Thursday, March 30, 2017

ಅಧಿಕಾರಿಗಳನ್ನು ಡೆಪ್ಯುಟೇಶನ್ ಮಾಡ್ತಾರೆ.ಅದೇ ತರಹ ಯೋಗಿ ಅವರನ್ನು ನಮ್ಮ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗಿ ಒಂದು ಆರು ತಿಂಗಳು ಬಂದರೆ ಸಾಕು. ಈಗ ಅಸ್ತಿತ್ವದಲ್ಲಿಯೇ ಇಲ್ಲದಂತಿರುವ ಕರ್ನಾಟಕ ಸರ್ಕಾರ ನಿದ್ದೆಯಿಂದ ಏಳೋದು ಯಾವಾಗ?

ಅಧಿಕಾರಿಗಳನ್ನು ಡೆಪ್ಯುಟೇಶನ್ ಮಾಡ್ತಾರೆ.ಅದೇ ತರಹ ಯೋಗಿ ಅವರನ್ನು ನಮ್ಮ ಕರ್ನಾಟಕದಲ್ಲಿ ಮುಖ್ಯಮಂತ್ರಿ  ಆಗಿ ಒಂದು ಆರು ತಿಂಗಳು ಬಂದರೆ ಸಾಕು.
ಈಗ ಅಸ್ತಿತ್ವದಲ್ಲಿಯೇ ಇಲ್ಲದಂತಿರುವ ಕರ್ನಾಟಕ ಸರ್ಕಾರ ನಿದ್ದೆಯಿಂದ ಏಳೋದು ಯಾವಾಗ?

ಯೋಗಿ ಆದಿತ್ಯನಾಥ್ ಸಿಎಂ ಆಗಿದ್ದೇ ಆಗಿದ್ದು, ಉತ್ತರ ಪ್ರದೇಶ ಸರ್ಕಾರ ಕಂಪ್ಲೀಟ್ ಆ್ಯಕ್ಟಿವ್ ಆಗಿದೆ. ನೂತನ ಸಿಎಂ ಯೋಗಿ ಆದಿತ್ಯನಾಥ್, ಅಧಿಕಾರಕ್ಕೆ ಬಂದ ಕೇವಲ 150 ಗಂಟೆಗಳಲ್ಲಿ 50 ಆದೇಶ ಜಾರಿ ಮಾಡಿದ್ದಾರೆ. ಆ 50 ಆದೇಶಗಳಲ್ಲಿ ಆಯ್ದ ಕೆಲವು ಆದೇಶಗಳ ಸ್ಯಾಂಪಲ್ ಇಲ್ಲಿದೆ.
150 ಗಂಟೆ 50 ಆದೇಶ
* ಪುಂಡರನ್ನು ಮಟ್ಟ ಹಾಕಲು ಆ್ಯಂಟಿ-ರೋಮಿಯೋ ಸ್ಕ್ವಾಡ್
* ಮಾನಸ ಸರೋವರ ಯಾತ್ರಿಗಳಿಗೆ 1 ಲಕ್ಷ ರೂ. ಅನುದಾನ,
* ಸರ್ಕಾರಿ ಕಚೇರಿಗಳಲ್ಲಿ ಪಾನ್, ಗುಟ್ಕಾ ನಿಷೇಧ
* ಗೋವುಗಳ ಕಳ್ಳಸಾಗಾಣಿಕೆ ನಿಷೇಧ
* ಅಕ್ರಮ ಕಸಾಯಿಖಾನೆಗಳು ತಕ್ಷಣ ಬಂದ್
* ಸಚಿವರು ಕಚೇರಿ ಫೈಲ್'​ಗಳನ್ನು ಮನೆಗೆ ತೆಗೆದುಕೊಂಡು ಹೋಗಕೂಡದು
* ಅಧಿಕಾರಿಗಳು 15 ದಿನಗಳಲ್ಲಿ ಆಸ್ತಿ ವಿವರ ಸಲ್ಲಿಸಬೇಕು
* ನವರಾತ್ರಿ, ರಾಮನವಮಿಯಂದು 24 ಗಂಟೆ ವಿದ್ಯುತ್ ಸರಬರಾಜು
* ರೋಗಿಗಳ ದೂರು ದಾಖಲಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಌಪ್
* ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು 14 ದಿನಗಳ ಒಳಗೆ ಹಣ ನೀಡಬೇಕು
* ರೈತರ ಬೆಳೆ ಖರೀದಿಗೆ ಚತ್ತೀಸ್​ಘಡ ಮಾದರಿ ಯೋಜನೆ ರೂಪಿಸಲು ಆದೇಶ
* ಗ್ರಾಮಾಂತರ ಪ್ರದೇಶಗಳಲ್ಲಿ 3 ಸಾವಿರ ಮೆಡಿಕಲ್ ಶಾಪ್​ಗಳ ಆರಂಭಕ್ಕೆ ಆದೇಶ
* ರಾಜ್ಯಾದ್ಯಂತ ಸ್ಥಗಿತಗೊಂಡಿದ್ದ ಎಲ್ಲ ಸಹಕಾರಿ ಸಂಘಗಳ ಪುನಾರಂಭ
* ಪ್ರಧಾನ್​'ಮಂತ್ರಿ ಆವಾಸ್ ಯೋಜನಾ ಜಾರಿಗೆ ಹೊಸ ಇಲಾಖೆ ರಚನೆಗೆ ಆದೇಶ
* ಶಿಕ್ಷಕರು ಶಾಲೆಗಳಲ್ಲಿ ಟೀಶರ್ಟ್ ಧರಿಸಬಾರದು. ಮೊಬೈಲ್ ಫೋನ್ ತರಬಾರದು
* ಪ್ರತಿ ಹಳ್ಳಿಗಳಿಗೂ ರಸ್ತೆ ಸಂಪರ್ಕ ಕಲ್ಪಿಸಲು ಸೂಚನೆ
ಇವು ಕೇವಲ ಸ್ಯಾಂಪಲ್ ಮಾತ್ರ. ಇಷ್ಟೂ ಆದೇಶಗಳಲ್ಲಿ ಯೋಗಿ ಆದಿತ್ಯನಾಥ್ ಗಮನ ಹರಿಸಿರುವ ಕ್ಷೇತ್ರಗಳಾದರೂ ಯಾವುವು ಗೊತ್ತೇ..?
ಸಿಎಂ ಯೋಗಿ ಆದಿತ್ಯನಾಥ್ ಆದ್ಯತೆ
* ಅಕ್ರಮ ಕಸಾಯಿ ಖಾನೆ ಬಂದ್, ಗೋರಕ್ಷಣೆಗೆ ಆದ್ಯತೆ
* ರೈತರು, ಕಬ್ಬು ಬೆಳೆಗಾರರ ಮೇಲೆ ವಿಶೇಷ ಗಮನ
* ಪುಂಡರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಗಮನ
* ಭ್ರಷ್ಟಾಚಾರ ತಡೆಗೆ ದಿಟ್ಟ ಸಂಕಲ್ಪ
* ಆರೋಗ್ಯ ಸೇವೆಯನ್ನು ಹಳ್ಳಿಗಳಿಗೆ ತಲುಪಿಸುವತ್ತ ಗಮನ
* ಕಚೇರಿಗಳಲ್ಲಿ ಶುಚಿತ್ವ ಪಾಲನೆ. ಸ್ವಚ್ಚ ಭಾರತ್​ ಆಂದೋಲನ
* ‘ಪ್ರಧಾನ್ ಮಂತ್ರಿ’ ಆವಾಸ್ ಯೋಜನೆ ಜಾರಿಗೆ ವಿಶೇಷ ಆದ್ಯತೆ
ಅಕ್ರಮ ಕಸಾಯಿ ಖಾನೆ ಬಂದ್'​ನ ಸಂದೇಶ ಗೋರಕ್ಷಣೆ. ಇನ್ನು ರೈತರು, ಕಬ್ಬು ಬೆಳೆಗಾರರ ಮೇಲೆ ವಿಶೇಷ ಗಮನ ಕೊಡಲಾಗಿದೆ. ಪುಂಡರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಗಮನಹರಿಸಲಾಗಿದೆ. ಭ್ರಷ್ಟಾಚಾರ ತಡೆಗೆ ದಿಟ್ಟ ಸಂಕಲ್ಪ ಪ್ರತಿ ಹೆಜ್ಜೆಯಲ್ಲೂ ಕಾಣುತ್ತಿದೆ. ಆರೋಗ್ಯ ಸೇವೆಯನ್ನು ಹಳ್ಳಿಗಳಿಗೆ ತಲುಪಿಸುವುದರ ಜೊತೆಯಲ್ಲೇ ಕಚೇರಿಗಳಲ್ಲಿ ಶುಚಿತ್ವ ಪಾಲನೆ. ಸ್ವಚ್ಚ ಭಾರತ್​ ಆಂದೋಲನಕ್ಕೆ ಆದ್ಯತೆ ಕೊಟ್ಟಿದ್ದಾರೆ ಯೋಗಿ. ಇನ್ನು ಉ.ಪ್ರದೇಶದಲ್ಲಿ ಸರಿಯಾಗಿ ಜಾರಿಯಾಗದೇ ಉಳಿದಿದ್ದ ‘ಪ್ರಧಾನ್ ಮಂತ್ರಿ’ ಆವಾಸ್ ಯೋಜನೆ ಜಾರಿಗೆ ವಿಶೇಷ ಆದ್ಯತೆ ಕೊಡಲಾಗಿದೆ
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ www.sampadasaalu.blogspot.com

Sunday, March 26, 2017

ಇದು ಒಬ್ಬ ರೈತನ ಕತೆಯಲ್ಲ, ಎಲ್ಲಾ ರೈತರ ದುರಂತ ಬದುಕು,ನೀರಿಲ್ಲ,ಬೆಳೆಯಿಲ್ಲ, ಬೆಳೆಗಳಿಗೆ ಸ್ಥಿರ ಬೆಲೆಯಿಲ್ಲ,ಸಾಮಾಜಿಕ ಗೌರವವಿಲ್ಲ,ರೈತನ ಅಳಲಿಗೆ ಕೊನೆಯಿಲ್ಲ,

ಈ ಸುದ್ದಿ ಓದಿ.ಮನುಷ್ಯತ್ವ ಇದ್ದವರಿಗೆ ಮನ ಕಲುಕುತ್ತದೆ.ತಾನೇ ಸಾಕಿ ಬೆಳೆಸಿದ   ಅಡಿಕೆ ಗಿಡವನ್ನು ಕೈಯಾರೆ ಕಡಿದು ಬೆಂಕಿ ಇಡುವಷ್ಟು ಅಸಹಾಯಕಳಾದ ರೈತ ಹೆಂಗಸಿನ ಬದುಕು ನೋಡಿ,    ಇದು ಒಬ್ಬ ರೈತನ ಕತೆಯಲ್ಲ,  ಎಲ್ಲಾ ರೈತರ ದುರಂತ ಬದುಕು,ನೀರಿಲ್ಲ,ಬೆಳೆಯಿಲ್ಲ,  ಬೆಳೆಗಳಿಗೆ ಸ್ಥಿರ ಬೆಲೆಯಿಲ್ಲ,ಸಾಮಾಜಿಕ ಗೌರವವಿಲ್ಲ,ರೈತನ ಅಳಲಿಗೆ ಕೊನೆಯಿಲ್ಲ,
ಇವರು ಅನ್ನದಾತರು ಕಾಣ್ರಿ.ಇವರ ಮೇಲೆ ಎಲ್ಲಾ ಪಕ್ಷಗಳು ರಾಜಕೀಯ ಮಾಡ್ತಾರೆ.ಅತ್ತ ಕೇಂದ್ರ ಸರ್ಕಾರವೂ ನಾಟಕ ಮಾಡತ್ತೆ. ಇತ್ತ ರಾಜ್ಯ ಸರ್ಕಾರವೂ ರೈತರ ಪಾಲಿಗೆ ಸತ್ತುಹೋಗಿದೆ.
ಕೇಂದ್ರ ಸರ್ಕಾರ ಹೇಳತ್ತೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಅಂತಾ.    ರಾಜ್ಯ ಸರ್ಕಾರಕ್ಕೆ ಅನ್ನ ಕೊಡುವ ಅನ್ನದಾತನಿಗೆ ಕೊಡಲು ದುಡ್ಡಿಲ್ಲಂತೆ.ಮಟನ್ ಅಂಗಡಿಗೆ ದುಡ್ಡು ಕೊಡೋಕೆ ಹಣ ಸರಿ ಆಗತ್ತೆ ಅವರಿಗೆ.
ಎರಡು ಕಡೆ ಅಧಿವೇಶನ   ನೆಡೆಯುತ್ತಿದೆ.ಯಾವ ಪಕ್ಷಗಳು ಯಾವೊಬ್ಬ ರಾಜಕಾರಣಿಯೂ ರೈತರ ಸಾಲ ಮನ್ನ ಮಾಡದಿದ್ದರೆ ಸದನ ನೆಡೆಸಲು ಬಿಡುವುದಿಲ್ಲ ಅಂತ ಪ್ರತಿಭಟಿಸಲಿಲ್ಲ.
ಎಲ್ಲರಿಗೂ ಎಲೆಕ್ಷನ್ ಟೈಮ್ ಗೆ ನಮ್ಮ ರೈತರು ನೆನಪಾಗ್ತಾರೆ.ರೈತರನ್ನು ರಾಜಕೀಯ ಸರಕು ಮಾಡಿಕೊಂಡವರಿಗೆ ದಿಕ್ಕಾರವಿರಲಿ.ಇನ್ನಾದರೂ ರೈತರ ಸಾಲ ಮನ್ನಾ ಮಾಡಲಿ.ಅನ್ನದಾತನ ಅಳಲಿಗೆ   ಕೊನೆ ಎಂದು!? ಸರ್ಕಾರಕ್ಕೆ ತಲುಪುವವರೆಗೆ ಶೇರ್ ಮಾಡಿ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu