Sunday, April 4, 2021

ಕೃಷಿ ಕೂಡ ನನ್ನ ಬಾಲ್ಯದ ಕನಸು,

ಕೃಷಿ ಕೂಡ ನನ್ನ ಬಾಲ್ಯದ ಕನಸು,
ಹಾಗಂತ ಅದೊಂದನ್ನೇ ನಂಬಿಕೊಂಡು ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಇಂದಿನ ಕೃಷಿ ಜೀವನ.ತೀರಾ ಹೋದ್ವರ್ಷದ ಲಾಕ್ಡೌನ್ ವರೆಗೂ ವೀಕೆಂಡ್ ಕೃಷಿ ನನ್ನದಾಗಿತ್ತು.ಕಳೆದ ಒಂದುವರ್ಷದಿಂದ ಸಂಪೂರ್ಣವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡೆ.
ಎಷ್ಟೋ ಬಾರಿ ಕಾರಲ್ಲಿ ಬಂದಾಗ ಪೆಟ್ರೋಲ್ ಖರ್ಚು ಸಹ ಹುಟ್ಟುವುದಿಲ್ಲ ಅನಿಸತ್ತೆ.ಆದರೆ ಅದು ಕೊಡುವ ಖುಶಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ನಮ್ಮ ಸಂಪ ಫಾರ್ಮ್ ನಲ್ಲಿ ತರೆಹವಾರಿ  ಬೆಳೆಗಳಿವೆ.ಕೆಲವು ಹಿರಿಯರು ನೆಟ್ಟಿದ್ದು,ಹಲವು ನಾನು ನೆಟ್ಟಿದ್ದು.
ಹಲವಾರು ಅದಾಯ ನೀಡಬಲ್ಲದು.ಕೆಲವೊಂದಷ್ಟು ಖುಶಿ ಕೊಡಬಲ್ಲದು.
ಎಲ್ಲವನ್ನೂ ಹಣದಲ್ಲಿ ಅಳೆಯಲು ಸಾಧ್ಯವಿಲ್ಲ.ಹಾಗಾಗಿ ಕೃಷಿ ನಮಗೆ ಅನಿವಾರ್ಯದ ಜೊತೆ ದೂರದೃಷ್ಟಿಯಿಂದ ಲಾಭದಾಯಕ.
ಕೃಷಿತೋ ನಾಸ್ತಿ ದುರ್ಭಿಕ್ಷಾ.....ಅಂದಂತೆ ಪ್ರಯತ್ನ ನಮ್ಮದಾಗಿದ್ದರೆ ಫಲ ಇಂದಲ್ಲಾ ನಾಳೆ ನಮಗೆ ಬರುವುದರಲ್ಲಿ ಸಂದೇಹವಿಲ್ಲ .
ಮೊದಲ ಕೆಲವು ವರ್ಷ ಅಲ್ಪಾವದಿ ಬೆಳೆಯನ್ನೂ ಬೆಳೆದಿದ್ದೆ.ಆದರೆ ಇತ್ತೀಚೆಗೆ ದೀರ್ಘಾವದಿ ಬೆಳೆಗೆ ಗಮನಹರಿಸಿದ್ದೇನೆ. ಏಕೆಂದರೆ ಕೃಷಿ ಜೊತೆ ನಮ್ಮ ಸಂಪದ ಸಾಲು ಪತ್ರಿಕೆ ಇನ್ನೊಂದಷ್ಟು ಉದ್ಯೋಗ ಅಂತ ಅಲ್ಲೂ ಗಮನಹರಿಸಲೇಬೇಕು ಅದಕ್ಕಾಗಿ.... 
ನಿಮ್ಮೆಲ್ಲರ ಹಾರೈಕೆಯಿರಲಿ
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com 
sampadasaalu.blogspot.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu