Friday, April 7, 2017

ನೆನಹುಗಳ ಸರಮಾಲೆ venkatesha sampa

ನೆನಹುಗಳ ಸರಮಾಲೆ

ಬದುಕೆಂಬ ಬರಹದ ಮುನ್ನುಡಿಯ
ಬಾಲ್ಯದ ಚಿತ್ತಾರದ ನೆನಪು..
ಚಕೋರ ಚಂದ್ರಮನ ಕರದೊಳಗೆ
ಮುಡಿಪಾಗಿರಿಸುವಾ ಕನಸು..

ಚಿಣ್ಣರ ಚಿಣ್ಣಿಕೋಲಿನ ಗಮ್ಮತ್ತು
ಗಾಳಿಪಟ ಹಾರಿಸುತ್ತ
ದಾರ ದೂರದತ್ತ ಬಿಡಿಸುತ್ತ
ಆಕಾಶದೆತ್ತರಕ್ಕೆ ಏರುವಾ ಮನಸು...

ಚೆಂಡು, ಬುಗುರಿ,  ಲಗೋರಿ
ಗೆದ್ದೇ ಗೆಲ್ಲುವೆನೆಂಬ ಗುರಿ
ಯಾರೂ ಮೇಲಲ್ಲ.. ಯಾರೂ ಕೀಳಲ್ಲ
ಏನು ಹೇಳಲಿ ಸಂತಸದಾ ಪರಿ...

ಎಂದೆಂದೂ ಜೊತೆಗಿರಲಿ ಬಾಲ್ಯದಾ ಸವಿನೆನಪು
ಪ್ರೌಢತೆ.. ಯೌವ್ವನ... ಜವ್ವನದಲ್ಲಿ ಮರುಕಳಿಸಲಿ ಸುಮಧುರ ನೆನಹುಗಳ ಸರಮಾಲೆ....
*ವೆಂಕಟೇಶ ಸಂಪ
ಓದಿ "ಸಂಪದ ಸಾಲು "

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu