Friday, August 8, 2014

ಪ್ರೀತಿಯಿಲ್ಲದ ಜಾತಿವಾದಕ್ಕೆ ಕೊನೆ ಎಂದು?!??!

ಪ್ರೀತಿಯಿಲ್ಲದ ಜಾತಿವಾದಕ್ಕೆ ಕೊನೆ ಎಂದು?!??!

ಸಾಮಾಜಿಕ ತಾಣಗಳು ಜಾತಿ ಧರ್ಮದ ಸಂಘರ್ಷಕ್ಕೆ ಬಲಿಯಾಗುತ್ತಿದೆಯೆ?!ಹೌದು ಅನಿಸುತ್ತಿದೆ ಇತ್ತೀಚಿನ ಕೆಲವು ಬೆಳವಣಿಗೆಗಳು.ಯಾಕೆ ಹೀಗೆ?!ಮಾನವೀಯತೆಯೆ ಸರ್ವಸ್ವ ಎಂಬ ಮನುಜ ಮತ...ವಿಶ್ವ ಪಥಕ್ಕೆ ಸಾಗಬೇಕಾದ ನಾವೆಲ್ಲ ಸಾಗುತ್ತಿರುವುದಾದರೂ ಎಲ್ಲಿ?!
ಹಣ ಸಂಸ್ಕ್ರತಿಯೇ ಜಗತ್ತನ್ನಾಳುತ್ತಿರುವಾಗ.. ಬಾವನೆಗಳೆಲ್ಲವೂ ಟಿ ವಿ ಸಿರಿಯಲ್ ಗಳಿಗೆ ಸೀಮಿತವಾಗುತ್ತಿವೆಯೆ?!
ಎಲ್ಲಾ ಧರ್ಮವೂ ಹೇಳುವುದು "ಶಾಂತಿಯ ಕ್ರಾಂತಿ ಆಗಬೇಕೆ ವಿನಃ ಕ್ರಾಂತಿಯಿಂದ ಶಾಂತಿ ಸ್ಥಾಪನೆ ಸಾದ್ಯವೇ ಇಲ್ಲ "ಎಂದು.
ಯಾವುದೇ ಧರ್ಮ ಮತ್ತು ಜಾತಿವಾದಗಳಿರಲಿ....ಅದು ಮನೆ ಮತ್ತು ಮನಸ್ಸಿನಲ್ಲಿರಬೇಕು.ಅದನ್ನು ಸಾರ್ವತ್ರಿಕಗೊಳಿಸಿದರೆ ಆಗುವುದು ಸಮರವೇ ವಿನಃ ಶಾಂತಿ ಅಲ್ಲ.ಏಕೆಂದರೆ ಪ್ರತಿಯೊಬ್ಬ ಹೆತ್ತವರಿಗೂ ತಮ್ಮ ಹೆಗ್ಗಣ ಮುದ್ದು ಅಲ್ಲವೇ?!

ಜಾಗತೀಕರಣದ ನಂತರದ ಕಾಲಗಟ್ಟದಲ್ಲೂ ನೆಡೆಯುವ ಇಂತಹ ಜಾತಿವಾದ ಮತ್ತು ಧರ್ಮ ಸಂಘರ್ಷ ಕೊನೆಗೊಳ್ಳಲಿ....ಕಾನೂನುಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸರ್ಕಾರ ಮತ್ತು ಅಧಿಕಾರಿಗಳು ಪಕ್ಷಬೇದ ಮರೆತು..ಧರ್ಮ ಬೇದ ಮರೆತು ಕ್ರಮ ತೆಗೆದುಕೊಳ್ಳಬೇಕು..ಅದನ್ನು ಬಿಟ್ಟು ತಪ್ಪು ಮಾಡದವರನ್ನೂ ಶಿಕ್ಷಿಸುವ ಗೊಡವೆಗೆ ಹೋಗಬಾರದು..ತಪ್ಪಿಗೆ ತಕ್ಕ ಶಿಕ್ಷೆ ಆಗಬೇಕೆ ವಿನಃ ಕಾಮೆಂಟ್ ಹಾಕುವವರಿಗೆಲ್ಲಾ ಗುಂಡಾ ಕಾಯ್ದೆ ಹಾಕಿ ಅದೆನೋ ಸಾಧಿಸಿದೆವು ಎಂದುಕೊಂಡರೆ ಅದು ಸಾಮಾಜಿಕ ಸಾಮರಸ್ಯಕ್ಕೆ ಕೊಡಲಿಪೆಟ್ಟು ನೀಡಿದಂತಾಗುತ್ತದೆ.

"ಇಸಂ"ಗಳೇ ತುಂಬಿರುವ ನಿರ್ಧಾರಗಳು.."ಜೀವನಪ್ರೀತಿ"ಇಲ್ಲದ ಧರ್ಮ ಪ್ರಭೋದನೆ ...ಮಾನವೀಯ ಮೌಲ್ಯಗಳೇ ಇಲ್ಲದ ಆಚರಣೆ....ಬದ್ದತೆಯೇ ಇಲ್ಲದ ಆಡಳಿತ ವ್ಯವಸ್ಥೆ.....ಸಾಮಾನ್ಯಜ್ಞಾನವೂ ಇಲ್ಲದ ಅಧಿಕಾರಿವರ್ಗ......ಒಂದು ಕಣ್ಣಿಗೆ ಸುಣ್ಣ.. ಇನ್ನೊಂದು ಕಣ್ಣಿಗೆ ಬೆಣ್ಣೆ ಮಾಡುವ ನ್ಯಾಯ ವ್ಯವಸ್ಥೆ.....ಪಾಸಿಟೀವ್ ಕಲ್ಪನೆ ಇಲ್ಲದ ಮಾಧ್ಯಮಗಳು....ಇನ್ನೊಬ್ಬರನ್ನು ನೆಗೆಟಿವ್ ಆಗಿಯೆ ನೋಡುವ ದೃಷ್ಟಿಕೋನ....ಕಂಡ ಕಂಡವರ ಬಗ್ಗೆ ಕೆಟ್ಟದಾಗಿ ಮಾತಾಡುವ ಸ್ವಭಾವ......!....

ಇದೆಲ್ಲವೂ ವ್ಯವಸ್ಥೆ ಮತ್ತು ಬದುಕನ್ನು ಕೆಡಗುತ್ತದೆಯೇ ವಿನಃ ಬದುಕು ಮತ್ತು ವ್ಯವಸ್ಥೆಯನ್ನು ಕಟ್ಟುವುದಿಲ್ಲ .

ಬೇಕಿದೆ....ಪ್ರೀತಿ ತುಂಬಿದ ಜಾತಿವಾದ.....
ಬೇಕಿದೆ..... ಶಾಂತಿಯ ಕ್ರಾಂತಿ ...
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu