ಲಾ ಟಿ ವಿ ಮಾಧ್ಯಮಗಳು ಕಂಡ ಕಂಡ ಕೊಳವೆ ಬಾವಿ ಮುಚ್ಚಿಸಿ ಅದೇ ಸಾಧನೆ ಅಂದುಬಿಡಬಹುದು...ಸರ್ಕಾರವೂ ಕೊಳವೆ ಬಾವಿ ಮುಚ್ಚಲು ಲಕ್ಷಾಂತರ ವ್ಯಯಿಸಬಹುದು....ಸಂಘಟನೆಗಳು ಕಲ್ಲು ಮುಚ್ಚಿ ಸುಮ್ಮನಾಗಬಹುದು....ಆದರೆ ಪಾಳು ಬಿದ್ದ ಬೋರ್ ವೆಲ್ ನ್ನು ಮುಚ್ಚುವುದೊಂದೇ ಅದಕ್ಕೆ ಪರಿಹಾರವಲ್ಲ..ಅದನ್ನೇ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧನವಾಗಿ ಬಳಸಬಹುದು..ನಿಮಗೆ ತಿಳಿದಿರಲಿ...ಭೂಮಿಯಲ್ಲಿನ ಅಂತರ್ಜಲ ಕುಸಿಯಲು ಕಾರಣವಾದದ್ದು ಇದೇ ಬೊರವೆಲ್ ಗಳು....ಅದೇ ಹಾಳು ಬಿದ್ದ ಬೋರವೆಲ್ ಗಳನ್ನು ಭೂಮಿಗೆ ನೀರು ತುಂಬಿಸುವ ಸಾಧನವಾಗಿ ಬಲಸಬಹುದೆಂದು ಯಾರು ಯೋಚಿಸಲಿಲ್ಲ....ಆಕಾಶದಲ್ಲಿ ಅರಮನೆ ಕಟ್ಟುವವರು ಮೊದಲು ಭೂಮಿಯಲ್ಲಿ ಗುಡಿಸಲು ಕಟ್ಟಿರಬೇಕು ಎಂದು..ಏಕೆಂದರೆ ಮಾದ್ಯಮಗಳು ಮತ್ತು ಜನ ಕೂಗಿದ ತಕ್ಷಣ ಸರ್ಕಾರ ಎಲ್ಲಾ ಕೊಳವೆ ಬಾವಿ ಮುಚ್ಚಿಸಬೇಕೆಂದು ನಿರ್ದೇಶನ ಕೊಟ್ಟರು....ಅದೇ ಈ ಮುಖ್ಯಮಂತ್ರಿಗಳು...ಸಚಿವರು...ಅಧಿಕಾರುಗಳು....ಮಾದ್ಯಮಗಳು ಸಾಮಾನ್ಯ ಜ್ಞಾನ ಉಪಯೋಗಿಸಬಹುದಿತ್ತು!?...ನೀರು ಬಾರದ ಕೊಳವೆ ಬಾವಿಯನ್ನು ಹೇಗೆ ಅಂತರ್ಜಲ ಹೆಚ್ಚಿಸುವ ಸಾಧನವಾಗಿಸಬಹುದು....ಈ ಲೇಖನ ಪೂರ್ತಿ ಓದಿದರೆ ತಿಳಿಯುತ್ತದೆ.

ನಮ್ಮ ಸಂಪದ ಸಾಲು ಪತ್ರಿಕಾ ಬಳಗ ಮತ್ತು ಸಂಪದ ಜನ ಜಾಗೃತಿ ಬಳಗದ ವತಿಯಿಂದ ಅಂತರ್ಜಲ ಹೆಚ್ಚಳಕ್ಕೆ ಬೇರೆ ಬೇರೆ ತೆರನಾದ ಕೆಲಸ ಮಾಡುತ್ತಿದ್ದೇವೆ...

ಇವತ್ತು ಬೆಳಿಗ್ಗೆ ಎಂಟು ಗಂಟೆಗೆ ವ್ಯಕ್ತಿಯೊಬ್ಬ ಕರೆ ಮಾಡಿದ...ಅಣ್ಣಾ ಇಲ್ಲೊಂದು ನೀರು ಬಾರದ ಕೊಳವೆ ಬಾವಿ ಇದೆ..ನೀವು ಬನ್ನಿ..ವಿಡಿಯೋ ಮಾಡ್ಕೊಳ್ಳಿ...ಎಲ್ಲಾ ಟಿವಿ ಗಳಿಗೆ ಪೋನ್ ಮಾಡಿದೆ.ಯಾರು ಪೋನ್ ಎತ್ತಲಿಲ್ಲ...ದಯವಿಟ್ಟು ಬನ್ನಿ ಅಂದರು.....ಅದೀಗ ತಾನೆ ಬೆಳಗಾಗಿತ್ತು ನನಗೆ...ಅಣ್ಣಾ ಖಂಡಿತ ಬರ್ತಿನಿ...ನಾ ಬರುವವರೆಗೆ ಮುಚ್ಚಬೇಡ ಅಂದೆ.....ನನ್ನ ಆತ್ನೀಯರಾದ ಸೂರ್ಯನಾರಯಣ್ ಅವರನ್ನು ಕರೆದುಕೊಂಡು ಕಾರಲ್ಲಿ ಅಲ್ಲಿ ಹೋದೆ. ನನ್ನನ್ನು ನೋಡಿದ ಅಲ್ಲಿಯ ಜನ ದೊಡ್ಡ ದೊಡ್ಡ ಕಲ್ಲು ಹಿಡಿದು ಅದನ್ನು ಮುಚ್ಚಿಸಲು ಹೊರಟ್ರು.....ಎಲ್ಲಾ ಬನ್ನಿ ಅಣ್ಣಾ ಅಂತ...ಒಟ್ಟಿಗೆ ಅಲ್ಲೇ ಮೀಟಿಂಗ್ ಗೆ ಕೂತೆವು.ನಾ ಹೇಳಿದೆ.ಈ ಕೊಳವೆ ಬಾವಿ ಮುಚ್ಚೋದು ಬೇಡ..ಇದನ್ನೇ ಇಂಗು ಗುಂಡಿ ಮಾಡೋಣ..ನಾಲ್ಕು ಇಂಚಿನ ಎರಡು ಪೈಪು..ಮತ್ತು ಒಂದು ಬೆಂಡು ಹಾಗು ರೆಡ್ಯೂಸರ್ ಪೈಪು ಹಾಗು ಒಂದು ಚಿಕ್ಕ ಫಿಲ್ಟರ್ ತನ್ನಿ ಅಂದೆ... ನಾವು ಕಾಫಿ ಕುಡ್ಯೋ ಹೊತ್ತಿಗೆ...ಅಂತರ್ಜಲದ ಹೆಚ್ಚಿಸುವ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸಿದೆ....ಆ ಪೈಪ್ ಗಳನ್ನು ತಂದ ವ್ಯಕ್ತಿ....ಬೋರ್ ಪಾಯಂಟ್ ಹತ್ರ ಕಳೆ ಸವರಿಸಿ..ಕ್ಲೀನ್ ಮಾಡಿಸಿದೆವು....ಆ ಇಪ್ಪತ್ತು ಅಡಿ ಪೈಪ್ ಕೆಳಗೆ ಇಳಿಸಿದೆವು..ಎರಡನೆ ಪೈಪು ಸ್ವಲ್ಪ ಮಾತ್ರ....ಹೋಯ್ತು....ಭೂಮಿಯ ಅಳತೆಗೆ ಅದನ್ನು ಕೊಯ್ಡು ಬೆಂಡ್ ಹಾಕಿದೆವು. ಆ ನಂತರ ರೆಡ್ಯೂಸರ್ ಪೈಪ್ ಹಾಕಿ...ಸಣ್ಣ ಪೈಪ್ ಅದಕ್ಕೆ ಜಾಯಂಟ್ ಮಾಡಿದೆವು...ಹಾಗು ಆ ಪೈಪಿನ ಒಳಗೆ ಮಳೆ ನೀರು ಹೋಗುವಂತೆ ಮಾಡಿ ಆ ನೀರನ್ನು ಭೂಮಿಗೆ ಇಂಗಿಸಲು ವ್ಯವಸ್ಥೆ ಮಾಡಿದೆವು....ಇನ್ನು ಸ್ವಲ್ಪ ಗ್ಯಾಪ್ ಇತ್ತು..ಗುದ್ದಲಿಯಿಂದ ಮಣ್ಣು ತುಂಬಿದರು.ಎಲ್ಲೋ ಹರಿದು ಸಮುದ್ರ ಸೇರಿ ವ್ಯರ್ಥ ವಾಗುವ ನೀರು ನಮ್ಮದೇ ಹೊಲದಲ್ಲಿ ಇಂಗಿತು ಎಂಬ ಖುಶಿ ಎಲ್ಲರ ಮುಖದಲ್ಲಿ ಮೂಡಿತು..

ಅಂತರ್ಜಲ ಹೆಚ್ಚಿಸಲು ಸರ್ಕಾರ ಎನೇನೋ ಯೋಜನೆ ಅನ್ನುತ್ತದೆ...ಆದರೆ ಇಷ್ಟು ಸರಳವಾದ ಕ್ರಮ ಇದ್ದರೂ ಯಾರು ಅನುಸರಿಸದೇ ಇರುವುದು ವಿಪರ್ಯಾಸ. . ಈ ವಾರದಲ್ಲಿ ಸಾವಿರಾರು ಕೊಳವೆ ಬಾವಿ ಮುಚ್ಚಿಸಿರಬಹುದು.....ಅದೆಲ್ಲವನ್ನು ಇಂಗುಗುಂಡಿಯಾಗಿ ಬದಲಾಯಿಸಿದ್ದರೆ ಬಹುಶಃ ಅಂತರ್ಜಲ ಮಟ್ಟ ಎಷ್ಟು ಏರುತ್ತಿತ್ತು ಎಂಬುದನ್ನು ನೆನಪಿಡಿ.....ಮುಚ್ಚುವುದಷ್ಟೇ ಪರಿಹಾರವಲ್ಲ...ಅದನ್ನು ಪಾಸಿಟಿವ್ ಆಗಿ ಪರಿವರ್ತಿಸುವುದೇ ಬುದ್ದಿವಂತಿಕೆ ಮತ್ತು ಅತ್ಯವಶ್ಯ.....ಸರ್ಕಾರ...ಟಿವಿ ಮಾದ್ಯಮಗಳು..ಅಧಿಕಾರಿಗಳು.ಸಂಬಂದ ಪಟ್ಟವರು ಇನ್ನಾದರೂ ಸಾಮಾನ್ಯ ಜ್ಞಾನ ಬಳಸಿ ಕೆಲಸ ಮಾಡಲಿ...ಅದಕ್ಕೇ ಹೇಳಿದ್ದು...."ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದಸಾಲು ಪತ್ರಿಕಾ ಅಭಿಯಾನ."ಅಂತ..
ಇನ್ನು ತೆರೆದ ಬಾವಿಗಳಿಗೆ ಮಳೆ ನೀರು ಇಂಗುವಂತೆ ಮಾಡೋಣ ... ಎಲ್ಲಾ ಕೊಳವೆ ಬಾವಿಗಳನ್ನು ಇಂಗು ಗುಂಡಿಗಳಾಗಿ ಬದಲಾಯಿಸಿ ಅದನ್ನು ಮೇಲಿಂದ ಮುಚ್ಚೋಣ..ಯಾವ ಮಗುವು ಕೊಳವೆ ಬಾವಿಗೆ ಬೀಳಬಾರದು...ಹಾಗು ಕಡಿಮೆ ಹಣದಲ್ಲಿ ಹೆಚ್ಚು ನೀರನ್ನು ಭೂಮಿಗೆ ಇಂಗಿಸಿ ಅಂತರ್ಜಲ ಏರಿಸಿದ ಕೀರ್ತಿ ನಮಗೆ ಸಲ್ಲುತ್ತದೆ....ಇನ್ನೇಕೆ ತಡ....ಇದನ್ನು ಎಲ್ಲರಿಗೂ ತಲುಪುವಂತೆ ಶೇರ್ ಮಾಡಿ.......

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu