Saturday, September 24, 2016

ರಾಮ ಹುಟ್ಟಿದ ಊರಲ್ಲಿ ಶಾಂತಿ ನೆಲೆಸಲಿ, ಭಯದ ಜಾಗದಲ್ಲಿ ಭಕ್ತಿ ಮೂಡಲಿ, #ವೆಂಕಟೇಶಸಂಪ

ರಾಮ ಹುಟ್ಟಿದ ಊರಲ್ಲಿ ಶಾಂತಿ ನೆಲೆಸಲಿ,  ಭಯದ ಜಾಗದಲ್ಲಿ ಭಕ್ತಿ ಮೂಡಲಿ,  #ವೆಂಕಟೇಶಸಂಪ

ರಾಮರಾಜ್ಯದ ಕನಸು ಕಂಡಿದ್ದರು ನಮ್ಮ ಮಹಾತ್ಮ ಗಾಂಧೀಜಿ.  ರಾಮನ ಆದರ್ಶಗಳ ಕತೆಯಲ್ಲಿ ಬೆಳೆದಿದೆ ನಮ್ಮ ಭಾರತ. ಆತನ ರಾಜ್ಯ,ಆಡಳಿತ, ಜೀವನ ಪದ್ದತಿ,ಬದುಕಿನ ರೀತಿ,ಎಲ್ಲವೂ ನಮಗೆ ಮಾದರಿಯಾಗಿತ್ತು. ಆತನ ದರ್ಶನ,ಪೂಜೆಗಾಗಿ ಇಡೀ ವ್ಯವಸ್ಥೆ ಕಾಯುತ್ತಿತ್ತು.ಸಹನೆ,ತಾಳ್ಮೆಯ ಪ್ರತಿರೂಪದಂತಿತ್ತು ಆತನ ಜೀವನಗಾಥೆ. 
ಇಂತಿರುವ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲೀಗ ಬರೀ ಬಂದೂಕಿನ ಥೈಲಿಗಳು,ಬೂಟುಕಾಲಿನ ಟಪ್ ಟಪ್ ಶಬ್ದಗಳು,  ವೈರಿ ದೇಶದ ಬಾರ್ಡರ್ನಲ್ಲಿ ಸೈನಿಕರು  ತಪಾಸಣೆ ಮಾಡುವಂತೆ ಪ್ರತಿಯೊಬ್ಬರನ್ನು ನಾಲ್ಕು ಬಾರಿ ಚೆಕ್  ಮಾಡಿ ಸಣ್ಣ ಪೆನ್ನು ಕೂಡ ಬಿಡದಂತೆ ಎಸೆದು ಒಳಗೆಬಿಡುತ್ತಾರೆ.   ಮಂಗಗಳು ಅಲ್ಲಿಂದಿಲ್ಲಿಗೂ ಇಲ್ಲಿಂದಲ್ಲಿಗೂ ಜೋರು ಓಡಾಡುತ್ತವೆ,   ಯಾತ್ರಿಕರನ್ನು ಗಡಿಬಿಡಿಯಲ್ಲಿ ಮುಂದೂಡಿ ಕಳುಹಿಸುವ ತವಕದಲ್ಲಿ ಪೋಲಿಸ್ ಪಡೆ ಇರುತ್ತದೆ. ಅರ್ದ ಕಿಲೋಮೀಟರ್ ನೆಡೆದುಹೋದ ನಂತರ ಸಣ್ಣ ಮಂಟಪ ತೋರಿಸಿ ಅದುವೇ ರಾಮಜನ್ಮಭೂಮಿ ಎಂದಾಗ,ಪೋಲಿಸರು ಬಂದೂಕು ಹಿಡಿದು ಎದುರು ಬಂದು ಚಲೋ ಚಲೋ ಎಂದು ಕೂಗಿದಾಗ ಭಕ್ತಿಗಿಂತ ಭಯವೇ ಹೆಚ್ಚಾಗುತ್ತದೆ.

ರಾಮನೆಂಬ  ಮಹಾನುಭಾವ ನಮ್ಮ ಪವಿತ್ರ ಭಾರತದಲ್ಲಿ ರಾಜಕಾರಣಿಗಳಿಗೆ  ತಮ್ಮ ಓಟಿನ ಸರಕುಗಳು.   ಸಮಸ್ಯೆಗಳಿಲ್ಲದಿದ್ದರೂ ಸೃಷ್ಟಿಸಿಕೊಂಡು ಸರಿ ಮಾಡುತ್ತೇವೆಂಬ ಫೋಷಾಕು ತೋರಿಸುವ ಈ ಎಲ್ಲಾ ರಾಜಕೀಯ ಪಕ್ಷಗಳಿಗೆ ರಾಮನ ಆದರ್ಶಗಳಿಲ್ಲ.ರಾಮನ ಜನ್ಮಭೂಮಿ ಕಟ್ಟುತ್ತೇವೆ ಮತ್ತು  ಕಟ್ಟೊದಿಲ್ಲವೆಂಬ  ನಾಟಕದಲ್ಲಿ ಭಾರತೀಯರ ಭಾವನೆಗಳ ಜೊತೆ ಚೆಲ್ಲಾಟವಾಡಿ ಬೇಳೆ ಬೇಯಿಸಿಕೊಳ್ಳುವವರ ಎದುರು ರಾಮನ ಆದರ್ಶಗಳು    ಮರೆಯಾದರೂ,  ರಾಮನ ಫೋಟೋ ಮಾತ್ರಾ  ಸೇಲ್ ಆಗುತ್ತಿವೆ, ಪ್ರತಿ ಚುನಾವಣೆಗಳು ಬಂದಾಗಲೂ "ರಾಮ ಜನ್ಮ ಭೂಮಿ"ಸ್ಥಾಪನೆ   ಎಂಬ ನಾಣ್ಯ ಚಲಾವಣೆಯಾಗುತ್ತದೆ.
ಉತ್ತರ ಪ್ರದೇಶದ ಆಯೋಧ್ಯೆಯೂ ಎಲ್ಲೆಲ್ಲೂ ಕಸ ಕೊಳಕು ಹಾಕಿರುವ ಊರು,ಇಲ್ಲೂ ಮೋಸದ ಮಂದಿಗಳಿದ್ದಾರೆ.ದುಡ್ಡು ಪೀಕುವ ನಾಟಕದ ಜನರಿದ್ದಾರೆ.ಪುಣ್ಯ ಸಿಗುತ್ತದೆ ಇಷ್ಟು ದುಡ್ಡು ಕೊಡಿ ಎನ್ನುವವರಿದ್ದಾರೆ.  

ನಮ್ಮ ಕನಸಿನ ರಾಮ ಹುಟ್ಟಿದ ಊರಿನಲ್ಲಿ ಶಾಂತಿ ನೆಲೆಸಲಿ,
ಭಯದ ಜಾಗದಲ್ಲಿ ಭಕ್ತಿ ಮೂಡಲಿ,  #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu