Saturday, May 14, 2022

https://m.facebook.com/story.php?story_fbid=10222649804739443&id=1402623747

https://m.facebook.com/story.php?story_fbid=10222649804739443&id=1402623747



ಕನ್ನಡದ ಹೆಮ್ಮೆಯ ದೂರದರ್ಶನ ಚಂದನ ವಾಹಿನಿಯಲ್ಲಿ ಬರೋಬ್ಬರಿ ಒಂದು ಗಂಟೆ ಕಾಲ ಪ್ರಸಾರವಾದ,ಸಂಪದ ಸಾಲು ಪತ್ರಿಕೆ ಯ 15 ವರ್ಷದ ಯಶಸ್ವಿ ಪಯಣದ ನೇರ ಸಂದರ್ಶನದ ಸಂಪೂರ್ಣ ವಿಡಿಯೋ..... ನೋಡಿ ಪ್ರತಿಕ್ರಿಯಿಸಿ....ಹಾರೈಸಿದ ಎಲ್ಲಾ ಸಹೃದಯರಿಗೆ ಕೋಟಿ ಪ್ರಣಾಮಗಳು....ಈ ಮಟ್ಟಕ್ಕೆ ತಲುಪಲು ಕಾರಣರಾದ ಅಪ್ಪ, ಅಮ್ಮ, ಕುಟುಂಬ, ಸಮಾಜ ಹಾಗೂ ನನ್ನ ಪ್ರೀತಿಯ ಓದುಗರಿಗೆ ನಾನು ಋಣಿ...
ನಿಮ್ಮ ಪ್ರೀತಿಯ ವೆಂಕಟೇಶ ಸಂಪ Venkatesha Sampa 
ಓದಿ ಸಂಪದ ಸಾಲು ಪತ್ರಿಕೆ 9448219347

ಕನ್ನಡದ ಹೆಮ್ಮೆಯ ದೂರದರ್ಶನ ಚಂದನ ವಾಹಿನಿಯಲ್ಲಿ ಬರೋಬ್ಬರಿ ಒಂದು ಗಂಟೆ ಕಾಲ ಪ್ರಸಾರವಾದ,ಸಂಪದ ಸಾಲು ಪತ್ರಿಕೆ ಯ 15 ವರ್ಷದ ಯಶಸ್ವಿ ಪಯಣದ ನೇರ ಸಂದರ್ಶನದ ಸಂಪೂರ್ಣ ವಿಡಿಯೋ..... ನೋಡಿ ಪ್ರತಿಕ್ರಿಯಿಸಿ....ಹಾರೈಸಿದ ಎಲ್ಲಾ ಸಹೃದಯರಿಗೆ ಕೋಟಿ ಪ್ರಣಾಮಗಳು....ಈ ಮಟ್ಟಕ್ಕೆ ತಲುಪಲು ಕಾರಣರಾದ ಅಪ್ಪ, ಅಮ್ಮ, ಕುಟುಂಬ, ಸಮಾಜ ಹಾಗೂ ನನ್ನ ಪ್ರೀತಿಯ ಓದುಗರಿಗೆ ನಾನು ಋಣಿ...
ನಿಮ್ಮ ಪ್ರೀತಿಯ ವೆಂಕಟೇಶ ಸಂಪ Venkatesha Sampa 
ಓದಿ ಸಂಪದ ಸಾಲು ಪತ್ರಿಕೆ 9448219347



https://m.facebook.com/story.php?story_fbid=10222649804739443&id=1402623747&sfnsn=wiwspwa

Wednesday, May 11, 2022

ದೂರದರ್ಶನ ಚಂದನ ವಾಹಿನಿಯಲ್ಲಿ ಸಂಪದ ಸಾಲು ಪತ್ರಿಕೆ ಸಂಪಾದಕರಾದ ವೆಂಕಟೇಶ ಸಂಪ ಅವರ ಒಂದು ಗಂಟೆ ಪ್ರಸಾರವಾದ ಸಂದರ್ಶನ. https://youtu.be/YQFNXAtXhmU

https://youtu.be/YQFNXAtXhmU

ಸಾಧನೆ ಎನ್ನುವುದು ಮುಗಿಯದ ಪ್ರಯಾಣ...ಸಾಧಿಸಿದ್ದು ಮುಷ್ಟಿಯಷ್ಟು ..ಸಾಧಿಸಬೇಕಾದದ್ದು ಸಾಗರದಷ್ಟು.
ನನ್ನ 15 ವರ್ಷದ ಸಂಪದ ಸಾಲು ಪತ್ರಿಕೆಯ ಯಶಸ್ವಿ ಪಯಣವನ್ನು ಗುರುತಿಸಿ,ಬರೋಬ್ಬರಿ ಒಂದು ಗಂಟೆಗಳ ಕಾಲ ಸಂದರ್ಶನ ನೆಡೆಸಿದ ಕನ್ನಡದ ಹೆಮ್ಮೆಯ ದೂರದರ್ಶನ ಚಂದನ ವಾಹಿನಿಗೆ ನನ್ನ ಧನ್ಯವಾದಗಳು..
ಸಂದರ್ಶನದ ಸಂಪೂರ್ಣ ವಿಡಿಯೋ ಇಲ್ಲಿದೆ.ನೋಡಿ.ಪ್ರತಿಕ್ರಿಯಿಸಿ.ಇಷ್ಟವಾದರೆ ಶೇರ್ ಮಾಡಿ...
ನಿಮ್ಮ ಹಾರೈಕೆ ಇರಲಿ
ವೆಂಕಟೇಶ ಸಂಪ ಓದಿ ಸಂಪದ ಸಾಲು ಪತ್ರಿಕೆ
9448219347
sampadasaalu@gmail.com

https://youtu.be/YQFNXAtXhmU

sampada saalu patrike contact details ... ಸಂಪದ ಸಾಲು ಪತ್ರಿಕೆಯ ಸಂಪರ್ಕ ವಿವರ

Venkatesha s sampa
Editor sampada saalu patrike
Post Box no 32
Sagar 577401
9448219347
9740923747
sampadasaalu@gmail.com
www.sampadasaalu.blogspot.com
ವೆಂಕಟೇಶ ಎಸ್ ಸಂಪ
ಸಂಪಾದಕ
ಸಂಪದ ಸಾಲು ಪತ್ರಿಕೆ
ಅಂಚೆ ಪೆಟ್ಟಿಗೆ ಸಂಖ್ಯೆ 32
ಸಾಗರ 577401
9448219347
9740923747
sampadasaalu@gmail.com
www.sampadasaalu.blogspot.com

Thursday, October 14, 2021

ಬದುಕಿನ ನೂರಾರು ಬವಣೆಗಳು ಕಳೆದು,ಸಂತಸದ ಹೊನಲು ಮೂಡಲಿ......ನವಶಕ್ತಿಗಳ ಆಶೀರ್ವಾದದ ಫಲವಾಗಿ ನಮ್ಮೆಲ್ಲರ ಬಾಳಿನಲ್ಲಿ ವಿಜಯದ ದಶಮಿ ಸಂಭವಿಸಲಿ...ಸಂಪದವಾಗಲಿ ಸರ್ವರಿಗೆ.....ಸಾಲು ಸಾಲು ಖುಶಿ ಇರಲಿ ಬದುಕಿನಲಿ.......ಎಲ್ಲರಿಗೂ ನವರಾತ್ರಿ ಹಾಗು ವಿಜಯದಶಮಿ ಯ ಶುಭಾಶಯಗಳುವೆಂಕಟೇಶ ಸಂಪ 9448219347 ಓದಿಸಂಪದಸಾಲುಪತ್ರಿಕೆsampadasaalu@gmail.comwww.sampadasaalu.blogspot.com


ಬದುಕಿನ ನೂರಾರು ಬವಣೆಗಳು ಕಳೆದು,ಸಂತಸದ ಹೊನಲು ಮೂಡಲಿ......
ನವಶಕ್ತಿಗಳ ಆಶೀರ್ವಾದದ ಫಲವಾಗಿ ನಮ್ಮೆಲ್ಲರ ಬಾಳಿನಲ್ಲಿ ವಿಜಯದ ದಶಮಿ ಸಂಭವಿಸಲಿ...ಸಂಪದವಾಗಲಿ ಸರ್ವರಿಗೆ.....ಸಾಲು ಸಾಲು ಖುಶಿ ಇರಲಿ ಬದುಕಿನಲಿ.......
ಎಲ್ಲರಿಗೂ ನವರಾತ್ರಿ ಹಾಗು ವಿಜಯದಶಮಿ ಯ ಶುಭಾಶಯಗಳು
ವೆಂಕಟೇಶ ಸಂಪ 9448219347 ಓದಿಸಂಪದಸಾಲುಪತ್ರಿಕೆ
sampadasaalu@gmail.com
www.sampadasaalu.blogspot.com

Saturday, September 18, 2021

someway venkatesha saMpa

ಅಧಿಕಾರ,ಸಂಪತ್ತು,ಆಡಂಬರ ಎಲ್ಲಕ್ಕಿಂತಲೂ ಮಿಗಿಲಾದದ್ದು ನೆಮ್ಮದಿ, ಸಂತೋಷ, ತೃಪ್ತಿ,,, ಈ ನೆಮ್ಮದಿ, ಸಂತೋಷ, ತೃಪ್ತಿ ಅನ್ನೋದು ನಮ್ಮಮನಸ್ಥಿತಿ......ಎಲ್ಲಾ ಇದ್ದೂ ಕೊರಗುವವರಿದ್ದಾರೆ....ಏನೂ ಇಲ್ಲದೆಯೂ ಅದೆಷ್ಟು ಖುಷಿಯಾಗಿರಬಹುದು....ಜಗಳ,ಮನಸ್ಥಾಪ,ಕೊರಗು,ಸಿಡುಕತನ ಬಿಟ್ಟು ತಾಳ್ಮೆಯಿಂದ, ಪ್ರಪಂಚವನ್ನು ಒಳಗಣ್ಣು ತೆರೆದು ನೋಡಿದಾಗ ಅದೆಷ್ಟು ಆನಂದ ನಮ್ಮೊಳಗೆ ಸೃಜಿಸುತ್ತದೆ ಗೊತ್ತಾ!?
ಅದನ್ನು ಶಬ್ದಗಳಲ್ಲಿ ವರ್ಣಿಸಲಸಾಧ್ಯ....
ಎಲ್ಲವೂ ಇದ್ದು, ಏನೂ ಇಲ್ಲದಂತೆ ಬದುಕುವುದು ಒಂದು ಕಲೆ ಅದು ಕೂಡ ಸಂತೋಷವನ್ನು ಹೆಚ್ಚಿಸುತ್ತದೆ, ಏನೂ ಇಲ್ಲದೆಯೂ,ಎಲ್ಲವೂ ಇದ್ದಂತೆ ಬದುಕುವುದೂ ಒಂದು ಕಲೆ......ಅದು ಕೂಡ ಸಂತೋಷವನ್ನು ಸೃಜಿಸುತ್ತದೆ,,,,,
ಹೇಗೇ ಆಗಲಿ ಸಂತೋಷದ ಬದುಕು ನಮ್ಮದಾಗಬೇಕು...... Happiness is most important ❣️
ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com
sampadasaalu.blogspot.com

Sunday, September 12, 2021

ಬಂದೂಕು ಹಿಡಿದು ಸರ್ಕಾರ ಸ್ಥಾಪಿಸಿ,ಜನರ ಬದುಕನ್ನು ಉಳಿಸುವರೆ!? Venkatesha saMpa

ಬಂದೂಕು ಹಿಡಿದು ಸರ್ಕಾರ ಸ್ಥಾಪಿಸಿ,ಜನರ ಬದುಕನ್ನು ಉಳಿಸುವರೆ!?
          Venkatesha saMpa

ಇದೊಂತರ ವಿಪರ್ಯಾಸ!
ಜನರಿದ್ದರೆ ಮಾತ್ರಾ ಒಂದು ಊರು,ಒಂದು ರಾಜ್ಯ,ಒಂದು ದೇಶ ಎಂಬ ಮಿನಿಮಮ್ ಕಲ್ಪನೆಯಿಲ್ಲದ,ಆಡಳಿತ ಎಂದರೆ ಕಟ್ಟುಪಾಡು,ಆಡಳಿತ ಎಂದರೆ ಕೊಲೆ, ಸರ್ಕಾರ ಎಂದರೆ ಸುಲಿಗೆ,ಅಧಿಕಾರ ಎಂದರೆ ಜನರನ್ನೆಲ್ಲಾ ಬಂಧಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು,ಬದುಕು ಎಂದರೆ ಬೇಕಾಬಿಟ್ಟಿ ವರ್ತನೆ,ಹೆಣ್ಣು ಎಂದರೆ ಕೇವಲ ಸೆಕ್ಸ್ ಗೆ ಬಳಸುವ ವಸ್ತು ಎಂಬ ವರ್ತನೆ, ನಾನು ಹೇಳಿದ್ದೇ ಸರಿ,ನಾನು ಹೇಳಿದ್ದು ಮಾತ್ರವೇ ಸರಿ,ನಾನು ಹೇಳಿದಂತೆ ಕೇಳದಿದ್ದರೆ ಆ ವ್ಯಕ್ತಿಗೆ ಬದುಕೋಕು ಹಕ್ಕಿಲ್ಲ ಎಂಬ ಧೋರಣೆ,,,,ಹೀಗೆ ವಿಕೃತ ಮನಸ್ಥಿತಿಯ ಅನಾವರಣವೇ ತಾಲಿಬಾನ್ ಎಂಬ ವಿಕೃತ ಸರ್ಕಾರ! ಅಫ್ಗಾನಿಸ್ಥಾನದಲ್ಲಿ ಸ್ಥಾಪಿತ ಸರ್ಕಾರವೊಂದನ್ನು ಬಂದೂಕುಧಾರಿಗಳು,ಭಯೋತ್ಪಾದಕರು  ವಶಪಡಿಸಿಕೊಂಡರು ಎಂಬ ವೀಡಿಯೋ ನೋಡಿದರೆ ಸಾಕು ವಿಕೃತ ಸ್ಥಿತಿ ಅರ್ಥವಾಗುತ್ತದೆ.ಅಫ್ಗಾನ್ನರು ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಜೀವ ಉಳಿದರೆ ಸಾಕು ಎಂದು ಹಾರುತ್ತಿರುವ ವಿಮಾನದ ರೆಕ್ಕೆಯ ಸಂದಿಯಲ್ಲಿ ಪ್ರಯಾಣಿಸುವ ಪ್ರಯತ್ನ ಮಾಡಿ ಬಿದ್ದು ಸತ್ತಿದ್ದನ್ನು ನೋಡಿದರೆ ಅಲ್ಲಿಯ ಭೀಕರತೆ ಅರ್ಥವಾಗುತ್ತದೆ.

ಸರಿಸುಮಾರು  252000 ಚದರ ಮೈಲಿ  ವಿಸ್ತೀರ್ಣ ಹೊಂದಿದ,ಕೇವಲ ನಾಲ್ಕು ಕೋಟಿ ಜನಸಂಖ್ಯೆ ಹೊಂದಿದ ಅಫ್ಗಾನ್ ಅತಿಯಾದ ಇಸ್ಲಾಂ ಧರ್ಮದ ಅತಿರೇಕ ನಡವಳಿಕೆಯಿಂದ  ಇತ್ತು.
ಯಾವುದೇ ಧರ್ಮ ಮತ್ತು ಪಂಥವಾಗಿರಲಿ ಎಕ್ಸ್ಟ್ರೀಮ್ ಲೆವೆಲ್ ಗೆ ಹೋದಾಗ ಆಗುವ ದುರಂತಕ್ಕೆ ಇಂದಿನ ಅಫ್ಗಾನ್ ಜ್ವಲಂತ ಉದಾಹರಣೆ....

ಭಯೋತ್ಪಾದನೆಯೇ ಬದುಕು ಎಂದು ತಿಳಿದು ಬಂದೂಕೇ ಎಲ್ಲದಕ್ಕೂ ಉತ್ತರ ಎಂದು ಭಾವಿಸಿದ,ಹೆದರಿಸೋದೇ ನಿಯಂತ್ರಣ ಎಂದು ತಿಳಿದ ಮೂರ್ಖರ ಪಡೆಯೇ ತಾಲಿಬಾನ್,

ಅಲ್ಕೈದ ಎಂಬ ಕೊಳಕು ಭಯೋತ್ಪಾದಕ ಸಂಘಟನೆಯ ಹುಟ್ಟಡಗಿಸಲು ಅಮೇರಿಕ ಸಂಚು ರೂಪಿಸಿ,ತನ್ನ ಸೈನ್ಯವನ್ನು ಅಫ್ಗಾನ್ ನೆಲಕ್ಕೆ ಕಳುಹಿಸಿತ್ತು. ತಾಲಿಬಾನ್ ರಕ್ಷಣೆಯಲ್ಲಿದ್ದ ಅಫ್ಗಾನಲ್ಲಿದ್ದ ಒಸಾಮ ಬಿನ್ ಲಾಡೆನ್ ಮತ್ತು ಆ ಸಂಘಟನೆಯ ಹುಟ್ಟಡಗಿಸಲು, 2001 ಸೆಪ್ಟೆಂಬರ್ 11 ರಂದು ಅಮೇರಿಕದ ಮೇಲಾದ ವರ್ಲ್ಡ್ ಟ್ರೇಡ್ ಸೆಂಟರ್ ನ ದ್ವಂಸದ ಪ್ರತೀಕಾರಕ್ಕೆ ತನ್ನ ಸೈನ್ಯ ಮತ್ತು ಶಸ್ತ್ರಾಸ್ತ್ರ ಕೊಟ್ಟು ಅಫ್ಗಾನ್ ಹೊಕ್ಕಿತ್ತು.
ಅಮೇರಿಕದ ಶಕ್ತಿಶಾಲಿ ಅಸ್ತ್ರಗಳ ಎದುರು ಇಪ್ಪತ್ತು ವರ್ಷಗಳ ಕಾಲ ಬಾಲಬಿಚ್ಚದ ತಾಲಿಬಾನ್ ಅಲ್ಲಲ್ಲಿ ತನ್ನ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿತ್ತು.
ಅವಕಾಶಕ್ಕಾಗಿ ಕಾಯುತ್ತಾ,ಹೊಂಚು ಹಾಕಿ ಕುಳಿತು,ಅಮೇರಿಕ ತನ್ನ ಸೈನಿಕರ ಬಲವನ್ನು  ಹಿಂದಕ್ಕೆ ಪಡೆಯುತ್ತಿದ್ದಂತೆ ಒಮ್ಮೆಲೆ ಪ್ರಭುತ್ವದ ವಿರುದ್ದ ಎರಗಿಬಿಟ್ಟರು.
ಕಂಡ ಕಂಡವರನ್ನು ಕೊಂದರು.ಹೆಂಗಸರು ಮಕ್ಕಳನ್ನು ಅತ್ಯಾಚಾರ ದೌರ್ಜನ್ಯಕ್ಕೆ ಬಳಸಿಕೊಂಡರು.ಸಿಕ್ಕಸಿಕ್ಕ ಕಡೆಯಲ್ಲೆಲ್ಲಾ ದೋಚಿದರು. ಕ್ರಿಮಿನಲ್ಗಳನ್ನು,ಖೈದಿಗಳನ್ನೆಲ್ಲಾ ಬಂಧಿಖಾನೆಯಿಂದ ಬಿಟ್ಟು ಜನರನ್ನು ಕೊಲ್ಲಲು, ಹಿಂಸೆ ಮಾಡಲು ಕಳಿಸಿದರು.
ನೋಡ ನೋಡುತ್ತಿದ್ದಂತೆ ಪ್ರವಾಹ ಅಪ್ಪಳಿಸಿ, ಭೂಮಿಯನ್ನು ಕೊಚ್ಚಿ ಹೋಗುವ ತೆರದಿ ಆಡಳಿತ ವ್ಯವಸ್ಥೆಯನ್ನು ಕೇವಲ ಬಂದೂಕಿನಿಂದಲೇ ಕಸಿದು , ಆಡಳಿತ ದ ಖುರ್ಚಿಯ ಮೇಲೆ ಕುಳಿತು ಬಿಟ್ಟರು.ನಾವೇ ಸರ್ಕಾರ ಎಂದು ಘೋಷಿಸಿಬಿಟ್ಟರು.ತಾನು ಹೇಳಿದ್ದೇ ಶಾಸನ ಎಂದುಬಿಟ್ಟರು.

ಈ ಎಲ್ಲಾ ದುರಂತಗಳ ನಡುವೆ ಹಿನ್ನೆಲೆಯಿಂದ ಕುಮ್ಮಕ್ಕು ಕೊಟ್ಟ ಪಾಕಿಸ್ಥಾನ ಮತ್ತು ಚೀನಾವೂ ತಾಲಿಬಾನಿ  ಸರ್ಕಾರಕ್ಕೆ ನಮ್ಮ ಬೆಂಬಲ ಎಂದುಬಿಟ್ಟರು.
ಕೆಲವು ದೇಶಗಳು ಜೈ ಎಂದರು. ಕೆಲವು ದೇಶ ವಿರೋಧಿಸಿತು.ಕೆಲವು ದೇಶ ತಟಸ್ಥರಾದರು.

ಒಂದಂತೂ ಸತ್ಯ.... ಬಂದೂಕು ಹಿಡಿದು ಸರ್ಕಾರ ಸ್ಥಾಪಿಸುತ್ತೇವೆ.ಭಯೋತ್ಪಾದನೆಯಿಂದ ಜಗತ್ತು ಗೆಲ್ಲುತ್ತೇವೆ ಮತ್ತು ಧರ್ಮ ಸ್ಥಾಪಿಸುತ್ತೇವೆಂಬ ವಿಕೃತ ಮನಸ್ಥಿತಿ ಇಡೀ ಮನುಕುಲ ವ್ಯವಸ್ಥೆಗೇ ಅತ್ಯಂತ ಅಪಾಯಕಾರಿ ಮತ್ತು ಕಳವಳಕಾರಿ ವಿಷಯ....!

ಪ್ರೀತಿ,ಶಾಂತಿ,ಸೌಹಾರ್ಧತೆ,ವಿಶ್ವಾಸದಿಂದ ಸ್ಥಾಪಿತವಾದ,ಜನರಿಂದ, ಜನರಿಗೋಸ್ಕರ, ಜನರಿಗಾಗಿ ಎಂಬ ಆಡಳಿತ ಮತ್ತು ಸರ್ಕಾರ ಮಾತ್ರಾ ದೇಶ ಮತ್ತು ಜಗತ್ತನ್ನು ಅತ್ಯಂತ ಧೀರ್ಘ ಕಾಲ ಆಳಬಲ್ಲದು....ಹಿಂಸೆ ಭಯೋತ್ಪಾದನೆಯ ಕರಿನೆರಳಿನ ಬದುಕು ಕೇವಲ ಕ್ಷಣಿಕವಾಗಿ ಉರಿದು ನಶಿಸಿಹೋಗುತ್ತದೆ.....

ಎಲ್ಲೆಡೆ ಶಾಂತಿ ನೆಲೆಸಲಿ....ಎಲ್ಲರ ಬದುಕು ಹಸನಾಗಲಿ......
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ

Saturday, August 14, 2021

ಅಧಿಕಾರ ಶಾಶ್ವತವಲ್ಲ...ಅವಕಾಶ ಸದಾ ಸಿಗುವುದಿಲ್ಲ...ಆಡಳಿತ ಮಾತ್ರಾ ನೆನಪುಳಿಯುವಂತೆ ಮಾಡಬಲ್ಲದು....!ವೆಂಕಟೇಶ ಸಂಪ


ಅಧಿಕಾರ ಶಾಶ್ವತವಲ್ಲ...ಅವಕಾಶ ಸದಾ ಸಿಗುವುದಿಲ್ಲ...
ಆಡಳಿತ ಮಾತ್ರಾ ನೆನಪುಳಿಯುವಂತೆ ಮಾಡಬಲ್ಲದು....!
ವೆಂಕಟೇಶ ಸಂಪ


ಅದೆಷ್ಟು ಪಲ್ಲಟಗಳು ಜರುಗುತ್ತವೆ.ನಾಳೆಗಳು ಬಹುಬೇಗ ನಿನ್ನೆಗಳಾಗಿಬಿಡುತ್ತವೆ.ಸಮಯಗಳು ಸರಿದು ಬಿಡುತ್ತವೆ.ಒಂದು ಕಾಲದಲ್ಲಿ ರಾಜನಂತೆ ಮೆರೆದಾತ ಮರೆಗೆ ಸರಿದುಬಿಡುತ್ತಾನೆ.ಅಧಿಕಾರ ಕಳೆದುಕೊಂಡಾತ ಮರುದಿವಸವೇ ಚಲಾವಣೆ ರದ್ದಾದ ನಾಣ್ಯದಂತಾಗಿಬಿಡುತ್ತಾನೆ.ಇದು ವಾಸ್ತವ.....ನಾಳೆ ಎನ್ನುವುದು ಗೊತ್ತಿಲ್ಲ.ನಿನ್ನೆ ಎನ್ನುವುದು ಕಳೆದುಬಿಟ್ಟಿದೆ. ಇವತ್ತು ಮಾತ್ರಾ ನಮ್ಮದು ಎಂಬ ಕಲ್ಪನೆ ಮೂಡುವ ಮೊದಲೇ ಸೂರ್ಯಾಸ್ತ ಪ್ರಾರಂಭವಾಗಿಬಿಡುತ್ತದೆ.

ಹೌದು...ಬರೋಬ್ಬರಿ ಮೂರ್ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿ ಮೆರೆದ ನಾಯಕ ಕಾಲ ಕಳೆದಂತೆ ನೇಪಥ್ಯಕ್ಕೆ ಸರಿಯುವ ಪರಿ ನೋಡಬೇಕು.ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿಹೋದಂತೆ.
ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ,ಅಧಿಕಾರದಲ್ಲಿದ್ದಾಗ ಸುತ್ತಲೂ ಹೊಗಳುಭಟರೇ ತುಂಬಿದ್ದೂ,ತಾನು ಮಾಡಿದ್ದಕ್ಕೆಲ್ಲಾ ಜೈ ಎಂಬ ಪಟಾಲಂ ಗಳು ಎಂದೂ ದಾರಿ ಮತ್ತು ಗುರಿಯ ಬಗ್ಗೆ ಎಚ್ಚರಿಕೆ ಇರುವುದೇ ಇಲ್ಲ.ಅಧಿಕಾರದ ಮಧ್ಯದಲ್ಲಿ ಕೆಲಸ ಆಗುವವರೆಗೆ ಎಲ್ಲರೂ ಜೈ ಎಂದವರೆ.ಅಧಿಕಾರ ಕಳೆದ ಮರುದಿವಸ ಮನೆಯಲ್ಲಿದ್ದ ಕೆಲಸಗಾರರೂ ಬಿಟ್ಟು ಹೋಗುವ ಪರಿಯನ್ನು ಪದಗಳಲ್ಲಿ ವರ್ಣಿಸಲಸಾಧ್ಯ.

ವ್ಯಕ್ತಿಯೊಬ್ಬ ಸಾಮಾನ್ಯ ಬದುಕು ಪ್ರಾರಂಭಿಸಿ,ಕಾರ್ಯಕರ್ತ,ಮತ್ತು ಜನಗಳ ನಡುವೆ ಬೆಳೆಯುತ್ತಾ ಅಂಬೆಗಾಲಿಟ್ಟು ಅದೆಷ್ಟೋ ಶ್ರಮ ಪಟ್ಟು ಒಬ್ಬ ನಾಯಕ ಎನಿಸಿಕೊಂಡು ಪುಟ್ಟದೊಂದು ಅಧಿಕಾರ ಅಂತ ಬಂದಾಗ ಬಹಳ ಎಚ್ಚರಿಕೆಯಿಂದ ಇರಬೇಕು.ಒಮ್ಮೆ ಅಧಿಕಾರಕ್ಕೆ ಬಂದಕೂಡಲೇ ಅದೆಷ್ಟು ಜನ   ನಾವು ನಿಮ್ಮವರು ಅಂತ ಜೊತೆ ಸೇರಿಬಿಡುತ್ತಾರೆ? ಅದೆಷ್ಟು ಜನ ಜೈಕಾರ ಹಾಕುತ್ತಾರೆ? ಅದೆಷ್ಟು ಜನ ಸುತ್ತಲೂ ಇದ್ದು ನಮ್ಮ ತಪ್ಪುಗಳನ್ನು ಗೊತ್ತಿದ್ದೂ ಎಚ್ಚರಿಸದೇ ನಮ್ಮನ್ನು ಕೂಪಗಳಿಗೆ ತಳ್ಳುತ್ತಾರೆ?
ಅಧಿಕಾರಕ್ಕೆ ಬಂದ ವ್ಯಕ್ತಿ,ಸಾಧನೆಯ ಎತ್ತರಕ್ಕೆ ಏರಿದ ವ್ಯಕ್ತಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು.ಕಷ್ಟವಿದ್ದಾಗ ಕರುಣೆ ತೋರಿದವರ ಬಗ್ಗೆ,ಅಧಿಕಾರವೇ ಇಲ್ಲದಿದ್ದಾಗ ಆಸರೆ ನೀಡಿದವರ ಬಗ್ಗೆ,ಸಮಸ್ಯೆಯಲ್ಲಿದ್ದಾಗಲೂ ಸಂತೋಷದಿಂದಿರಲು ಸಹಕರಿಸಿದವರ ಬಗ್ಗೆ,
ತಾನು ಅಧಿಕಾರಕ್ಕೆ ಬಂದಾಗಲೂ ದೂರದೃಷ್ಟಿಯಿಂದ ತನ್ನ ಒಳಿತನ್ನು ಬಯಸುವವನ ಬಗ್ಗೆ,ಒಂದೇ ಒಂದು ಕ್ಷಣದ ನಿರ್ಲಕ್ಷ ಕೂಡ ಒಳ್ಳೆಯದಲ್ಲ.
ನಾನೇ ಸ್ವತಃ ನೂರಾರು ಶಾಸಕರನ್ನು ಹತ್ತಿರದಿಂದ ಬಲ್ಲೆ.ಕೆಲವರಂತೂ ತೀರಾ ಆತ್ಮೀಯರು ಕೂಡ.ಅವರ ಹಿತೈಷಿಯಾಗಿ ಅದೆಷ್ಟೋ ಬಾರಿ ಗಟ್ಟಿ ಧ್ವನಿಯಲ್ಲಿ ಹೇಳಿಯಾದರೂ ಕೆಲವು ತಪ್ಪು ನಿರ್ಧಾರ ಖಂಡಿಸಿಯೂ ಇದ್ದೆ.ಅದನ್ನು ಸರಿ ಮಾರ್ಗದಲ್ಲಿ ಒಪ್ಪಿಕೊಂಡವರು ಅಮೇಲೆ ನನ್ನ ಬಗ್ಗೆ ಹೆಮ್ಮೆ ಪಟ್ಟಿದ್ದೂ ಇದೆ.

ಅಧಿಕಾರ ಬಂದಾಗ ಸುತ್ತಲೂ ಇರುವ ವ್ಯಕ್ತಿ ಕಾಮನ್ ಸೆನ್ಸ್ ಉಪಯೋಗಿಸುವಂತಹ ವ್ಯಕ್ತಿಗಳನ್ನು ಜೊತೆಯಲ್ಲಿಟ್ಟುಕೊಳ್ಳಬೇಕು.ಹಾಗೂ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸೂಚಿಸುವಂತವನಿರಬೇಕು.
 ಅಧಿಕಾರ ಬರುವುದು ಎಂದರೆ ನಾವೇ ವಾಹನವೊಂದನ್ನು ಚಲಾಯಿಸಲು ಅವಕಾಶ ಸಿಕ್ಕಂತೆ.ನಮಗೆ ಬಹಳ ಸ್ಪಷ್ಟ ಕಲ್ಪನೆ ಇರಬೇಕು.ಎಲ್ಲೆಲ್ಲಿ ಬ್ರೇಕ್ ಹಾಕಬೇಕು?.ಎಲ್ಲಿಲ್ಲಿ ಎಕ್ಸಿಲೇಟರ್ ಬಳಸಬೇಕು? ಎಲ್ಲೆಲ್ಲಿ ಹೇಗೆ ವರ್ತಿಸಬೇಕೆಂಬ ಸ್ಪಷ್ಟತೆ ಬೇಕು.ಮತ್ತು ಜೊತೆಯಲ್ಲಿರುವವರು ಕೂಡ ತಪ್ಪು ವಾಹನ ಚಲಾಯಿಸುವಾಗ ದಾರಿ ತಪ್ಪದಂತೆ ನಿರ್ದೇಶಿಸುವವನಾಗಿರಬೇಕು.ಹೇಗೆ ವಾಹನ ಚಲಾಯಿಸಿದರೂ ಜೈ ಎನ್ನುವ ವ್ಯಕ್ತಿಗಳನ್ನು ಜೊತೆಯಲ್ಲಿಟ್ಟುಕೊಂಡರೆ ಅಪಘಾತವಾದಾಗ ಎಲ್ಲರೂ ಮಸಣ ಸೇರುವ ಸಾಧ್ಯತೆಯೇ ಹೆಚ್ಚು.....!

ಆಕಸ್ಮಿಕವಾಗಿಯೋ,ಸುಕೃತವಾಗಿಯೋ,ಪರಿಶ್ರಮದ ಫಲವಾಗಿಯೋ,ಅಧಿಕಾರ ಮತ್ತು ಅವಕಾಶಗಳು ದೊರೆಯುತ್ತವೆ.ಸಿಕ್ಕಾಗ ಹೊಗಳುಭಟರನ್ನು ಸೇರಿಸಿಕೊಂಡು ಕೇಕೆ ಹಾಕುವುದಲ್ಲ.ಒಂದೊಳ್ಳೆ ಟೀಮ್ ಕಟ್ಟಿ ಮತ್ತೊಂದು ಬೃಹತ್ ಅವಕಾಶದೆಡೆಗೆ ಜಿಗಿದು ಅಲ್ಲೊಂದು ಸಾಮ್ರಾಜ್ಯ ಕಟ್ಟಬೇಕು.ಒಳಿತನ್ನು ಬಯಸುವ ಜೊತೆಗಾರರನ್ನು ಬೆಳೆಸುವುದರ ಜೊತೆಗೆ ಕಾರ್ಯಕರ್ತರನ್ನು,ಜನ ಸಾಮಾನ್ಯರ ಬದುಕನ್ನು ಹೊಸ ರೂಪದೆಡೆಗೆ ಒಯ್ಯುವ ವ್ಯಕ್ತಿ ಮಾತ್ರಾ ಇತಿಹಾಸದಲ್ಲಿ ಉಳಿಯಬಲ್ಲ.
ಅಧಿಕಾರವೆಂಬುವುದು ಆಕಸ್ಮಿಕ.....ಅವಕಾಶವೆನ್ನುವುದು ಅಮೂಲ್ಯ........ಅದನ್ನು ಬಳಸಿ ಆಡಳಿತವೆಂಬ ಅನರ್ಘ್ಯ ರತ್ನವನ್ನು ಸೃಷ್ಟಿಸಬೇಕು.ಅಂತಹ ವ್ಯಕ್ತಿ ಮಾತ್ರಾ ನಾಯಕನಾಗಿ ಉಳಿಯಬಲ್ಲ ಮತ್ತು ಮಹಾನಾಯಕನಾಗಿ ಬೆಳೆಯಬಲ್ಲ......ಅಂತಹ ನಾಯಕರ ಜೊತೆ ನಾವಿರುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ.

ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347

Monday, June 21, 2021

ಕೈಮುಗಿದು ಕೇಳುತ್ತೇನೆ,ದಯವಿಟ್ಟು ಹೆಲ್ಮೆಟ್ ಧರಿಸಿ,ಜೀವ ಉಳಿಸಿಕೊಳ್ಳಿ....#ವೆಂಕಟೇಶಸಂಪ

ಕೈಮುಗಿದು ಕೇಳುತ್ತೇನೆ,
ದಯವಿಟ್ಟು ಹೆಲ್ಮೆಟ್ ಧರಿಸಿ,ಜೀವ ಉಳಿಸಿಕೊಳ್ಳಿ....#ವೆಂಕಟೇಶಸಂಪ


ಸಂಪದ ಸಾಲು ಪತ್ರಿಕೆಯ ಕೆಲಸ ಮುಗಿಸಿ,ತೋಟಕ್ಕೆ ಬಂದು ಅಲ್ಲೊಂದಿಷ್ಟು ಕೆಲಸ ಮುಗಿಸಿ ವಾಪಸ್ಸು ಪೇಟೆ ಮನೆಗೆ ಕಾರಿನಲ್ಲಿ ಬರುತ್ತಿದ್ದೆ.
ಸಾಗರಕ್ಕೆ 3 ಕಿಲೋಮಿಟರ್ ಇರುವ ರಸ್ತೆಯ ತಿರುವಿನಲ್ಲಿ ಟಿವಿಎಸ್ ಬೈಕ್ ಜೊತೆ ಯಾರೋ ಒಬ್ಬ ತಲೆ ಒಡೆದು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದನ್ನು ಕಂಡೆ.ರಸ್ತೆಯ ತುಂಬಾ ರಕ್ತ ಹರಿದಿತ್ತು.ಆತ ಆಕ್ಸಿಡೆಂಟ್ ಆಗಿ ಬಿದ್ದು ಬಹುಷಃ ಅರ್ಧ ಮುಕ್ಕಾಲು ಗಂಟೆಯೇ ಕಳೆದಿರಬಹುದು ಅನಿಸುತ್ತೆ.ಯಾವುದೋ ಲಾರಿಯೋ ದೊಡ್ಡ ವಾಹನ ಅಲ್ಲಿ ಬಿದ್ದ ವ್ಯಕ್ತಿಯ ತಲೆ ಮತ್ತು ಆತನ ಬೈಕ್ ಗೆ  ಕುಟ್ಟಿ ಹಿಟ್ ಎಂಡ್ ರನ್ ಆಗಿ ಹೋಗಿದೆ.ಮನುಷ್ಯತ್ವವನ್ನೇ ಕಳೆದುಕೊಂಡ ದುರುಳ ಹಿಟ್ ಎಂಡ್ ರನ್ ಮಾಡಿ ಪಲಾಯನ ಮಾಡಿದ್ದ.
ಮಾನವೀಯ ಮೌಲ್ಯಗಳೇ ನೆಲಕಚ್ಚಿದೆ ಎನ್ನುವುದಕ್ಕೆ ಉದಾಹರಣೆಯಂತಿತ್ತು ಇಂದಿನ ಘಟನೆ. ನಾ ಅಲ್ಲಿ ಬರುವ  ಮೊದಲು ತುಂಬಾ ವಾಹನಗಳು ಓಡಾಡಿದೆ.ಆದರೂ ಆ ಆಕ್ಸಿಡೆಂಟ್ ದೂರದಿಂದ ನೋಡಿ ಬಹುತೇಕ ಜನ ನಮಗ್ಯಾಕೆ ಈ ಗೊಡವೆ ಅಂತ ಓಡಿದ್ದಾರೆ.ಹಾಗೆ ಮಾಡೋಕೆ ಕಾರಣ ಹಿಂದೆ ಪೋಲೀಸ್ ನವರು ವಿಷಯ  ತಿಳಿಸಿದವರಿಗೆ,ಕಷ್ಟದಲ್ಲಿದ್ದವರಿಗೆ ನೆರವಾದವರಿಗೆ ಹೆದರಿಸಿದ ಘಟನೆ ಕಾರಣವಿರಬಹುದು. ಆದರೆ ಈಗ ಸುಪ್ರೀಮ್ ಕೋರ್ಟ್ ನ ಆದೇಶವಿದೆ.ಆಕ್ಸಿಡೆಂಟ್ ಆದಾಗ ಅವರಿಗೆ ಆರೈಕೆ ಮಾಡಿದವರಿಗೆ ಮತ್ತು ವಿಷಯ ತಿಳಿಸಿದವರಿಗೆ  ಯಾವುದೇ ಸಮಸ್ಯೆ ಮಾಡಬಾರದು ಎಂದು.
ಆದರೂ ನಮ್ಮ ಜನ ಬದಲಾಗಿಲ್ಲ.ಈಗಲೂ ಪೋಲಿಸ್ ಕಾರ್ಯವೈಖರಿಗೆ ಹೆದರಿ ಆಕ್ಸಿಡೆಂಟ್ ಆದವರಿಗೆ ಸಹಾಯ ಮಾಡಲು ಹೆದರುತ್ತಾರೆ.
ನಾನು ನಿಲ್ಲಿಸಿ,ಪೋಲಿಸ್ ಸ್ನೇಹಿತರಿಗೆ,ಅಂಬುಲೆನ್ಸ್ ಗೆ ಕರೆ ಮಾಡುವ ಪ್ರಯತ್ನದಲ್ಲಿದಾಗ ಹತ್ತಾರು ಜನ ಸಹಾಯಕ್ಕೆ ಬಂದರು. ಕೂಡಲೇ ವಿಳಾಸ ನೀಡಿದೆ.ಅಂಬುಲೆನ್ಸ್ ಬಂತು....ಆದರೆ ಸ್ಪಾಟ್ ಡೆತ್ ಅಂತ ಅದು ಅವನನ್ನು ಒಯ್ಯಲಿಲ್ಲ.ಅಷ್ಟೊತ್ತಿಗೆ ಸತ್ತ ವ್ಯಕ್ತಿಯ ಊರಿನವರು ಬಂದರು.ಪೋಲೀಸ್ ಕೂಡ ಬಂದರು.ಮುಂದಿನ ಕೆಲಸ ನೆಡೆಯಿತು.ಆದರೆ ಆ ಘಟನೆಯಲ್ಲಿ ಆ ವ್ಯಕ್ತಿಗೆ ತಲೆಗೆ ಹೊಡೆತ ಬಿದ್ದು ರಕ್ತ ಹರಿದ್ದು ಬಿಟ್ಟರೆ ದೇಹದ ಎಲ್ಲೂ ಪೆಟ್ಟಾಗಿರಲಿಲ್ಲ. ಆತ ಹೆಲ್ಮೆಟ್ ಹಾಕಿದ್ದರೆ ಬದುಕಿರುತ್ತಿದ್ದ.

ಛೇ ಜನಗಳೇಕೆ ಹೀಗೆ?
ಯಾವುದೇ ದ್ವಿಚಕ್ರ ವಾಹನದಲ್ಲಿ ಓಡಾಡುವಾಗ ಸವಾರನೇ ಆಗಿರಲಿ,ಹಿಂಬದಿ ಸವಾರನೇ ಆಗಿರಲಿ ಹೆಲ್ಮೆಟ್ ಧರಿಸಲೇಬೇಕು.ಎಟ್ಲೀಷ್ಟು ಪ್ರಾಣವಾದರೂ ಉಳಿಯುತ್ತಿತ್ತು.
ಪೋಲಿಸರು ಕಂಡ ಕೂಡಲೇ ಚಿಕ್ಕದೊಂದು ಟೋಪಿ ತರಹ ಹೆಲ್ಮೆಟ್ ಹಾಕಿ ತಪ್ಪಿಸಿಕೊಳ್ಳುವ ಕೆಲಸ ಮಾಡಬೇಡಿ.ನಿಮ್ಮನ್ನು ನಂಬಿ ನಿಮ್ಮ ಕುಟುಂಬವಿರುತ್ತದೆ.ನಿಮ್ಮನ್ನು ನಂಬಿ ನಿಮ್ಮನ್ನು ಇಷ್ಟಪಡುವ ಮಕ್ಕಳು,ಹೆಂಡತಿ,ಸ್ನೇಹಿತರು,ನೆಂಟರು ಇದ್ದಾರೆ.ಇಲ್ಲೇ ಸ್ವಲ್ಪ ದೂರ ಅಷ್ಟೆ ಹೆಲ್ಮೆಟ್ ಬೇಡ ಎಂಬ ಉದಾಸೀನ ಬೇಡ.ಒಂದೇ ಒಂದು ಕ್ಷಣದ ನಿರ್ಲಕ್ಷ್ಯ ,ಒಂದೇ ಒಂದು ತಪ್ಪು, ಜೀವನದ ಸರ್ವಸ್ವವನ್ನು ಕಳೆದುಕೊಳ್ಳುವಂತೆ ಮಾಡಿಕೊಳ್ಳಬೇಡಿ.ಕೈ ಮುಗಿದು ಕೇಳಿಕೊಳ್ಳುತ್ತೇನೆ.ಬೈಕ್ ಓಡಿಸುವವರು,ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ.ಜೀವ ಉಳಿಸಿಕೊಳ್ಳಿ. ದೊಡ್ಡ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ವೇಗಕ್ಕೆ  ದಯವಿಟ್ಟು ಮಿತಿ ಇರಲಿ.ಆ ಲಾರಿಯ ಹುಚ್ಚು ಡ್ರೈವಿಂಗ್ ಗೆ ಮತ್ಯಾರೋ ಅಮಾಯಕ ಬಲಿಯಾಗಿದ್ದನ್ನು ಕಂಡಾಗ ಮನಸ್ಸು ಮರುಗುತ್ತದೆ.
ದಾರಿಯಲ್ಲಿ ಎಲ್ಲೇ ಆಕ್ಸಿಡೆಂಟ್ ನಂತಹ ಅಪಾಯಗಳಾದಾಗ ಪೋಟೋ,ವೀಡಿಯೋ ತೆಗೆಯುತ್ತಾ ಕೂರಬೇಡಿ.ಪೋಲಿಸರಿಗೆ ಹೆದರಿ ಸೇವೆ ಮಾಡದೇ ಸುಮ್ಮನಿರಬೇಡಿ.ಅಂಬುಲೆನ್ಸ್ 108 ಅಥವಾ ಪೋಲಿಸ್ 112 ಕ್ಕೆ ಕರೆಮಾಡಿ.
ಮನುಷ್ಯತ್ವ ಹೊಂದಿದ ಮಾನವರಾಗೋಣ.ಜವಾಬ್ದಾರಿಯುತ ಮನುಷ್ಯರಾಗೋಣ.
ಜೀವ ಮುಖ್ಯ....ಮನುಷ್ಯತ್ವ ಮುಖ್ಯ.
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
sampadasaalu@gmail.com
Sampadasaalu.blogspot.com
9448219347

Friday, June 11, 2021

ಸರ್ವ ಬಣ್ಣ ಮಸಿ ನುಂಗಿತ್ತು.......ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ... ವೆಂಕಟೇಶ ಸಂಪ

ಸರ್ವ ಬಣ್ಣ ಮಸಿ ನುಂಗಿತ್ತು.......
ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ...
                       ವೆಂಕಟೇಶ ಸಂಪ


ಜೀವನವೇ ಹಾಗೆ....ಯಶಸ್ಸಿನ ಉತ್ತುಂಗಕ್ಕೆ ಪ್ರತಿ ಕ್ಷಣವೂ ಒದ್ದಾಡಬೇಕು..ಪರಿಶ್ರಮ ಪಡಬೇಕು.ಜೊತೆಗೆ ಅದೃಷ್ಟವೂ ಸೇರಬೇಕು.ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನಿಟ್ಟು ಸೌಧವೊಂದನ್ನು ನಿರ್ಮಿಸಿದಂತೆ ಪ್ರತಿ ಸಾಧನೆಗೆ,ಪ್ರತಿ ಯಶಸ್ಸಿಗೆ ತಪಸ್ಸನ್ನು ಮಾಡಲೇಬೇಕು.ಹೀಗೆ ಗಳಿಸಿದ ಯಶಸ್ಸು,ವರ್ಚಸ್ಸು,ಸಾಮಾಜಿಕ ಸ್ಥಾನ ಮಾನ ಬಹುಬೇಗ ನೀರುಪಾಲಾಗಬಲ್ಲದು. ಗಳಿಸಿದ ಹಣ ಅಥವಾ ಆಸ್ಥಿ ಉಳಿಯಬಹುದು.ಆದರೆ ಗಳಿಸಿದ ಹೆಸರು ಬಹುಬೇಗ ಹಾಳಾಗಬಲ್ಲದು.ಮತ್ತೆ ಅದನ್ನು ಸರಿ ಮಾಡಿಕೊಳ್ಳಲು ಮತ್ತೊಂದು ಬೃಹತ್ ಸಾಮಾಜಿಕ ಯಜ್ಞದಂತೆ ಕೆಲಸ ಮಾಡಬೇಕಾಗುತ್ತದೆ.

ಸಾಮಾಜಿಕ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ವಿಚಾರ ಬಹಳ ಮುಖ್ಯ .ಯಾಕೆಂದರೆ ಅವರಿಗೆ ಪ್ರತಿ ಕ್ಷಣವೂ ಮುಳ್ಳಿನ ಹಾಸಿನ ಮೇಲೆ ಪ್ರಯಾಣ ಮಾಡಿದಂತೆ.
ಸಾವಿರ ಜನಕ್ಕೆ ಸರಿ ಎನಿಸುವಂತೆ ಮಾಡಿದರೂ ಒಬ್ಬನಿಗೆ ತಪ್ಪಾಗಿ ಕಂಡರೆ ಅದನ್ನೂ ನಿರ್ಲಕ್ಷಿಸುವಂತಿಲ್ಲ.ಯಾಕೆಂದರೆ ಆ ಒಬ್ಬನೇ ನಾಳೆಯ ಸಾವಿರ ಜನರ ಮನಸ್ಥಿತಿ ಬದಲಿಸಬಲ್ಲ.
ಹಾಗಾಗಿ ಎಷ್ಟು ಸೂಕ್ಷ್ಮವಾಗಿದ್ದರೂ ಸಾಕಾಗುವುದಿಲ್ಲ.


ಇನ್ನೊಂದು ಬಹಳ ಮುಖ್ಯವೆಂದರೆ ಇದು ಆಧಿನಕತೆಯ ಜಗತ್ತು.ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗಿದೆ.
ಚಪ್ಪಾಳೆಗಾಗಿ ನಿನ್ನೆ ಆಡಿದ ಮಾತನ್ನು ನೀವೂ ಮರೆಯಬಹುದು.ಆದರೆ ಅದನ್ನು ಜನ ಮರೆತಿರುವುದಿಲ್ಲ. ಮತ್ತೆಲ್ಲೋ ದಾಖಲಾಗಿ ಪುರಾವೆಯೊಂದು ತಲೆಯೆತ್ತಿ ನಿಂತಿರುತ್ತದೆ.

ಚಪ್ಪಾಳೆಗಾಗಿ ಏನೇನೋ ಮಾತಾಡಬಾರದು.ನಾನು ನಾಳೆ ಅದಕ್ಕೆಷ್ಟು ಉತ್ತರದಾಯಿತ್ವನಾಗಿರಬಲ್ಲೆ ಎಂಬ ಪ್ರಜ್ಞೆ ಇರಬೇಕು.

ಒಂದು ಮಾತು,ಒಂದು ನಡವಳಿಕೆ,ಒಂದು ಘಟನೆ ನಮ್ಮನ್ನು ಎತ್ತರಕ್ಕೇರಿಸಬಲ್ಲದು,ಅದೇ ಪಾತಾಳಕ್ಕಿಳಿಸಬಲ್ಲದು.ಹಾಗಾಗಿ ಪ್ರತಿಕ್ಷಣದ ಜಾಗರೂಕತೆಯೇ ಇದಕ್ಕೆ ಪರಿಹಾರ.

ಭರವಸೆ ಕೊಡುವ ಮುನ್ನ ಎಚ್ಚರವಿರಲಿ:
ಯಾರೇ ಆಗಲಿ ನಮ್ಮ ಕೈಲಿ ಸಾಧ್ಯವಾಗಬಹುದಾದಕ್ಕೆ ಮಾತ್ರ ಭರವಸೆ ನೀಡಬೇಕು ಮತ್ತು ಅದನ್ನು ಈಡೇರಿಸಲು ಶ್ರಮಿಸಿ ಯಶಸ್ವಿಯಾಗಬೇಕು.

ನನಗೆ ಗೊತ್ತಿದ್ದ ಪ್ರಭಾವಿ ಭಾಷಣಕಾರ ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದರು.ಆದರೆ ಇಸಂಗೆ ಒಳಗಾಗಿ,ಯಾರನ್ನೋ ಹೊಗಳುವ ಬರದಲ್ಲಿ ಚಂದಮಾಮ ಕತೆಯಂತೆ ಏನೇನೋ ಹೇಳಿದ್ದರ ಪರಿಣಾಮ ಜೋಕರ್ ತರಹ ಟ್ರೋಲ್ ಆಗಿದ್ದನ್ನು ಕಂಡಿದ್ದೇನೆ.
ಮತ್ತೊಬ್ಬ ಪ್ರಭಾವಿ ನಾಯಕರು ಸುಳ್ಳು ಸುಳ್ಳು ಭಾಷಣ ಮಾಡಿದ ಪರಿಣಾಮ ನಗೆಪಾಟಲಾಗಿದ್ದನ್ನು,ಒಂದೇ ದಿವಸದಲ್ಲಿ ತನ್ನ  ವರ್ಚಸ್ಸನ್ನು ಪಾತಾಳಕ್ಕಿಳಿಸಿಕೊಂಡಿದ್ದನ್ನೂ ಗಮನಿಸಿದ್ದೇನೆ.

ಹಾಗಂತ ಇವರು ಕೆಲಸ ಮಾಡಿದ್ದರು.ಆದರೆ ಇವರ ಸುಳ್ಳು ಮತ್ತು ಟೊಳ್ಳು ಮಾತು  ಮಾಡಿದ ಕೆಲಸವನ್ನು ನಗಣ್ಯವಾಗಿಸಿಬಿಟ್ಟಿತು.

ಜನಸಾಮಾನ್ಯರ ಜೀವನದಲ್ಲಿ ಕೂಡ ಹೀಗೆಯೇ,
ಮಾತು,ನೆಡೆ,ಉಪಕಾರ ಮನೋವೃತ್ತಿ,ಕೆಲಸದ ಬದ್ಧತೆ,ಮಾತು ಕೃತಿ ಸಂಬಂಧ,ಇವೆಲ್ಲವೂ ಪ್ರತಿ ಕ್ಷಣವೂ ಬೇಕೇ ಬೇಕು...ಕಾನೂನಿಗಿಂತ ಮಾನವೀಯತೆ ಹಾಗೂ  ನಂಬಿದವರಿಗೆ ಸಹಾಯಕ್ಕಾಗಿ ಇರಬೇಕಾದ ಇಚ್ಛಾಶಕ್ತಿ ಬಹಳ ಮುಖ್ಯ ಎಂದು ವರ್ತಿಸಿದರೆ ಆ ವ್ಯಕ್ತಿತ್ವ ಹೊಳಪನ್ನು ಪಡೆಯುತ್ತದೆ.
ಒಳ್ಳೆಯವರಂತೆ ನಟಿಸಿದಾತ ಹೆಚ್ಚು ಕಾಲ ಉಳಿಯಲಾರ....ನಿಜವಾಗಿಯೂ ಒಳ್ಳೆಯವನಾದರೆ ಉಳಿಯಬಲ್ಲ.
ಅಭಿವೃದ್ಧಿ ಎಂದು ಭಾಷಣ ಮಾಡುವುದಕ್ಕೂ,ನಿಜವಾದ ಅಭಿವೃದ್ಧಿಗೂ ಬಹಳ ವ್ಯತ್ಯಾಸವಿದೆ.
ನಿಜವಾದ ಅಭಿವೃದ್ಧಿ ಮಾಡಿದಾತ ತಡವಾದರೂ ಗಟ್ಟಿಯಾಗಿ ಉಳಿಯುತ್ತಾನೆ.ಜೊಳ್ಳು ತೂರಿಹೋಗಿ ಗಟ್ಟಿ ಕಾಳು ಉಳಿದಂತೆ....ಎಚ್ಚರ ತಪ್ಪದೇ ನಾವು ನಾವಾಗಿದ್ದರೆ ಮಾತ್ರ ಉಳಿವು....ಇಲ್ಲದಿದ್ದರೆ ಕುಂಬಾರನಿಗೆ ವರುಷ...ದೊಣ್ಣೆಗೆ ನಿಮಿಷವೆಂಬಂತೆ,ಸರ್ವ ಬಣ್ಣ ಮಸಿ ನುಂಗಿತ್ತು ಎಂಬಂತಾಗುತ್ತದೆ....
ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

Saturday, May 15, 2021

ಒಳಿತು ಮಾಡು ಮನುಸಾ.......ನೀ ಬದುಕು ನೂರು ವರುಷಾ.........! ವೆಂಕಟೇಶ ಸಂಪ

ಒಳಿತು ಮಾಡು ಮನುಸಾ.......
ನೀ ಬದುಕು ನೂರು ವರುಷಾ.........!
       ವೆಂಕಟೇಶ ಸಂಪ


ಎಲ್ಲಿಗೆ ಬಂದು ನಿಂತಿದೆ ನೋಡಿ ಈ ಜಗತ್ತು.2019 ಡಿಸೆಂಬರ್ ಹೊತ್ತಿಗೆ ಚೀನಾದ ವುಹಾನ್ ನಗರದಲ್ಲಿ ಅದೆಂತೋ ವೈರಸ್ ಬಂದಿದೆಯಂತೆ,ಅದು ಅಟ್ಯಾಕ್ ಆದ ಕೆಲವೇ ದಿವಸಕ್ಕೆ ಜನ ಸಾಯ್ತಾ ಇದಾರಂತೆ.....ಅಂತ ಮಾತಾಡ್ತಾ ಇರೋ ಹೊತ್ತಿಗಾಗಲೇ ಇಡೀ ವಿಶ್ವವನ್ನೇ ವ್ಯಾಪಿಸಿಬಿಟ್ಟಿತು ನೋಡಿ.
ಆ ಕರಾಳ ವೈರಸ್ ಕೃತಕ ಸೃಷ್ಟಿಯೋ,ಮತ್ತೊಂದೋ ಎಂದು ತಿಳಿಯುವುದರೊಳಗೆ ಇಡಿ ಪ್ರಪಂಚವೇ ತತ್ತರಿಸಿ ಹೋಯಿತು..
ಬದ್ಧತೆಯಿಲ್ಲದ ಆಡಳಿತ ವ್ಯವಸ್ಥೆಯಲ್ಲಿದ್ದ ರಾಜಕಾರಣಿಗಳ ದೇಶದಲ್ಲಿ ಅತಿಯಾಗಿಯೇ ಕಾಡಿಬಿಟ್ಟಿತ್ತು ಈ ವೈರಸ್.
ಯಾಕೆಂದರೆ ಸಮಸ್ಯೆ ಬಂದಾಗ ಮಾತ್ರಾ ಒಬ್ಬ ನಾಯಕನ ಸಾಮರ್ಥ್ಯ ಅರ್ಥವಾಗಲು ಸಾಧ್ಯ.
ಜೊಳ್ಳು ಮತ್ತು ಬರೀ ಮಾತಿನ ನಾಯಕರಿದ್ದ ಕಡೆ ವ್ಯವಸ್ಥೆಗಿಂತ ಹೆಚ್ಚು ಅವ್ಯವಸ್ಥೆಯೇ ಮನೆ ಮಾಡಿರುತ್ತದೆ.
ಜೀವನದಲ್ಲಿ ಎಲ್ಲಾ ತಪ್ಪನ್ನು ನಾವೇ ಮಾಡಿ ತಿದ್ದಿಕೊಳ್ಳುವುದಲ್ಲ.ಬೇರೆಯವರ ತಪ್ಪಿನಿಂದಲೇ ನಾವು ತಿದ್ದಿ ಪರಿಹಾರ ಕಂಡುಕೊಳ್ಳುವುದು ಬುದ್ಧಿವಂತರ ಲಕ್ಷಣ.
ಮೊದಲ ಅಲೆಯಲ್ಲಿ ಭಾರತ ಅಷ್ಟೊಂದು ನರಳಲಿಲ್ಲ.ಬೇರೆ ದೇಶಗಳಲ್ಲಿ ಎರಡನೇ ಅಲೆಯ ಆರ್ಭಟ ಈಗ 6 ತಿಂಗಳ ಹಿಂದೆಯೇ ತಿಳಿದಿತ್ತು.ಆದರೆ ನಾವುಗಳು ಅದನ್ನೂ ಮರೆತಿದ್ದೆವು.ಮಾಸ್ಕ್ ಎಲ್ಲೋ ಬಿಸಾಡಿಯಾಗಿತ್ತು.ಅಂತರ ಎನ್ನುವುದು ಭಾರತೀಯರಿಗೆ ತಿಳಿದೇ ಇಲ್ಲ.ಮುಂದೊಂದು ದಿವಸ ಅತ್ಯಂತ ಕ್ಲಿಷ್ಟಕರ ಸ್ಥಿತಿ ಬರುತ್ತದೆ ಎಂದು ತಜ್ಞರು ಸಾವಿರ ಬಾರಿ ಎಚ್ಚರಿಸಿದರೂ ಆಡಳಿತದಲ್ಲಿದ್ದವರ ಚರ್ಮ ದಪ್ಪವಾಗಿತ್ತು.ಮತ್ತು ಚುನಾವಣೆಗೆ ಕೊಡುವ ಮಹತ್ವದ ಒಂದು ಅಂಶ ಈ ಕೊರೋನಾ ಸಮಸ್ಯೆಗೆ ಕೊಟ್ಟಿದ್ದರೆ ಸಾವಿರಾರು ಸಾವು ನೋವುಗಳು ತಪ್ಪುತ್ತಿತ್ತು ಎನ್ನುವುದು ತಜ್ಞರ ಅಭಿಪ್ರಾಯ.

ಕಳೆದು ಹೋದ ಘಟನೆಗಳನ್ನು ನೆನೆದು ಮುಂದಿನ ದಿವಸಗಳಿಗೆ ತಯಾರಾಗಬೇಕಿದೆ.
ವ್ಯಾಕ್ಸಿನ್ ಎಂಬ ಸಂಜೀವಿನಿ ಈಗಾಗಲೇ ಯಶಸ್ವಿಯಾಗಿದೆ.ದೇಶ ಮತ್ತು ದೇಶದ ಜನವೇ ಮೊದಲು.ಜೀವವಿದ್ದರೆ ಜೀವನ.140 ಕೋಟಿ ಜನ ಇರುವ ಭಾರತದಲ್ಲಿ ಪ್ರತಿಯೊಬ್ಬರು ಅತ್ಯಮೂಲ್ಯ ಸಂಪತ್ತುಗಳು.ಪ್ರತಿಯೊಬ್ಬರ ಆರೋಗ್ಯ ಮುಖ್ಯ.ತತ್ ಕ್ಷಣದಲ್ಲಿ ಬೇರೆಲ್ಲಾ ಕಾರ್ಯಗಳನ್ನು ಬದಿಗಿರಿಸಿ ಆರೋಗ್ಯ ಸೇವೆಗೆ ಪಣ ತೊಡಬೇಕಿದೆ. ಮೂರು,ನಾಲ್ಕು,ಐದು ಅಲೆಗಳಿವೆ ಎಚ್ಚರ ಎನ್ನುತ್ತಿದೆ ಎಲ್ಲಾ ವರದಿಗಳು. ಎರಡನೇ ಅಲೆಗೆ ಮೌನವಾದರೆ ಮುಂದಿನ ದಿನಗಳನ್ನು ಎದುರಿಸುವುದಾದರೂ ಹೇಗೆ?

ನಿಮ್ಮ ಕಾಳಜಿ ನಿಮಗೇ ಇರಲಿ.ಈ ಅಂಶಗಳ ಬಗ್ಗೆ ಗಮನವಿರಲಿ

ಫೇಸ್ಬುಕ್,ವಾಟ್ಸಪ್,ಟಿವಿ,ಪತ್ರಿಕೆ ಎಲ್ಲಿ ನೋಡಿದರಲ್ಲಿ ಬರೀ ಸಾವು ನೊವಿನ ಸುದ್ದಿ ಕಾಡುತ್ತಿದೆ.ಎಲ್ಲೆಂದರಲ್ಲಿ ಬೆಡ್,ಚಿಕಿತ್ಸೆ, ಆಕ್ಸಿಜೆನ್ ವೆಂಟಿಲೇಟರ್, ವಾಕ್ಸಿನ್ ಸಿಗದೇ ಜನ ಪರದಾಡುತ್ತಿದ್ದಾರೆ.ತನ್ನವರ ಉಳಿವಿಗಾಗಿ ಹೊಡೆದಾಡುತ್ತಿದ್ದಾರೆ.

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ನಾವುಗಳೇ ಅವಕಾಶವಾದಿಗಳಾಗುತ್ತಿದ್ದೀವಿ.ನೋಡಿ ಮೊನ್ನೆ ಮೊನ್ನೆಯವರೆಗೆ ಆಮ್ಲಜನಕ ಪರೀಕ್ಷಿಸುವ ಆಕ್ಸಿಮೀಟರ್ 200-300 ರೂಪಾಯಿ ಇದ್ದಿದ್ದು 2000-3000 ಮಾಡಿದ್ದಾರೆ.ಮಾತ್ರೆ ಔಷಧ ಬೆಲೆ ಏರಿಸಿಬಿಡುತ್ತಾರೆ. ಜನಕ್ಕೆ ಗಂಭೀರ ಸ್ಥಿತಿಯಲ್ಲಿದ್ದವರ ಹೆಸರಲ್ಲಿ ಇನ್ಯಾರೋ ಸ್ವಲ್ಪ ಅರಾಮಿಲ್ಲದವ ಬೆಡ್ ಮತ್ತು ಆಕ್ಸಿಜೆನ್ ಆಕ್ರಮಿಸಿಕೊಳ್ಳುತ್ತಾನೆ.
ತೀರಾ ಕಡಿಮೆ ಇದ್ದ ಆಕ್ಸಿಜೆನ್ ಬೆಲೆ ಗಗನಕ್ಕೇರಿದೆ.ಲ್ಯಾಬ್ ಪರೀಕ್ಷೆಯ ದರ ಆಗಸಕ್ಕೇರಿದೆ. 
ಕಡಿಮೆ ಬೆಲೆಗೆ ಎಲ್ಲರಿಗೂ ಸಿಗಬೇಕಾದ ಸೌಲಭ್ಯ ಮರೀಚಿಕೆಯಾಗಿಸಿ, ಅವ್ಯವಸ್ಥೆ ಆದರೂ ಇದನ್ನು ಸರಿಪಡಿಸುವವರಿಲ್ಲ.

ಮಾಧ್ಯಮಗಳು ಭಯ ಹುಟ್ಟಿಸುತ್ತಿವೆ ಅನಿಸಿದರೂ ನಮ್ಮ ದೇಶದ ದಪ್ಪ ಚರ್ಮದವರಿಗೆ ಮನವರಿಕೆ ಮಾಡಲು ಇದು ಅನಿವಾರ್ಯ ಅನಿಸುತ್ತದೆ.

ಇಷ್ಟೆಲ್ಲಾ ಅವ್ಯವಸ್ಥೆಯ ನಡುವೆ ಸಾವಿರಾರು ಜನ ನಿಸ್ವಾರ್ಥಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ವೈದ್ಯರು,ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು.ಫ್ರಂಟ್ ಲೈನ್ ವರ್ಕರ್ಸ್ಗಳು ಶ್ರಮಿಸುತ್ತಿದ್ದು ಅವರ ಕರ್ತವ್ಯಕ್ಕೆ ಎಲ್ಲರೂ ಭೇಷ್ ಅನ್ನಲೇಬೇಕು.  

ನಮ್ಮ ಜೀವ ನಮಗೆ ಮುಖ್ಯ.ಜೀವ ಇದ್ದರೆ ಜೀವನ.
ಒಂದೇ ಒಂದು ಕ್ಷಣವೂ ಮೈ ಮರೆಯಬೇಡಿ.ಕೆಲಸವಿಲ್ಲದೆ ಅಡ್ಡಾಡಬೇಡಿ.ಕುಂಟು ನೆಪ ಹೇಳಿ ತಿರುಗಬೇಡಿ.ಮಾಸ್ಕ್ ಧರಿಸೋದು ಕೀಳರಿಮೆ ಅಥವಾ ನಿರ್ಲಕ್ಷ್ಯದ ವಿಷಯ ಅಲ್ಲ.ಅಥವಾ ಪೋಲಿಸ್ ದಂಡ ವಿಧಿಸುತ್ತಾರೆಂಬ ಭಯಕ್ಕಲ್ಲ.ವೈರಸ್ ನಿಮ್ಮ ದೇಹ ಸೇರದಿರಲಿ ಎಂದು....
ಅಂತರ ಕಾಪಾಡಿಕೊಳ್ಳುವುದೂ ಕೂಡ ಅದಕ್ಕೇ.ವೈರಸ್ ಹಾರಿ ಬರುವುದಿಲ್ಲ.ಮನುಷ್ಯ ಅದನ್ನು ಹೊತ್ತು ತಿರುಗಿ ಹರಡಲು ಕಾರಣವಾಗುತ್ತಾನೆ.ಅದಕ್ಕಾಗಿಯೇ ಅಂತರ ಅನಿವಾರ್ಯ.

ವಾಕ್ಸಿನ್ ಸಿಕ್ಕಕೂಡಲೇ ಹಾಕಿಸಿಕೊಳ್ಳೋಣ.ಹುಡುಕಿ ಹಾಕಿಸಿಕೊಳ್ಳಿ.,

ಬಿಸಿ ಬಿಸಿ ಆಹಾರ ಮತ್ತು ಬಿಸಿ ನೀರು ಕುಡಿಯೋದು ಗಾರ್ಗಲಿಂಗ್ ಮಾಡೋದು ಮರೆಯಬೇಡಿ.

ಬಿಸಿ ನೀರಿನ ಹಬೆ ತೆಗೆದುಕೊಳ್ಳಿ (ದಿನಕ್ಕೊಮ್ಮೆಯಾದರೂ)

ವ್ಯಾಯಾಮ, ಪ್ರಾಣಾಯಾಮ ನಿಮ್ಮ ಮನಸ್ಸು ಮತ್ತು ದೇಹವನ್ನು ಸಧೃಡವಾಗಿಸಲು ಬಹಳ ಉಪಕಾರಿ.

ಸೆಲ್ಫ್ ಮೆಡಿಸಿನ್ ಮಾಡಬೇಡಿ.ನಿಮ್ಮ ಪರಿಚಿತ ಡಾಕ್ಟರ್ ಬಳಿ ಸಲಹೆ ಪಡೆದುಕೊಳ್ಳಿ.

ರೋಗ ಬಂದು ನರಳುವುದಕ್ಕಿಂತ ಜಾಗರೂಕತೆಯಿಂದ ಇರುವುದೇ ಅತ್ಯಂತ ಉಪಯೋಗಕಾರಿ.

 140 ಕೋಟಿ ಜನಸಂಖ್ಯೆಯ ಭಾರತದಲ್ಲಿ ವ್ಯವಸ್ಥೆಯನ್ನು ನಿಭಾಯಿಸೋದು ಕಷ್ಟ .
ನಮ್ಮ ಜೀವ ಮತ್ತು ನಮ್ಮ ಜೀವನ ನಾವೇ ರಕ್ಷಿಸಿಕೊಳ್ಳಬೇಕು.ಯಾಕೆಂದರೆ ಕೊರೋನಾಕ್ಕೆ ನೀವು ವೈರಸ್ ಇರುವ ಜಾಗವಷ್ಟೆ...
ಸರ್ಕಾರಕ್ಕೆ ನೀವು ಒಬ್ಬ ಸಂಖ್ಯೆಯಲ್ಲಿ ಜನ ಅಷ್ಟೇ.   
ರಾಜಕಾರಣಿಗಳಿಗೆ ಮತ್ತು ಪಕ್ಷಗಳಿಗೆ ನೀವು ಎನ್ನುವುದು ಚುನಾವಣೆಯ ಸಂದರ್ಭದಲ್ಲಿ ಒಂದು ಓಟು ಅಷ್ಟೆ.....
ಇಸಂ ಗೆ ಒಳಗಾದವರಿಗೆ,ವಿವೇಚನೆಯಿಲ್ಲದೇ ಎಲ್ಲದಕ್ಕೂ ಜೈಕಾರ ಹಾಕುವವರಿಗೆ ನೀವು ಒಂದು ಗುಂಪಿನಲ್ಲಿ ಗೋವಿಂದನಂತೆ  ಅಷ್ಟೆ.....
ಆದರೆ ನೆನಪಿರಲಿ.....ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನೀವು ಅತ್ಯಮೂಲ್ಯ.......
ಭಯಬೇಡ.... ಜಾಗರೂಕತೆಯಿಂದ ಇರೋಣ.ಮತ್ತು ಸೋಂಕಿತರಿಗೆ ಮತ್ತು ಕಷ್ಟದಲ್ಲಿರುವವರಿಗೆ ಕೈಲಾದ  ಸಹಾಯ ಮಾಡೋಣ.ಸೋಂಕಿತರಿಗೆ ಆದರೆ ಸಹಾಯ ಮಾಡಿ ಆದರೆ ಅವರನ್ನು ಅಸ್ಪೃಶ್ಯರ ರೀತಿ ನೋಡಬೇಡಿ.ನಾವು ಹೋರಾಡಬೇಕಾದ್ದು ರೋಗದ ವಿರುದ್ಧವೇ ವಿನಃ ರೋಗಿಯ ವಿರುದ್ಧವಲ್ಲ.
ವಸುಧೈವ ಕುಟುಂಬಕಂ ಎಂದ ದೇಶ ನಮ್ಮದು.ಸರ್ವೇ ಜನಾಃ ಸುಖಿನೋ ಭವಂತು ಅಂತ ಹರಸಿದ ನಾಡಿದು....ಎಲ್ಲರೂ ಚೆನ್ನಾಗಿದ್ದರೆ ಮಾತ್ರಾ ನಮ್ಮ ಏಳ್ಗೆ ಮತ್ತು ಅಧಿಕಾರ,ಸಂಪತ್ತಿಗೆ ಬೆಲೆ.....
ಎಲ್ಲರ ಬದುಕಿನಲ್ಲೂ ಸಂತೋಷ ಮತ್ತು ನೆಮ್ಮದಿ ನೆಲೆಸಲಿ.
ನಾವೆಲ್ಲರೂ ಖುಷಿಯಿಂದ ಒಳಿತು ಮಾಡುತ್ತಾ ನೂರು ವರುಷ ಬದುಕೋಣ.....

ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com
sampadasaalu.blogspot.com

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu