Tuesday, September 27, 2016

ಉತ್ತರಾಖಂಡದಲ್ಲಿ ಉತ್ತರವ ಹುಡುಕುತ್ತಾ!#ವೆಂಕಟೇಶಸಂಪ

ಉತ್ತರಾಖಂಡದಲ್ಲಿ ಉತ್ತರವ ಹುಡುಕುತ್ತಾ!#ವೆಂಕಟೇಶಸಂಪ

2013 ಜೂನ್ ನಿಮಗೆ ನೆನಪಿರಬಹುದು.ಎಂದೂ ಕೇಳರಿಯದ ಪ್ರವಾಹ ಒಮ್ಮೆಗೆ ಪ್ರವಹಿಸಿ ಇಡೀ ಉತ್ತರಾಖಂಡ ,ಕೇದಾರನಾಥ್,ಬದರಿ ಮುಂತಾದೆಡೆ ಪ್ರಕೃತಿ ತನ್ನ ರೌದ್ರಾವತಾರಕ್ಕೆ ಕೆಡವಿಬಿಟ್ಟಿತ್ತು.ಹಿಮಾಲಯದ ಪ್ರಾರಂಭವಾದ ಹೃಷಿಕೇಶ ಕೂಡ ನಲುಗಿಹೋಗಿತ್ತು.
ಈಗ ಗಂಗಾಮಾತೆ ಶಾಂತಳಾಗಿದ್ದಾಳೆ.ತನ್ನ ಮುನಿಸು ತೊರೆದು ಪ್ರೀತಿಯಿಂದ ನಮ್ಮನ್ನು ನೋಡುತ್ತಾಳೆ.    ಹೃಷಿಕೇಶ ಮತ್ತು ಹರಿದ್ವಾರ ಎರಡೂ ಕೂಡ ಆಧ್ಯಾತ್ಮ, ಧ್ಯಾನ ,ದೇವರು, ಧರ್ಮದ ತಾಣ. ಇಲ್ಲಿ ಸಾಧು ಸಂತರುಗಳು ಇದ್ದಾರೆ.ಬಹುತೇಕ ಇಲ್ಲಿ ಇರುವುದು ಆಶ್ರಮಗಳು. 
ಲಕ್ಷ್ಮಣ ಜೋಕಾಲಿ(ಜೂಲಾ)ರಾಮ ಜೋಕಾಲಿ,ಸ್ವರ್ಗಾಶ್ರಮ,ಗೀತ ಭವನ ಹಾಗು ಗಂಗಾ ನದಿಯ ಸುಂದರ ಹರಿವು,  ಮಾನಸದೇವಿ ಮಂದಿರದ ರೋಪ್ ವೇ ಪ್ರಯಾಣ ಎಲ್ಲವೂ ಹಿತವೆನಿಸುತ್ತದೆ.
ಉತ್ತರಾಖಂಡ ರಾಜ್ಯದಲ್ಲಿರುವ  ಗಂಗೆ ಸ್ವಚ್ಚವಾಗಿದ್ದಾಳೆ.ಪವಿತ್ರ ಗಂಗೆ ಶುದ್ದವೂ ಅತಿಯಾದ ತಂಪು ಕೂಡ ಹೌದು.
ಲೆಕ್ಕವಿಲ್ಲದಷ್ಟು ಆಶ್ರಮಗಳು ಮತ್ತು ಸಾಧುಸಂತರುಗಳ ಮದ್ಯೆ ನಿಜವಾದ ಆಧ್ಯಾತ್ಮ ಮತ್ತು ದೇವರು ಹುಡುಕುವುದು ನಿಜಕ್ಕೂ ಕಷ್ಟಸಾಧ್ಯ.  ಅದೆಷ್ಟೋ ಜನರಿಗೆ ಬದುಕು ಕಲ್ಪಿಸಿಕೊಟ್ಟ ಗಂಗಾಮಾತೆಗೆ ಆರತಿ ಕಾರ್ಯಕ್ರಮ ದಿನವೂ ನೆಡೆಯುವುದರೊಂದಿಗೆ ಪ್ರಕೃತಿಯನ್ನು ಪೂಜಿಸಿ ಮತ್ತು ಸ್ವಚ್ಚವಾಗಿಡಿ ಎಂಬ ಸಂದೇಶವನ್ನು ಅರ್ಥಮಾಡಿಕೊಳ್ಳಬಹುದು.     
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu