Saturday, July 5, 2014

ವಿಮರ್ಶೆ ಮತ್ತು ಟೀಕೆ

ವಿಮರ್ಶೆ ಮತ್ತು ಟೀಕೆ -

ವಿಶ್ಲೇಷಣೆಗು ಮತ್ತು ಟೀಕೆಗು ವ್ಯತ್ಯಾಸವಿದೆ.ವಿಶ್ಲೇಷ­
ಣೆ ಪರಿವರ್ತನೆ ತರುವಂತಿರಬೇಕು.ಟೀಕೆ
ಎನ್ನುವುದು ಇನ್ನೊಬ್ಬರ ಬಗ್ಗೆ ತನ್ನ
ಕೊಳಕು ಮನಸ್ಸಿನ ಅನಾವರಣವೇ ವಿನಹ
ಅದರಿಂದ ಸಾಮಾಜಿಕ ಬದಲಾವಣೆ ಅಸಾದ್ಯ.
ವಿಚಾರಗಳಲ್ಲಿ ವೈರುಧ್ಯತೆ
ಇರಬಹುದು.ಆದರೆ ವ್ಯಕ್ತಿಯ ಮೇಲೆ
ದ್ವೇಷ ಇರಬಾರದು.ವಿಮರ್ಷಿಸುವ
ಮೊದಲು ಆ ವಿಚಾರದಲ್ಲಿ
ನಾವು ಪ್ರಾವೀಣ್ಯತೆಯನ್ನು ಹೊಂದಿರಬೇಕು.ಟೀಕಿಸುವವರ
ಬಗ್ಗೆ ತಲೆ ಕೆಡೆಸಿಕೊಳ್ಳಬಾರದು.ಏಕೆಂದರೆ
ನೆಗೆಟೀವ್ ಆಲೋಚನೆಗಳಿದ್ದವರಿಂದ
ಯಾವತ್ತೂ ಪ್ರಯೋಜನವಿಲ್ಲ.ವಿಕ್ರುತ
ಮನಸ್ಥಿತಿಯವರನ್ನು ದೂರವಿಟ್ಟು...ಸಕಾರಾತ್ಮ­
ಕವಾಗಿ ವಿಷಯವನ್ನು ವಿಶ್ಲೇಷಿಸಿದಾಗ
ಜ್ಞಾನ ಹೆಚ್ಚಾಗುವುದು..ಅದಕ್ಕೇ
ಹೇಳುವುದು.'ಸಗಣಿ ಜೊತೆ
ಸರಸವಾಡುವುದಕ್ಕಿಂತ ಗಂಧದ ಜೊತೆ
ಗುದ್ದಾಡಬೇಕು'ಅಂತ.
ರಾಜಕಾರಣಿಗಳು ಮತ್ತು ಕೀಳು ಅಭಿರುಚಿಯ
ಕೆಲವು ಬುದ್ದಿಜೀವಿಗಳು ಈ ತೆರನಾದ
ಟೀಕೆಯನ್ನು ಮಾಡುತ್ತಾರೆ.ಇವರಿಗೆ
ವಿಮರ್ಷಿಸುವ ತಾಳ್ಮೆ
ಇರುವುದಿಲ್ಲ.ಪುಕ್ಸಟ್ಟೆ ಪ್ರಚಾರ
ಸಿಗುತ್ತದೆ ಎಂಬ ಕಾರಣಕ್ಕೆ
ಯಾರ್ಯಾರನ್ನೋ ಟೀಕೆ
ಮಾಡುತ್ತಾರೆ.ಇತ್ತೀಚೆಗೆ ನರೇಂದ್ರ
ಮೋದಿಯ ಬಗ್ಗೆ
ಸಿದ್ರಾಮಯ್ಯನವರು ಕೊಟ್ಟ
ಹೇಳಿಕೆಯನ್ನೇ ನೋಡಿ.'ಯಾವುದೇ ಆಧಾರವಿಲ್ಲದೆ
ನರಹಂತಕ ಯೆಂದಿದ್ದರ ಪರಿಣಾಮ ತೀವ್ರ
ಮುಖಭಂಗಕ್ಕೆ ಈಡಾದರು.ಅನಂತಮೂರ್ತಿ
ದೇಶ ಬಿಟ್ಟು ಹೋಗುತ್ತೀನಿ ಅಂತ ಹೇಳಿಕೆ
ಕೊಟ್ಟು ನಗೆಪಾಟಲಾದರು.ಇವೆಲ್ಲವೂ
ಕೆಟ್ಟ ಟೀಕೆ ಗೆ ಉದಾಹರಣೆ.ಇಲ್ಲಿ
ಎದುರು ವ್ಯಕ್ತಿಯನ್ನು ಬೈಯ್ಯುವುದೇ ಉದ್ದೇಶವಾಗಿರುತ್ತದೆ..ಇಂತವರು ತಮ್ಮ
ವ್ಯಕ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಾರೆ.



ಓದಿ ಸಂಪದ ಸಾಲು
www.sampadasaalu.blogspot.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu