Monday, June 21, 2021

ಕೈಮುಗಿದು ಕೇಳುತ್ತೇನೆ,ದಯವಿಟ್ಟು ಹೆಲ್ಮೆಟ್ ಧರಿಸಿ,ಜೀವ ಉಳಿಸಿಕೊಳ್ಳಿ....#ವೆಂಕಟೇಶಸಂಪ

ಕೈಮುಗಿದು ಕೇಳುತ್ತೇನೆ,
ದಯವಿಟ್ಟು ಹೆಲ್ಮೆಟ್ ಧರಿಸಿ,ಜೀವ ಉಳಿಸಿಕೊಳ್ಳಿ....#ವೆಂಕಟೇಶಸಂಪ


ಸಂಪದ ಸಾಲು ಪತ್ರಿಕೆಯ ಕೆಲಸ ಮುಗಿಸಿ,ತೋಟಕ್ಕೆ ಬಂದು ಅಲ್ಲೊಂದಿಷ್ಟು ಕೆಲಸ ಮುಗಿಸಿ ವಾಪಸ್ಸು ಪೇಟೆ ಮನೆಗೆ ಕಾರಿನಲ್ಲಿ ಬರುತ್ತಿದ್ದೆ.
ಸಾಗರಕ್ಕೆ 3 ಕಿಲೋಮಿಟರ್ ಇರುವ ರಸ್ತೆಯ ತಿರುವಿನಲ್ಲಿ ಟಿವಿಎಸ್ ಬೈಕ್ ಜೊತೆ ಯಾರೋ ಒಬ್ಬ ತಲೆ ಒಡೆದು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದನ್ನು ಕಂಡೆ.ರಸ್ತೆಯ ತುಂಬಾ ರಕ್ತ ಹರಿದಿತ್ತು.ಆತ ಆಕ್ಸಿಡೆಂಟ್ ಆಗಿ ಬಿದ್ದು ಬಹುಷಃ ಅರ್ಧ ಮುಕ್ಕಾಲು ಗಂಟೆಯೇ ಕಳೆದಿರಬಹುದು ಅನಿಸುತ್ತೆ.ಯಾವುದೋ ಲಾರಿಯೋ ದೊಡ್ಡ ವಾಹನ ಅಲ್ಲಿ ಬಿದ್ದ ವ್ಯಕ್ತಿಯ ತಲೆ ಮತ್ತು ಆತನ ಬೈಕ್ ಗೆ  ಕುಟ್ಟಿ ಹಿಟ್ ಎಂಡ್ ರನ್ ಆಗಿ ಹೋಗಿದೆ.ಮನುಷ್ಯತ್ವವನ್ನೇ ಕಳೆದುಕೊಂಡ ದುರುಳ ಹಿಟ್ ಎಂಡ್ ರನ್ ಮಾಡಿ ಪಲಾಯನ ಮಾಡಿದ್ದ.
ಮಾನವೀಯ ಮೌಲ್ಯಗಳೇ ನೆಲಕಚ್ಚಿದೆ ಎನ್ನುವುದಕ್ಕೆ ಉದಾಹರಣೆಯಂತಿತ್ತು ಇಂದಿನ ಘಟನೆ. ನಾ ಅಲ್ಲಿ ಬರುವ  ಮೊದಲು ತುಂಬಾ ವಾಹನಗಳು ಓಡಾಡಿದೆ.ಆದರೂ ಆ ಆಕ್ಸಿಡೆಂಟ್ ದೂರದಿಂದ ನೋಡಿ ಬಹುತೇಕ ಜನ ನಮಗ್ಯಾಕೆ ಈ ಗೊಡವೆ ಅಂತ ಓಡಿದ್ದಾರೆ.ಹಾಗೆ ಮಾಡೋಕೆ ಕಾರಣ ಹಿಂದೆ ಪೋಲೀಸ್ ನವರು ವಿಷಯ  ತಿಳಿಸಿದವರಿಗೆ,ಕಷ್ಟದಲ್ಲಿದ್ದವರಿಗೆ ನೆರವಾದವರಿಗೆ ಹೆದರಿಸಿದ ಘಟನೆ ಕಾರಣವಿರಬಹುದು. ಆದರೆ ಈಗ ಸುಪ್ರೀಮ್ ಕೋರ್ಟ್ ನ ಆದೇಶವಿದೆ.ಆಕ್ಸಿಡೆಂಟ್ ಆದಾಗ ಅವರಿಗೆ ಆರೈಕೆ ಮಾಡಿದವರಿಗೆ ಮತ್ತು ವಿಷಯ ತಿಳಿಸಿದವರಿಗೆ  ಯಾವುದೇ ಸಮಸ್ಯೆ ಮಾಡಬಾರದು ಎಂದು.
ಆದರೂ ನಮ್ಮ ಜನ ಬದಲಾಗಿಲ್ಲ.ಈಗಲೂ ಪೋಲಿಸ್ ಕಾರ್ಯವೈಖರಿಗೆ ಹೆದರಿ ಆಕ್ಸಿಡೆಂಟ್ ಆದವರಿಗೆ ಸಹಾಯ ಮಾಡಲು ಹೆದರುತ್ತಾರೆ.
ನಾನು ನಿಲ್ಲಿಸಿ,ಪೋಲಿಸ್ ಸ್ನೇಹಿತರಿಗೆ,ಅಂಬುಲೆನ್ಸ್ ಗೆ ಕರೆ ಮಾಡುವ ಪ್ರಯತ್ನದಲ್ಲಿದಾಗ ಹತ್ತಾರು ಜನ ಸಹಾಯಕ್ಕೆ ಬಂದರು. ಕೂಡಲೇ ವಿಳಾಸ ನೀಡಿದೆ.ಅಂಬುಲೆನ್ಸ್ ಬಂತು....ಆದರೆ ಸ್ಪಾಟ್ ಡೆತ್ ಅಂತ ಅದು ಅವನನ್ನು ಒಯ್ಯಲಿಲ್ಲ.ಅಷ್ಟೊತ್ತಿಗೆ ಸತ್ತ ವ್ಯಕ್ತಿಯ ಊರಿನವರು ಬಂದರು.ಪೋಲೀಸ್ ಕೂಡ ಬಂದರು.ಮುಂದಿನ ಕೆಲಸ ನೆಡೆಯಿತು.ಆದರೆ ಆ ಘಟನೆಯಲ್ಲಿ ಆ ವ್ಯಕ್ತಿಗೆ ತಲೆಗೆ ಹೊಡೆತ ಬಿದ್ದು ರಕ್ತ ಹರಿದ್ದು ಬಿಟ್ಟರೆ ದೇಹದ ಎಲ್ಲೂ ಪೆಟ್ಟಾಗಿರಲಿಲ್ಲ. ಆತ ಹೆಲ್ಮೆಟ್ ಹಾಕಿದ್ದರೆ ಬದುಕಿರುತ್ತಿದ್ದ.

ಛೇ ಜನಗಳೇಕೆ ಹೀಗೆ?
ಯಾವುದೇ ದ್ವಿಚಕ್ರ ವಾಹನದಲ್ಲಿ ಓಡಾಡುವಾಗ ಸವಾರನೇ ಆಗಿರಲಿ,ಹಿಂಬದಿ ಸವಾರನೇ ಆಗಿರಲಿ ಹೆಲ್ಮೆಟ್ ಧರಿಸಲೇಬೇಕು.ಎಟ್ಲೀಷ್ಟು ಪ್ರಾಣವಾದರೂ ಉಳಿಯುತ್ತಿತ್ತು.
ಪೋಲಿಸರು ಕಂಡ ಕೂಡಲೇ ಚಿಕ್ಕದೊಂದು ಟೋಪಿ ತರಹ ಹೆಲ್ಮೆಟ್ ಹಾಕಿ ತಪ್ಪಿಸಿಕೊಳ್ಳುವ ಕೆಲಸ ಮಾಡಬೇಡಿ.ನಿಮ್ಮನ್ನು ನಂಬಿ ನಿಮ್ಮ ಕುಟುಂಬವಿರುತ್ತದೆ.ನಿಮ್ಮನ್ನು ನಂಬಿ ನಿಮ್ಮನ್ನು ಇಷ್ಟಪಡುವ ಮಕ್ಕಳು,ಹೆಂಡತಿ,ಸ್ನೇಹಿತರು,ನೆಂಟರು ಇದ್ದಾರೆ.ಇಲ್ಲೇ ಸ್ವಲ್ಪ ದೂರ ಅಷ್ಟೆ ಹೆಲ್ಮೆಟ್ ಬೇಡ ಎಂಬ ಉದಾಸೀನ ಬೇಡ.ಒಂದೇ ಒಂದು ಕ್ಷಣದ ನಿರ್ಲಕ್ಷ್ಯ ,ಒಂದೇ ಒಂದು ತಪ್ಪು, ಜೀವನದ ಸರ್ವಸ್ವವನ್ನು ಕಳೆದುಕೊಳ್ಳುವಂತೆ ಮಾಡಿಕೊಳ್ಳಬೇಡಿ.ಕೈ ಮುಗಿದು ಕೇಳಿಕೊಳ್ಳುತ್ತೇನೆ.ಬೈಕ್ ಓಡಿಸುವವರು,ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ.ಜೀವ ಉಳಿಸಿಕೊಳ್ಳಿ. ದೊಡ್ಡ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ವೇಗಕ್ಕೆ  ದಯವಿಟ್ಟು ಮಿತಿ ಇರಲಿ.ಆ ಲಾರಿಯ ಹುಚ್ಚು ಡ್ರೈವಿಂಗ್ ಗೆ ಮತ್ಯಾರೋ ಅಮಾಯಕ ಬಲಿಯಾಗಿದ್ದನ್ನು ಕಂಡಾಗ ಮನಸ್ಸು ಮರುಗುತ್ತದೆ.
ದಾರಿಯಲ್ಲಿ ಎಲ್ಲೇ ಆಕ್ಸಿಡೆಂಟ್ ನಂತಹ ಅಪಾಯಗಳಾದಾಗ ಪೋಟೋ,ವೀಡಿಯೋ ತೆಗೆಯುತ್ತಾ ಕೂರಬೇಡಿ.ಪೋಲಿಸರಿಗೆ ಹೆದರಿ ಸೇವೆ ಮಾಡದೇ ಸುಮ್ಮನಿರಬೇಡಿ.ಅಂಬುಲೆನ್ಸ್ 108 ಅಥವಾ ಪೋಲಿಸ್ 112 ಕ್ಕೆ ಕರೆಮಾಡಿ.
ಮನುಷ್ಯತ್ವ ಹೊಂದಿದ ಮಾನವರಾಗೋಣ.ಜವಾಬ್ದಾರಿಯುತ ಮನುಷ್ಯರಾಗೋಣ.
ಜೀವ ಮುಖ್ಯ....ಮನುಷ್ಯತ್ವ ಮುಖ್ಯ.
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
sampadasaalu@gmail.com
Sampadasaalu.blogspot.com
9448219347

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu