Wednesday, September 28, 2016

ಹರ್ಯಾಣದ ಹಾದಿಯಲ್ಲಿ, #ವೆಂಕಟೇಶಸಂಪ

ಹರ್ಯಾಣದ ಹಾದಿಯಲ್ಲಿ,  #ವೆಂಕಟೇಶಸಂಪ

ಕುರುಕ್ಷೇತ್ರ ಅಂದ ತಕ್ಷಣ ಯುದ್ದ ಭೂಮಿ ಮತ್ತು ಮಹಾಭಾರತ   ನೆನಪಿಗೆಬರುತ್ತದೆ. ಪಾಂಡವರು ಮತ್ತು ಕೌರವರು ತಮ್ಮ ಅಸ್ತಿತ್ವಕ್ಕಾಗಿ
18 ದಿನಗಳ ಕಾಲ ಯುದ್ದ ಮಾಡಿದ ಸ್ಥಳವೇ ಈ ಹರ್ಯಾಣ ಜಿಲ್ಲೆಯ ಕುರುಕ್ಷೇತ್ರ ಎಂಬ ಪೌರಾಣಿಕ ಹಿನ್ನೆಲೆಯಿದೆ.ಪ್ರಸ್ಥುತ ಒಂದು ಕೋಟಿ ಜನಸಂಖ್ಯೆಯ ಈ ಊರು 1947 ಕ್ಕೂ ಮೊದಲು  ಸ್ಥಾನೇಶ್ವರ ಎಂಬ ಹೆಸರಿದ್ದರೂ ಈಗ ಕುರುಕ್ಷೇತ್ರವಾಗಿ ಮಾರ್ಪಾಡಾಗಿದೆ.
ಇಲ್ಲಿ ನೋಡಬೇಕಾದ ಸ್ಥಳವೆಂದರೆ ಬ್ರಹ್ಮ ಸರೋವರ. ದ್ವಾಪರ ಮತ್ತು ತ್ರೇತಾ ಯುಗದ ಮದ್ಯದಲ್ಲಿ ಕ್ಷತ್ರಿಯ ರಾಜ ಕಾರ್ತ್ಯವೀರ್ಯನಿಂದ ಕಾಮಧೇನುವಿಗಾಗಿ  ಹತನಾದ ತಪಸ್ವಿ ಜಮಧಗ್ನಿ.ಅದರ ಸೇಡು ತೀರಿಸಿಕೊಳ್ಳಲು ಅವರ ಮಗನಾದ ಪರಶುರಾಮ 21 ಬಾರಿ ಭೂಮಂಡಲ ಸುತ್ತಿ ಕ್ಷತ್ರಿಯರನ್ನೆಲ್ಲಾ ನಾಶ ಮಾಡುತ್ತಾನೆ.ಆ ಸಂದರ್ಭದಲ್ಲಿ ಹರಿದ ನೆತ್ತರಿನ ಪರಿಣಾಮ ಈ ಸರೋವರವಾಗಿದೆ ಎಂಬುದು ಒಂದು ಕತೆಯಾದರೆ ಬ್ರಹ್ಮನೇ ಕುರುಕ್ಷೇತ್ರ ಯುದ್ದಕ್ಕಾಗಿ ನಿರ್ಮಿಸಿದ ಎನ್ನುವ ಕತೆಯೂ ಇದೆ.
ಯಾವುದು ಸರಿ ಎನ್ನುವುದು ನನಗೂ ತಿಳಿದಿಲ್ಲ.
ಕೃಶ್ಣನ ವಸ್ಥು ಸಂಗ್ರಹಾಲಯ,     ಜ್ಯೋತಿಸರ್ ಎಂಬ ಭಗವದ್ಗೀತೆ ಬರೆದ ಸ್ಥಳ,ಸ್ಥಾನೇಶ್ವರ ಮಹದೇವ ದೇವಸ್ಥಾನ,   
ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಪಿತಾಮಹನ ಬಾಯರಿಕೆ ಈಡೇರಿಸಲು ಅರ್ಜುನ ಬಾಣ ಹೂಡಿದಾಗ ನೀರು ಬಂದ ಪ್ರದೇಶವಾದ ಭೀಷ್ಮಕುಂಡವೆಂಬ ಸರೋವರ,ಭದ್ರಕಾಳಿ ದೇವಸ್ಥಾನ,ಇತರೆ,
ಉಳಿದಂತೆ ಇಲ್ಲಿ ರಸ್ತೆಗಳು ಚೆನ್ನಾಗಿವೆ,        ಅತಿ ಹೆಚ್ಚು ಭತ್ತ   ಬೆಳೆಯೋ ರಾಜ್ಯದಲ್ಲಿ ಇದೂ ಒಂದು.  1966 ರಲ್ಲಿ ಹರ್ಯಾಣ ರಾಜ್ಯವಾಯಿತು.90 ವಿಧಾನಸಭಾ ಕ್ಷೇತ್ರಗಳಿವೆ.  3 ಕೋಟಿ ಜನಸಂಖ್ಯೆಯ ಈ ರಾಜ್ಯದಲ್ಲಿ ಸ್ವಚ್ಚತೆ ಬರಬೇಕಾಗಿದೆ.ಪಂಜಾಬ್ ಮತ್ತು ಹರ್ಯಾಣ ಎರಡಕ್ಕೂ ಒಂದೇ ರಾಜಧಾನಿ ಅದು ಚಂಡೀಗಡ.ಇನ್ನೂ ಹೆಚ್ಚು ತಿಳಿಯಲು ಓದಿ ಸಂಪದ ಸಾಲು ಪತ್ರಿಕೆ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu