Tuesday, October 31, 2017

ಭಾಷಣದಿಂದ ಭಾಷೆ ಬೆಳೆಯುವುದಿಲ್ಲ, ಪ್ರೀತಿಸುವುದರಿಂದ ದೇಶ ಬೆಳೆಯುತ್ತದೆ ವೆಂಕಟೇಶ ಸಂಪ

ಭಾಷಣದಿಂದ ಭಾಷೆ ಬೆಳೆಯುವುದಿಲ್ಲ,
ಪ್ರೀತಿಸುವುದರಿಂದ ದೇಶ ಬೆಳೆಯುತ್ತದೆ
                         ವೆಂಕಟೇಶ ಸಂಪ

ನವೆಂಬರ್ ಒಂದು !
ಕನ್ನಡ ಕನ್ನಡ ಕನ್ನಡ ಅಂತ ಭಾಷಣ ಮಾಡಿ ಸಿಹಿ ತಿಂದು ಪೋಟೋಗೆ ಪೋಸ್ ಕೊಡುವ ಬಹುತೇಕ ಕನ್ನಡದ ಸ್ವಘೋಷಿತ ಹೊರಾಟಗಳಿಗಿಂತ,ಪತ್ರಿಕೆ ಟಿವಿ ಫೇಸ್ಬುಕ್ ವಾಟ್ಸಫ್ ಅಂತ ಕೇವಲ ಪ್ರಚಾರ  ಮಾಡೋದಕ್ಕಿಂತ ತುರ್ತಾಗಿ ಮಾಡಲೇಬೇಕಾದದ್ದು ಏನು ಗೊತ್ತಾ!?

ಕನ್ನಡದ ಪತ್ರಿಕೆಗಳನ್ನು ಖರೀದಿಸಿ ಓದುವುದನ್ನು ಕಲಿಯಬೇಕು.ಪಕ್ಕದ ಮನೆಯ ಪತ್ರಿಕೆಯನ್ನೇ ಹತ್ತು ಜನ ಓದುವುದಲ್ಲ,

ಕನ್ನಡದ ನಾಟಕ ಮತ್ತು ಯಕ್ಷಗಾನದಂತಹ  ಕಲೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ     ಅಂತಹ ಸಂಸ್ಥೆಗಳಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು.

ಕನ್ನಡದ ಸರ್ಕಾರಿ ಶಾಲೆಯಲ್ಲಿ ಓದುವವರಿಗೆ ಸಾಕಷ್ಟು ಸೌಲಭ್ಯ ಒದಗಿಸಬೇಕು.

ಬೇರೆ ಭಾಷೆ ಕಲಿಯಲಿ ಆದರೆ ಕನ್ನಡವನ್ನು ಕಡ್ಡಾಯ ಸಿಲಬಸ್ ಅಂತ ಮಾಡಬೇಕು,   

ಅಗತ್ಯ ವಸ್ತುಗಳನ್ನು ದೊಡ್ಡ ದೊಡ್ಡ ಮಲ್ಟಿನ್ಯಾಷನಲ್ ಕಂಪನಿಯ ಮಾಲ್ ಗಳಲ್ಲಿ ಖರೀದಿಸುವುದಲ್ಲ,ನಮ್ಮ ಕನ್ನಡಿಗರ ಸಣ್ಣ ಸಣ್ಣ ಅಂಗಡಿಗಳಿಗೆ,ನಮ್ಮ ಕನ್ನಡದ ಉತ್ಪನ್ನಗಳನ್ನು ಬಳಸಬೇಕು,  

ಆದರೆ ದುರಂತವೇನು ಗೊತ್ತಾ!
ಬಹುತೇಕರು ಕನ್ನಡದ ಪತ್ರಿಕೆಗೆ ಸಣ್ಣ ಪ್ರೋತ್ಸಾಹ ಕೂಡ ಕೊಡಲ್ಲ, ನಾಟಕ ಯಕ್ಷಗಾನ ಸಿನಿಮಾಗಳನ್ನು ದುಡ್ಡು ಕೊಟ್ಟು ನೋಡಲ್ಲ. ನಮ್ಮ ನಾಡು ನುಡಿಯ ಕೆಲಸಕ್ಕಿಂತ ಹೆಚ್ಚಾಗಿ ಎಲ್ಲೋ ಆದ ಗಲಾಟೆಗೆ ನಮ್ಮ ಕರ್ನಾಟಕವನ್ನೇ ಬಂದ್ ಮಾಡಿ ನಮ್ಮ ಕನ್ನಡಿಗರಿಗೇ ತೊಂದರೆ ಕೊಟ್ಟರೆ ಏನು ಲಾಭ!?
ಕನ್ನಡ    ಅನ್ನೋದು ನಮ್ಮ ಮಾನಸಿಕತೆಯ ಭದ್ರ ನೆಲೆ ಆಗಬೇಕು ಆಗ ಮಾತ್ರಾ ಕನ್ನಡಕ್ಕೆ ಬೆಲೆ,
ನಮ್ಮತನ ಎನ್ನುವುದು  ಪ್ರಚಾರಕ್ಕೆ ಮಾತ್ರಾ ನಿಂತು  ಕೇವಲ ನವೆಂಬರ್ ಗೆ  ಸೀಮಿತವಾದರೆ ಕಟ್ಟುವುದಾದರೂ ಏನನ್ನು! ? 

ನಮ್ಮ ಆಲೋಚನೆಗಳು ಕನ್ನಡ ,ನಮ್ಮ ಕನಸುಗಳು ಕನ್ನಡ,ನಮ್ಮ ಉಸಿರು ಕನ್ನಡ,ನಮ್ಮ ಹೆಸರು ಕನ್ನಡ,ನಮ್ಮ ಬದುಕು ಕನ್ನಡ,ನಾವು ಕನ್ನಡ,ನಾನು ಕನ್ನಡ,ನಮ್ಮ ಸಂಪದ ಸಾಲು ಪತ್ರಿಕೆ ಕನ್ನಡ,ನನ್ನ ಬೆಂಬಲ ಕನ್ನಡಕ್ಕೆ ಎಂಬ ಮಾನೋಭಾವ ಮೂಡಿದ ದಿನವೇ ನಾವು ಸ್ವಾಭಿಮಾನಿ ಕನ್ನಡ  ನಾಡು ಸರ್ವರೀತಿಯಲ್ಲೂ ಸಂಪದವಾಗಬಲ್ಲದು, 
ಕಟ್ಟೋಣ ಕನ್ನಡ ನಾಡು ಬೆಳೆಸೋಣ ನಮ್ಮ ಬೀಡು!
ಜೈ ಕನ್ನಡಾಂಬೆ,
9448219347

#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Sunday, August 6, 2017

ಡಿಜಿಟಲ್ ಜಗತ್ತಿನ ಹುಡುಕಾಟದ ದಿವಸದಲ್ಲಿ, ಟಿಕೇಟ್ ಕಳೆದುಕೊಂಡಿದ್ದ ಪ್ರಯಾಣಿಕ ಜೊತೆಯಲ್ಲಿ,!!!! #ವೆಂಕಟೇಶಸಂಪ

ಡಿಜಿಟಲ್ ಜಗತ್ತಿನ ಹುಡುಕಾಟದ ದಿವಸದಲ್ಲಿ,
ಟಿಕೇಟ್ ಕಳೆದುಕೊಂಡಿದ್ದ ಪ್ರಯಾಣಿಕ ಜೊತೆಯಲ್ಲಿ,!!!!
#ವೆಂಕಟೇಶಸಂಪ

ಉತ್ತರ ಕರ್ನಾಟಕದ ಗುಲ್ಬರ್ಗಾದ ಕಡೆ ಕೆಲಸದ  ನಿಮಿತ್ತ ಹೊರಟಿದ್ದೆ.ಸಂಪದ ಸಾಲು ಕೆಲಸಕ್ಕೆಂದು ಸಾಗರದಿಂದ ಬಸ್ಸು ಹತ್ತಿ ಶಿವಮೊಗ್ಗ ಕ್ಕೆ ಬಂದು ಅಲ್ಲಿಂದ ಗುಲ್ಬರ್ಗಾದ ಬಸ್ಸು ಹತ್ತಿದ್ದೆ. ಸ್ಲೀಪರ್ ಕೋಚ್ ಬಸ್ಸ್  ಚಲಿಸುತ್ತಿತ್ತು,ಸರ್ಕಾರದ ಸ್ಲೀಪರ್ ಕೋಚ್ ಬಸ್ಸ್ ಪ್ರಯಾಣಿಕರನ್ನು ಹೊತ್ತು ಹೊರಟಿತ್ತು.ಎಲ್ಲರಿಗೂ ಟಿಕೇಟ್ ನೀಡಿದ ಕಂಡಕ್ಟರ್ ಎಷ್ಟೋ ಹೊತ್ತಿನ ನಂತರ     ಒಬ್ಬನ ಜೊತೆ ಜೋರಾಗಿ ಜಗಳ ಆಡುತ್ತಿದ್ದ. ಜಗಳ ತಾರಕಕ್ಕೇರಿತ್ತು.
ಇದೆಂತ ಗಲಾಟೆ ಅಂತ  ನಾನೂ ಎಂಟ್ರಿ ಕೊಟ್ಟೆ.   
ಕಂಡಕ್ಟರ್ ಟಿಕೇಟ್ ಕೊಟ್ಟಿದ್ದ.  ಪ್ರಯಾಣಿಕ ಎಲ್ಲೋ ಅದನ್ನು ಕಳೆದುಕೊಂಡಿದ್ದ. 
ನೀ ಇನ್ನೊಂದು ಟಿಕೇಟ್ ತೆಗೆದುಕೋ ಇಲ್ಲಾ   ಇಲ್ಲೇ ಇಳಿ ಅಂತ ನಡು ರಸ್ತೇಲಿ ಚಲಿಸುತ್ತಿದ್ದ ಬಸ್ಸಲ್ಲಿ ಕೂಗುತ್ತಿದ್ದ.ಆತ ಅಣ್ಣ ಎಲ್ಲೋಯ್ತು ಗೊತ್ತಿಲ್ಲ.ಮತ್ತೆ ದುಡ್ಡು ಕೊಡೋಕಾಗಲ್ಲ ಅಂತ ಕೇಳ್ತಿದ್ದ.
ಎನ್ರಪಾ       ಕತೆ ಅಂದೆ ನಾನು,
ನೋಡ್ರಿ ಇವನು ಟಿಕೇಟ್ ಕಳ್ಕೊಂಡಿದಾನೆ.ಚೆಕಿಂಗ್ ಗೆ ಬಂದರೆ ನಮ್ ಕೇಳ್ತಾರೆ ಅಂದ ಕಂಡಕ್ಟರ್,
ಅಣ್ಣಾ ನನ್ ಹತ್ರ ಇದ್ದ ದುಡ್ಡು ಕೊಟ್ಟು    ಟಿಕೇಟ್ ತಗೊಂಡೆ.ಎಲ್ಲೋ ಬಿದ್ದೋಯ್ತು.ಏನ್ಮಾಡ್ಲಿ?ಮತ್ತೆ ದುಡ್ಡು ಕೊಡೋಕಾಗಲ್ಲ ಅಂದ.
ಅವರ ಜಗಳ ನೋಡಿಯೂ ಸುಮ್ಮನಿದ್ರು ಜನ.
ಅಲ್ರೀ ಕಂಡಕ್ಟರ್ ನಿಮ್ಮ ಟಿಕೇಟ್ ಮಶೀನ್ ಅಲ್ಲಿ ಟಿಕೇಟ್ ಎಂಟ್ರಿ ಇದೆ ಅಲ್ವಾ?ಈತನಿಗೆ ನೀವು ಟಿಕೇಟ್ ಕೊಟ್ಟಿದ್ದಲ್ವಾ?ಟಿಕೇಟ್ ನಂಬರ್ ನಿಮ್ಮ ಹತ್ರ ಇದೆ ತಾನೆ?ಬಸ್ಸಲಿ ಇರೋ ಜನಕ್ಕು ನಿಮ್ಮ ಮಶಿನ್ ತೋರ್ಸೋ ಟಿಕೇಟ್ ಕೌಂಟ್ ಗು ಸರಿ ಇದೆ ತಾನೆ?ಮತ್ಯಾಕ್ರಿ ಟಾರ್ಚರ್ ಮಾಡ್ತಿರಿ ಅಂದೆ,    
ಆತ ಸುಮ್ಮನಾದ. ಮತ್ತೆ ಎರಡು ನಿಮಿಷಕ್ಕೆ ಆ ಹುಡಗನಿಗೆ ಗಲಾಟೆ  ಮಾಡೋಕೆ ಶುರು ಮಾಡಿದ.ದುಡ್ಡು ಕೊಡು ಇಲ್ಲಾ ಇಳಿ !
ಈಗ ನಾನು ಸುಮ್ಮನಿದ್ರೆ ಸರಿ ಅಲ್ಲ ಅಂತ ಕನ್ಫರ್ಮ್ ಆಯ್ತು.  ಎನಯ್ಯಾ, ನಿಮ್ಮ ಡಿಪೋ ಮ್ಯಾನೇಜರ್ ಗೆ ಮಾತಾಡ್ಲಾ ಅಥವ ನಿಮ್ಮ ಎಂ ಡಿ ಗೆ ಮಾತಾಡ್ಲಾ ಅಥವಾ ನಿಮ್ಮ ಮಿನಿಸ್ಟರ್ ಗೆ ಪೋನ್ ಮಾಡ್ಲಾ?ನಾಟ್ಕ ಮಾಡ್ತಿರಾ? ಪ್ರಯಾಣಿಕಂಗೆ ತೊಂದರೆ ಮಾಡ್ತಿರಾ?  ಡಿಜಿಟಲ್ ಇಂಡಿಯಾ ಅಂತ ಮಾಡ್ತಿದಾರೆ, ಪೇಪರ್ ಲೆಸ್ಸ್ ಮಾಡೋ ಈ ದಿನಗಳಲ್ಲಿ ಟಿಕೇಟ್ ಅಂತ ಕೂಗಾಡ್ಬೇಡಿ.ಚೆಕಿಂಗ್ ಗೆ ಬಂದರೆ ನಾನೇ ಮಾತಾಡ್ತಿನಿ ಅಂದೆ.ಈಗ ಕಂಡಕ್ಟರ್ ಮುಖ ಸಣ್ಣಗಾಯ್ತು. ಕೂಗಾಡೋದಲ್ರೀ ಸ್ವಾಮಿ; ತಪ್ಪು ಮಾಡಿದವರಿಗೆ ಬಿಡಿಸಿ ಹೇಳ್ಬೇಕು  ವಿನಃ ಟಿಕೇಟ್ ಕಳ್ಕೊಂಡ ಅಂತ ನಡು ರಸ್ತೇಲಿ ಮದ್ಯ ರಾತ್ರಿ ಇಳ್ಸೋದಲ್ರೀ ಕಂಡಕ್ಟರ್ ಸಾಹೇಬ್ರೇ ಅಂದೆ.
ನಂಗೆ ಟಿಕೇಟ್ ಕೊಡುವಾಗಲೇ ನಾನು ಜರ್ನಲಿಸ್ಟ್ ಅಂತ ತಿಳಿದಿದ್ದ ಕಂಡಕ್ಟರ್ ಸೈಲೆಂಟ್    ಆದ.ಬಸ್ಸು ನಿದಾನವಾಗಿ ಚಲಿಸುತ್ತಿತ್ತು.ಆ ಪ್ರಯಾಣಿಕ ಅಣ್ಣಾ ಥ್ಯಾಂಕ್ಸ್ ಅನ್ನುತ್ತಾ ಸ್ಲೀಪರ್ ಕೋಚ್ ಬಸ್ಸಿನ ಸೀಟು ಏರಿದ.
ಸ್ವಲ್ಪವೇ ಕಿಟಕಿ ತೆಗೆದುಕೊಂಡು ಪ್ರಯಾಣಿಸುತ್ತಿದ್ದ ನನಗೆ ಹೊರಗಡೆಯಲ್ಲಿ ಆಕಾಶದ ಶಶಿ ನನ್ನನ್ನು ನೋಡಿ ಮುಗುಳ್ನಕ್ಕಂತೆ ಅನಿಸಿತ್ತು,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Sunday, July 30, 2017

Sunday, July 23, 2017

ರಸ್ತೆಯಲ್ಲಿಯೇ ಮಳೆಯ ನೀರು ಇಂಗುವುದರ ಜೊತೆಗೆ ಭತ್ತದ ನಾಟಿ ಮಾಡಲು ಅವಕಾಶ ಮಾಡಿಕೊಟ್ಟ ಕಂದಾಯ ಮಂತ್ರಿ ಮತ್ತು ಶಾಸಕರಾದ ಕಾಗೋಡು ತಿಮ್ಮಪ್ಪನವರಿಗೆ ಹಾಗು ಸಂಸದರಾದ ಯಡ್ಯೂರಪ್ಪನವರಿಗೆ ಅಭಿನಂದನೆಗಳು. !?

ರಸ್ತೆಯಲ್ಲಿಯೇ ಮಳೆಯ ನೀರು ಇಂಗುವುದರ ಜೊತೆಗೆ ಭತ್ತದ ನಾಟಿ ಮಾಡಲು ಅವಕಾಶ ಮಾಡಿಕೊಟ್ಟ
ಕಂದಾಯ ಮಂತ್ರಿ ಮತ್ತು ಶಾಸಕರಾದ ಕಾಗೋಡು ತಿಮ್ಮಪ್ಪನವರಿಗೆ ಹಾಗು ಸಂಸದರಾದ ಯಡ್ಯೂರಪ್ಪನವರಿಗೆ   ಅಭಿನಂದನೆಗಳು. !?

ಇದು ಸಾಗರ ತಾಲೂಕಿನ ಬೆಂಗಳೂರು ಮತ್ತು ಮಂಗಳೂರು ರಸ್ತೆಗೆ ಸೇರುವ ಬೈಪಾಸ್ ರಸ್ತೆ.ಗಡಿಕಟ್ಟೆಯಿಂದ ನಂದಿಕೆರೆ ಮೇಲೆ ಉಳ್ಳೂರು ಸೇರುವ ಬಹುಪಯೋಗಿ ರಸ್ತೆ.
ಕಳೆದ ಹತ್ತಾರು ವರ್ಷದಿಂದ ಈ ರಸ್ತೆಯ ಅಭಿವೃದ್ದಿಗಾಗಿ ಇಲ್ಲಿನ ಜನ      ಬೇಡಿಕೆ ಇಟ್ಟಿದ್ದರು.
ಕರ್ನಾಟಕದ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿ ಮತ್ತು ಅತ್ಯಂತ ಹಿರಿಯ ವಯಸ್ಸಿನ ಶಾಸಕರು ಪವರ್ಫುಲ್   ಕಂದಾಯ ಇಲಾಖೆಯ ಮಂತ್ರಿಗಳು ಆದ ಸನ್ಮಾನ್ಯ ಕಾಗೋಡು ತಿಮ್ಮಪ್ಪನವರು ಈ ತಾಲೂಕಿನ ಜನಪ್ರತಿನಿಧಿಗಳು.
ಹತ್ತಾರು ಬಾರಿ ಮನವಿ ಸಲ್ಲಿಸಿದರೂ ತಲೆ ಎತ್ತಿ ಕೂಡ ನೋಡದೇ ರಸ್ತೆ ಮಾಡದೇ ಕ್ಷೇತ್ರದ ಹಿತ ಕಾಪಾಡಿದ ಇಂತಹ ಜನಸೇವಕರಿಗೆ ಮೊದಲನೆಯದಾಗಿ ಈ ಬಾಗದ ಜನಗಳು ಅಭಿನಂಧಿಸಿದ್ದಾರೆ.

ಬಿಜೇಪಿಯ ರಾಜ್ಯಾಧ್ಯಕ್ಷರಾದ ಯಡ್ಯೂರಪ್ಪನವರು ಈ ಭಾಗದ ಸಂಸತ್ ಸದಸ್ಯರು.          ನರೇಂದ್ರ ಮೋದಿಯವರ ಕನಸಿನ ಭಾರತಕ್ಕೆ ಕೊಡುಗೆಯಾಗಿ     ಈ ಇಂಗುಗುಂಡಿ ಸಹಿತ ಗದ್ದೆಯಂತೆ ರಸ್ತೆ ನಿರ್ಮಿಸಲು ಈ ಬಾರಿ 3 ಲಕ್ಷ ನೀಡಿದ್ದಾರೆ.ಅದ್ಯಾರೋ ಪುಣ್ಯಾತ್ಮ ಕಂಟ್ರಾಕ್ಟರ್, ಜನಗಳು ನೆಡೆಯಲು ಆಗದ     ಸೂಪರ್ ರಸ್ತೆ ನಿರ್ಮಿಸಿ ಗಿನ್ನಿಸ್ ಧಾಖಲೆ ಸೇರುವಂತೆ ರಸ್ತೆ ನಿರ್ಮಿಸಿದ್ದಕ್ಕೆ ಇಂಜಿನೀಯರ್ ಗಳು ಕಾಮಗಾರಿ ಪರಿಶೀಲಿಸದೇ ಬಿಲ್ ನೀಡಿ ಗೌರವಿಸಿದ್ದಾರೆ.

ಇಂತಹ ಮಹತ್ಕಾರ್ಯ ಮಾಡಿದ ಕಂದಾಯ ಇಲಾಖೆ  ಮಂತ್ರಿಗಳಾದ ಕಾಗೋಡು ತಿಮ್ಮಪ್ಪನವರಿಗೆ  ಮತ್ತು ಸಂಸದರಾದ ಯಡ್ಯೂರಪ್ಪನವರಿಗೆ ಹಾಗೂ ಇಂತಹ ಸೂಪರ್ ರಸ್ತೆ ಮಾಡಿದ ಕಂಟ್ರಾಕ್ಟರ್ ಗೆ ಹಾಗು ಇದನ್ನು ನೋಡದೇ ಬಿಲ್ ಪಾವತಿಸಿದ ಸಾಗರದ ಇಂಜಿನೀಯರ್ ಗಳಿಗೆ ಅಭಿನಂದಿಸಲು ಈ ಊರಿನ ಜನ ತೀರ್ಮಾನಿಸಿದ್ದಾರೆ.ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಇಂತಹ ಸಾಧಕರಿಗೆ ನಿಮ್ಮ ಅನಿಸಿಕೆ ತಿಳಿಸಿ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ       

Sunday, July 9, 2017

ಯಾರು ಗುರು?

ಯಾರು ಗುರು?
ವರ್ಣ ಮಾತ್ರಂ ಕಲಿಸಿದಾತಂ ಗುರು,
ಅಕ್ಷರವೊಂದನ್ನು ಹೇಳಿಕೊಟ್ಟವರನ್ನು ಗುರು ಎನ್ನಲೇಬೇಕು.  
ಬದುಕಿನ ನಿತ್ಯ ಪಯಣದಲ್ಲಿ ಪ್ರತಿ ಹೆಜ್ಜೆಯಲ್ಲೂ ಏನೇನನ್ನೋ,ಯಾರ್ಯಾರಿಂದಲೋ ಕಲಿಯುತ್ತಲೇ ಇರುತ್ತೇವೆ.
ಹುಟ್ಟಿದ ಕ್ಷಣದಿಂದ ಪ್ರಾರಂಭವಾದ ಬದುಕಿನ ಪಯಣದಲ್ಲಿ ಅಮ್ಮ ಅಪ್ಪ ಶಿಕ್ಷಕ ಸ್ನೇಹಿತ ಸಮಾಜ,ಸಂದರ್ಭ ,ಕೆಲವು ಘಟನೆಗಳು,     ಕೆಲವೊಮ್ಮೆ ನಮಗೆ ನಾವು ಗುರುಗಳಾಗುತ್ತೇವೆ,
ಪ್ರತಿಕ್ಷಣದ ಕಲಿಕೆಯೇ ಒಂತರದ  ನಿಜವಾದ ಗುರುಗಳ  ಹುಡುಕಾಟ ಅಲ್ಲವೇ?
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Friday, April 7, 2017

ನೆನಹುಗಳ ಸರಮಾಲೆ venkatesha sampa

ನೆನಹುಗಳ ಸರಮಾಲೆ

ಬದುಕೆಂಬ ಬರಹದ ಮುನ್ನುಡಿಯ
ಬಾಲ್ಯದ ಚಿತ್ತಾರದ ನೆನಪು..
ಚಕೋರ ಚಂದ್ರಮನ ಕರದೊಳಗೆ
ಮುಡಿಪಾಗಿರಿಸುವಾ ಕನಸು..

ಚಿಣ್ಣರ ಚಿಣ್ಣಿಕೋಲಿನ ಗಮ್ಮತ್ತು
ಗಾಳಿಪಟ ಹಾರಿಸುತ್ತ
ದಾರ ದೂರದತ್ತ ಬಿಡಿಸುತ್ತ
ಆಕಾಶದೆತ್ತರಕ್ಕೆ ಏರುವಾ ಮನಸು...

ಚೆಂಡು, ಬುಗುರಿ,  ಲಗೋರಿ
ಗೆದ್ದೇ ಗೆಲ್ಲುವೆನೆಂಬ ಗುರಿ
ಯಾರೂ ಮೇಲಲ್ಲ.. ಯಾರೂ ಕೀಳಲ್ಲ
ಏನು ಹೇಳಲಿ ಸಂತಸದಾ ಪರಿ...

ಎಂದೆಂದೂ ಜೊತೆಗಿರಲಿ ಬಾಲ್ಯದಾ ಸವಿನೆನಪು
ಪ್ರೌಢತೆ.. ಯೌವ್ವನ... ಜವ್ವನದಲ್ಲಿ ಮರುಕಳಿಸಲಿ ಸುಮಧುರ ನೆನಹುಗಳ ಸರಮಾಲೆ....
*ವೆಂಕಟೇಶ ಸಂಪ
ಓದಿ "ಸಂಪದ ಸಾಲು "

Thursday, March 30, 2017

ಅಧಿಕಾರಿಗಳನ್ನು ಡೆಪ್ಯುಟೇಶನ್ ಮಾಡ್ತಾರೆ.ಅದೇ ತರಹ ಯೋಗಿ ಅವರನ್ನು ನಮ್ಮ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗಿ ಒಂದು ಆರು ತಿಂಗಳು ಬಂದರೆ ಸಾಕು. ಈಗ ಅಸ್ತಿತ್ವದಲ್ಲಿಯೇ ಇಲ್ಲದಂತಿರುವ ಕರ್ನಾಟಕ ಸರ್ಕಾರ ನಿದ್ದೆಯಿಂದ ಏಳೋದು ಯಾವಾಗ?

ಅಧಿಕಾರಿಗಳನ್ನು ಡೆಪ್ಯುಟೇಶನ್ ಮಾಡ್ತಾರೆ.ಅದೇ ತರಹ ಯೋಗಿ ಅವರನ್ನು ನಮ್ಮ ಕರ್ನಾಟಕದಲ್ಲಿ ಮುಖ್ಯಮಂತ್ರಿ  ಆಗಿ ಒಂದು ಆರು ತಿಂಗಳು ಬಂದರೆ ಸಾಕು.
ಈಗ ಅಸ್ತಿತ್ವದಲ್ಲಿಯೇ ಇಲ್ಲದಂತಿರುವ ಕರ್ನಾಟಕ ಸರ್ಕಾರ ನಿದ್ದೆಯಿಂದ ಏಳೋದು ಯಾವಾಗ?

ಯೋಗಿ ಆದಿತ್ಯನಾಥ್ ಸಿಎಂ ಆಗಿದ್ದೇ ಆಗಿದ್ದು, ಉತ್ತರ ಪ್ರದೇಶ ಸರ್ಕಾರ ಕಂಪ್ಲೀಟ್ ಆ್ಯಕ್ಟಿವ್ ಆಗಿದೆ. ನೂತನ ಸಿಎಂ ಯೋಗಿ ಆದಿತ್ಯನಾಥ್, ಅಧಿಕಾರಕ್ಕೆ ಬಂದ ಕೇವಲ 150 ಗಂಟೆಗಳಲ್ಲಿ 50 ಆದೇಶ ಜಾರಿ ಮಾಡಿದ್ದಾರೆ. ಆ 50 ಆದೇಶಗಳಲ್ಲಿ ಆಯ್ದ ಕೆಲವು ಆದೇಶಗಳ ಸ್ಯಾಂಪಲ್ ಇಲ್ಲಿದೆ.
150 ಗಂಟೆ 50 ಆದೇಶ
* ಪುಂಡರನ್ನು ಮಟ್ಟ ಹಾಕಲು ಆ್ಯಂಟಿ-ರೋಮಿಯೋ ಸ್ಕ್ವಾಡ್
* ಮಾನಸ ಸರೋವರ ಯಾತ್ರಿಗಳಿಗೆ 1 ಲಕ್ಷ ರೂ. ಅನುದಾನ,
* ಸರ್ಕಾರಿ ಕಚೇರಿಗಳಲ್ಲಿ ಪಾನ್, ಗುಟ್ಕಾ ನಿಷೇಧ
* ಗೋವುಗಳ ಕಳ್ಳಸಾಗಾಣಿಕೆ ನಿಷೇಧ
* ಅಕ್ರಮ ಕಸಾಯಿಖಾನೆಗಳು ತಕ್ಷಣ ಬಂದ್
* ಸಚಿವರು ಕಚೇರಿ ಫೈಲ್'​ಗಳನ್ನು ಮನೆಗೆ ತೆಗೆದುಕೊಂಡು ಹೋಗಕೂಡದು
* ಅಧಿಕಾರಿಗಳು 15 ದಿನಗಳಲ್ಲಿ ಆಸ್ತಿ ವಿವರ ಸಲ್ಲಿಸಬೇಕು
* ನವರಾತ್ರಿ, ರಾಮನವಮಿಯಂದು 24 ಗಂಟೆ ವಿದ್ಯುತ್ ಸರಬರಾಜು
* ರೋಗಿಗಳ ದೂರು ದಾಖಲಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಌಪ್
* ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು 14 ದಿನಗಳ ಒಳಗೆ ಹಣ ನೀಡಬೇಕು
* ರೈತರ ಬೆಳೆ ಖರೀದಿಗೆ ಚತ್ತೀಸ್​ಘಡ ಮಾದರಿ ಯೋಜನೆ ರೂಪಿಸಲು ಆದೇಶ
* ಗ್ರಾಮಾಂತರ ಪ್ರದೇಶಗಳಲ್ಲಿ 3 ಸಾವಿರ ಮೆಡಿಕಲ್ ಶಾಪ್​ಗಳ ಆರಂಭಕ್ಕೆ ಆದೇಶ
* ರಾಜ್ಯಾದ್ಯಂತ ಸ್ಥಗಿತಗೊಂಡಿದ್ದ ಎಲ್ಲ ಸಹಕಾರಿ ಸಂಘಗಳ ಪುನಾರಂಭ
* ಪ್ರಧಾನ್​'ಮಂತ್ರಿ ಆವಾಸ್ ಯೋಜನಾ ಜಾರಿಗೆ ಹೊಸ ಇಲಾಖೆ ರಚನೆಗೆ ಆದೇಶ
* ಶಿಕ್ಷಕರು ಶಾಲೆಗಳಲ್ಲಿ ಟೀಶರ್ಟ್ ಧರಿಸಬಾರದು. ಮೊಬೈಲ್ ಫೋನ್ ತರಬಾರದು
* ಪ್ರತಿ ಹಳ್ಳಿಗಳಿಗೂ ರಸ್ತೆ ಸಂಪರ್ಕ ಕಲ್ಪಿಸಲು ಸೂಚನೆ
ಇವು ಕೇವಲ ಸ್ಯಾಂಪಲ್ ಮಾತ್ರ. ಇಷ್ಟೂ ಆದೇಶಗಳಲ್ಲಿ ಯೋಗಿ ಆದಿತ್ಯನಾಥ್ ಗಮನ ಹರಿಸಿರುವ ಕ್ಷೇತ್ರಗಳಾದರೂ ಯಾವುವು ಗೊತ್ತೇ..?
ಸಿಎಂ ಯೋಗಿ ಆದಿತ್ಯನಾಥ್ ಆದ್ಯತೆ
* ಅಕ್ರಮ ಕಸಾಯಿ ಖಾನೆ ಬಂದ್, ಗೋರಕ್ಷಣೆಗೆ ಆದ್ಯತೆ
* ರೈತರು, ಕಬ್ಬು ಬೆಳೆಗಾರರ ಮೇಲೆ ವಿಶೇಷ ಗಮನ
* ಪುಂಡರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಗಮನ
* ಭ್ರಷ್ಟಾಚಾರ ತಡೆಗೆ ದಿಟ್ಟ ಸಂಕಲ್ಪ
* ಆರೋಗ್ಯ ಸೇವೆಯನ್ನು ಹಳ್ಳಿಗಳಿಗೆ ತಲುಪಿಸುವತ್ತ ಗಮನ
* ಕಚೇರಿಗಳಲ್ಲಿ ಶುಚಿತ್ವ ಪಾಲನೆ. ಸ್ವಚ್ಚ ಭಾರತ್​ ಆಂದೋಲನ
* ‘ಪ್ರಧಾನ್ ಮಂತ್ರಿ’ ಆವಾಸ್ ಯೋಜನೆ ಜಾರಿಗೆ ವಿಶೇಷ ಆದ್ಯತೆ
ಅಕ್ರಮ ಕಸಾಯಿ ಖಾನೆ ಬಂದ್'​ನ ಸಂದೇಶ ಗೋರಕ್ಷಣೆ. ಇನ್ನು ರೈತರು, ಕಬ್ಬು ಬೆಳೆಗಾರರ ಮೇಲೆ ವಿಶೇಷ ಗಮನ ಕೊಡಲಾಗಿದೆ. ಪುಂಡರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಗಮನಹರಿಸಲಾಗಿದೆ. ಭ್ರಷ್ಟಾಚಾರ ತಡೆಗೆ ದಿಟ್ಟ ಸಂಕಲ್ಪ ಪ್ರತಿ ಹೆಜ್ಜೆಯಲ್ಲೂ ಕಾಣುತ್ತಿದೆ. ಆರೋಗ್ಯ ಸೇವೆಯನ್ನು ಹಳ್ಳಿಗಳಿಗೆ ತಲುಪಿಸುವುದರ ಜೊತೆಯಲ್ಲೇ ಕಚೇರಿಗಳಲ್ಲಿ ಶುಚಿತ್ವ ಪಾಲನೆ. ಸ್ವಚ್ಚ ಭಾರತ್​ ಆಂದೋಲನಕ್ಕೆ ಆದ್ಯತೆ ಕೊಟ್ಟಿದ್ದಾರೆ ಯೋಗಿ. ಇನ್ನು ಉ.ಪ್ರದೇಶದಲ್ಲಿ ಸರಿಯಾಗಿ ಜಾರಿಯಾಗದೇ ಉಳಿದಿದ್ದ ‘ಪ್ರಧಾನ್ ಮಂತ್ರಿ’ ಆವಾಸ್ ಯೋಜನೆ ಜಾರಿಗೆ ವಿಶೇಷ ಆದ್ಯತೆ ಕೊಡಲಾಗಿದೆ
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ www.sampadasaalu.blogspot.com

Sunday, March 26, 2017

ಇದು ಒಬ್ಬ ರೈತನ ಕತೆಯಲ್ಲ, ಎಲ್ಲಾ ರೈತರ ದುರಂತ ಬದುಕು,ನೀರಿಲ್ಲ,ಬೆಳೆಯಿಲ್ಲ, ಬೆಳೆಗಳಿಗೆ ಸ್ಥಿರ ಬೆಲೆಯಿಲ್ಲ,ಸಾಮಾಜಿಕ ಗೌರವವಿಲ್ಲ,ರೈತನ ಅಳಲಿಗೆ ಕೊನೆಯಿಲ್ಲ,

ಈ ಸುದ್ದಿ ಓದಿ.ಮನುಷ್ಯತ್ವ ಇದ್ದವರಿಗೆ ಮನ ಕಲುಕುತ್ತದೆ.ತಾನೇ ಸಾಕಿ ಬೆಳೆಸಿದ   ಅಡಿಕೆ ಗಿಡವನ್ನು ಕೈಯಾರೆ ಕಡಿದು ಬೆಂಕಿ ಇಡುವಷ್ಟು ಅಸಹಾಯಕಳಾದ ರೈತ ಹೆಂಗಸಿನ ಬದುಕು ನೋಡಿ,    ಇದು ಒಬ್ಬ ರೈತನ ಕತೆಯಲ್ಲ,  ಎಲ್ಲಾ ರೈತರ ದುರಂತ ಬದುಕು,ನೀರಿಲ್ಲ,ಬೆಳೆಯಿಲ್ಲ,  ಬೆಳೆಗಳಿಗೆ ಸ್ಥಿರ ಬೆಲೆಯಿಲ್ಲ,ಸಾಮಾಜಿಕ ಗೌರವವಿಲ್ಲ,ರೈತನ ಅಳಲಿಗೆ ಕೊನೆಯಿಲ್ಲ,
ಇವರು ಅನ್ನದಾತರು ಕಾಣ್ರಿ.ಇವರ ಮೇಲೆ ಎಲ್ಲಾ ಪಕ್ಷಗಳು ರಾಜಕೀಯ ಮಾಡ್ತಾರೆ.ಅತ್ತ ಕೇಂದ್ರ ಸರ್ಕಾರವೂ ನಾಟಕ ಮಾಡತ್ತೆ. ಇತ್ತ ರಾಜ್ಯ ಸರ್ಕಾರವೂ ರೈತರ ಪಾಲಿಗೆ ಸತ್ತುಹೋಗಿದೆ.
ಕೇಂದ್ರ ಸರ್ಕಾರ ಹೇಳತ್ತೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಅಂತಾ.    ರಾಜ್ಯ ಸರ್ಕಾರಕ್ಕೆ ಅನ್ನ ಕೊಡುವ ಅನ್ನದಾತನಿಗೆ ಕೊಡಲು ದುಡ್ಡಿಲ್ಲಂತೆ.ಮಟನ್ ಅಂಗಡಿಗೆ ದುಡ್ಡು ಕೊಡೋಕೆ ಹಣ ಸರಿ ಆಗತ್ತೆ ಅವರಿಗೆ.
ಎರಡು ಕಡೆ ಅಧಿವೇಶನ   ನೆಡೆಯುತ್ತಿದೆ.ಯಾವ ಪಕ್ಷಗಳು ಯಾವೊಬ್ಬ ರಾಜಕಾರಣಿಯೂ ರೈತರ ಸಾಲ ಮನ್ನ ಮಾಡದಿದ್ದರೆ ಸದನ ನೆಡೆಸಲು ಬಿಡುವುದಿಲ್ಲ ಅಂತ ಪ್ರತಿಭಟಿಸಲಿಲ್ಲ.
ಎಲ್ಲರಿಗೂ ಎಲೆಕ್ಷನ್ ಟೈಮ್ ಗೆ ನಮ್ಮ ರೈತರು ನೆನಪಾಗ್ತಾರೆ.ರೈತರನ್ನು ರಾಜಕೀಯ ಸರಕು ಮಾಡಿಕೊಂಡವರಿಗೆ ದಿಕ್ಕಾರವಿರಲಿ.ಇನ್ನಾದರೂ ರೈತರ ಸಾಲ ಮನ್ನಾ ಮಾಡಲಿ.ಅನ್ನದಾತನ ಅಳಲಿಗೆ   ಕೊನೆ ಎಂದು!? ಸರ್ಕಾರಕ್ಕೆ ತಲುಪುವವರೆಗೆ ಶೇರ್ ಮಾಡಿ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu