Sunday, November 11, 2018

ಸಂಪದ ಸಾಲು ಪತ್ರಿಕೆ ರಾಜ್ಯ ಮಟ್ಟದ ಕತೆ ಕವನ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ 2018

2018 ರ ಸಂಪದ ಫೌಂಡೇಶನ್ ಮತ್ತು ಸಂಪದ ಸಾಲು ಪತ್ರಿಕೆಯ11 ನೇ ಯಶಸ್ವಿ ವರ್ಷದ ಸಲುವಾಗಿ ರಾಜ್ಯ ಮಟ್ಟದ ಕತೆ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ 10/11/2018 ರ ಶನಿವಾರದೊಂದು ಸಾಗರದ ಅಜಿತ್ ಸಭಾ ಭವನ (ಸೇವಾ ಸಾಗರ ಶಾಲೆ ರೈಲ್ವೆ ಸ್ಟೇಶನ್ ಹತ್ತಿರ)ದಲ್ಲಿ ಸಂಜೆ 5.30 ಗೆ ನೆಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ.ನಾ ಡಿಸೋಜ ಖ್ಯಾತ ಸಾಹಿತಿಗಳು,
ಡಾ.ಸತೀಶ್ ಕುಮಾರ್ ಹೊಸಮನಿ, ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ.
ವೆಂಕಟೇಶ ಎಸ್ ಸಂಪ,ಸಂಪಾದಕರು ಸಂಪದ ಸಾಲು ಪತ್ರಿಕೆ.
ಬಿ ಆರ್ ಉಮೇಶ್ ,ಉದ್ಯಮಿಗಳು,ಮಥನ ಹೋಮ್ ಇಂಡಸ್ಟ್ರೀಸ್ 
ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.
2018 ರ ಮಾರ್ಚ್ ಅಲ್ಲಿ ಆಹ್ವಾನಿಸಲ್ಪಟ್ಟ ಕತೆ ಕವನ ಸ್ಪರ್ಧೆಯಲ್ಲಿ 1891 ಕವನಗಳು ಮತ್ತು 819 ಕತೆಗಳು ಕರ್ನಾಟಕವಷ್ಟೇ ಅಲ್ಲದೇ ಹೊರರಾಜ್ಯ ಹೊರ ರಾಷ್ಟ್ರದ ಕನ್ನಡಿಗರು ಕೂಡ ಭಾಗವಹಿಸಿದ್ದರು.
ಡಾ.ನಾ ಡಿಸೋಜ ಅವರ ನೇತೃತ್ವದಲ್ಲಿ ತೀರ್ಪು ಪ್ರಕಟಿಸಲಾಗಿತ್ತು.
ಕಥಾ ವಿಭಾಗದಲ್ಲಿ ಮಂಜುನಾಥ ಹಿಲಿಯಾಣ ಅವರ ಸೀತಾ ಪ್ರಲಾಪ ಕಥೆಗೆ ಪ್ರಥಮ, ವಿಷ್ಣು ಭಟ್ ಹೊಸ್ಮನೆ ಅವರ ಪಯಣ ಕಥೆಗೆ ದ್ವಿತೀಯ ಮತ್ತು ಹೆಚ್ ಎಸ್ ಅರ್ಪಣಾ ಅವರ ಪಂಕ್ತಿಬೇಧ ಕಥೆಗೆ ತೃತೀಯ ಬಹುಮಾನ ನೀಡಲಾಗಿದೆ.
ಕವನ ವಿಭಾಗದಲ್ಲಿ ಡಾ.ರತ್ನಾಕರ್ ಮಲ್ಲಮೂಲೆ ಅವರ ಭೂತ ಕವಿತೆ ಪ್ರಥಮ,
ವಿನಾಯಕ ಅರಳಸುರಳಿ ಅವರ ದೇವರ ಹೊತ್ತವನು ಕವನ ದ್ವಿತೀಯ, ಡಾ ಅಜಿತ್ ಹೆಗಡೆ ಹರೀಶಿ ಅವರ ವೇದಾಂತದ ವಿಗತ ಕವನಕ್ಕೆ ತೃತೀಯ ಬಹುಮಾನ ಸಂದಿವೆ.
ಕಥೆಗೆ ಪ್ರಥಮವಾಗಿ 7500 ರೂಪಾಯಿ, ದ್ವಿತೀಯ 4000 ರೂಪಾಯಿ, ತೃತೀಯ 2500 ರೂಪಾಯಿ ನಗದು, ಹಾಗು ಕವನಗಳಿಗೆ ಪ್ರಥಮ ಬಹುಮಾನವಾಗಿ 3000 ರೂಪಾಯಿ, ದ್ವಿತೀಯ ಬಹುಮಾನವಾಗಿ 2000 ರೂಪಾಯಿ, ತೃತೀಯ ಬಹುಮಾನವಾಗಿ 1000 ರೂಪಾಯಿಗಳು ಹಾಗು ಸ್ಮರಣಿಕೆ ಪ್ರಶಸ್ತಿ ಪತ್ರ ನೀಡಲಾಗುವುದು.
ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತ.
ದಿನಾಂಕ 10/11/18 ರ ಶನಿವಾರ .ಸಂಜೆ 5.30 ಕ್ಕೆ.
ಸ್ಥಳ:ಅಜಿತ್ ಸಭಾ ಭವನ ( ಸೇವಾ ಸಾಗರ ಶಾಲೆ ರೈಲ್ವೆ ಸ್ಟೇಶನ್ ಹತ್ತಿರ ಸಾಗರ)




























































































































































































































Wednesday, August 15, 2018

https://www.facebook.com/groups/223327021059508/

https://www.facebook.com/groups/223327021059508/

Venkatesha sampa Editor of sampada saalu patrike acted in kannada film hikora

Venkatesha sampa  acted on kannada film hikora as journalist and anchor 

ಎಲ್ಲಿದೆ ಸ್ವಾಮಿ ಸ್ವತಂತ್ರ!?           *ವೆಂಕಟೇಶ ಸಂಪ

ಎಲ್ಲಿದೆ ಸ್ವಾಮಿ ಸ್ವತಂತ್ರ!?
          *ವೆಂಕಟೇಶ ಸಂಪ,
ಒಂದೆಡೆ ಸ್ವೆಚ್ಚಾಚಾರ ಮತ್ತೊಂದೆಡೆ ಜೀತದಾಳತ್ವ!?
ಒಂದೆಡೆ ಹೈ ಪ್ರೋಫೈಲ್ ಕೇಸ್ ಗಳಲ್ಲಿ ಶಿಕ್ಷೆಯಾದರೂ ಕಾನೂನಿನ ಲೂಪ್ ಹೋಲ್ಸ್ ಬಳಸಿ ಅಪರಾಧಿಯಾದರೂ ಅಟ್ಟಹಾಸ ಮಾಡೋರು.ಮಾಡದ ತಪ್ಪಿಗೆ ಬಡತನದಲ್ಲಿ ಶೋಷಿತರಾಗಿ ನರಳುವ, ಜೀತದಾಳಾಗಿ ಬದುಕುವವರು! ಇನ್ನೊಂದೆಡೆ,
ಇದಾ ಸ್ವಾತಂತ್ರ್ಯ!?
ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು ಅನ್ನೋದು ಕೇವಲ ಜಾಹೀರಾತಿಗೆ ಸೀಮಿತವೇ!?
ಅತ್ಯಾಚಾರ,ಕೊಲೆ,ದರೋಡೆ ಮಾಡಿದರೂ ಸಮಾಜದ ಗಣ್ಯ ವ್ಯಕ್ತಿಯಂತೆ ಪೋಸ್ ಕೊಡ್ತಾ ಬದುಕುವ ಫಟಿಂಗರನ್ನು ನೋಡಿ ಸ್ವತಂತ್ರ ಅನ್ನಬೇಕೆ!?

ಚಿಕ್ಕದೊಂದು ಆದಾಯ ಧೃಡೀಕರಣ ಪತ್ರಕ್ಕಾಗಿ ತಿಂಗಳುಗಟ್ಟಲೇ ಸರ್ಕಾರಿ ಕಛೇರಿ ಅಲೆಯುವ ಹಳ್ಳಿಯ ವೃದ್ದನನ್ನು ನೋಡಿ ಸ್ವತಂತ್ರ ಬಂದಿದೆ ಎನ್ನಲೇ!
ಅಧಿಕಾರ,ಹಣ ಇದೆ ಎಂಬ ಕಾರಣಕ್ಕೆ ಕಾನೂನನ್ನು ಮರೆತು ಸಾವಿರಾರು ಎಕರೆ ಜಮೀನನ್ನು ಮಂಜೂರು ಮಾಡೋದನ್ನು ನೋಡಿ ಸ್ವತಂತ್ರ ಬಂದಿದೆ ಎನ್ನಲೋ!?
ಒಂದೆಡೆ ಹೊಟ್ಟೆಗಿಲ್ಲದ ಸ್ಥಿತಿ,ಇನ್ನೊಂದೆಡೆ ಮೃಷ್ಟಾನ್ನ ಭೋಜನ!ಇದಾ ಸ್ವಾತಂತ್ರ್ಯ!?
ಅನ್ನ ನೀಡೋ ಅನ್ನದಾತನಿಗೆ ಬೆಳೆ ಬೆಳೆಯೋಕೆ ಸೌಲಭ್ಯ ಕೊಡದೆ,ಬೆಳೆದ ಬೆಳೆಗೂ ಮಾರ್ಕೇಟ್ ಕೊಡದ ನಾವು ಸ್ವತಂತ್ರಿಗಳೇ?
ಉದ್ಘಾಟನೆ ಆಗುವ ಮೊದಲೇ ಉರುಳಿ ಬೀಳುವ ಸರ್ಕಾರಿ ಕಟ್ಟಡಗಳನ್ನು ಕಟ್ಟುವ ನಾವು ಹೊಂಡ ಬಿದ್ದ ರಸ್ತೆ ಮುಚ್ಚಲು ಹತ್ತು ವರ್ಷ ತೆಗೆದುಕೊಳ್ಳುತ್ತೇವೆ.ದುಡ್ಡಿದ್ದವರ ಕೆಲಸ ಮಾಡೋಕೆ ಹಿಂದೆ ಮುಂದೆ ನೋಡದ ಅಧಿಕಾರಿ ವರ್ಗ ಬಡವರ ಕೆಲಸ ಮಾಡಲು ಕಾನೂನು ಪುಸ್ತಕ ತೆಗೆಯುತ್ತದೆ.ದೊಡ್ಡ  ಕಳ್ಳರನ್ನು ಹಿಡಿಯಲಾಗದ ದುರವಸ್ಥೆ ಪಿಕ್ ಪಾಕೇಟ್ ಮಾಡಿದವನನ್ನು ಒಳಗೆ ಹಾಕಿ ಪ್ರಚಾರ ಪಡೆಯುತ್ತದೆ.ದುಡ್ಡಿಲ್ಲದೆ ಮತ ಹಾಕದ ಜನ ಶ್ರೇಷ್ಟ ನಾಯಕನ ಕನಸು ಕಾಣುತ್ತದೆ.ರಾವಣರೇ ರಾಮನ ಮುಖವಾಡ ಧರಿಸಿದಾಗ ನಂಬೋದಾದ್ರು ಯಾರನ್ನ!?ಎಗ್ಗಿಲ್ಲದೆ ಏರುವ ಕ್ರೈಮ್ ಗಳಿಗೆ ಶಿಕ್ಷಿಸುವ ಬದಲು ವಿಳಂಬ ನೀತಿಗೆ ನ್ಯಾಯಾಂಗವೂ ಸ್ಥಬ್ದವಾಗಿಹೋಗಿದೆ.ಸುದ್ದಿ ಮಾಡಿ ಜನರನ್ನು ತಲುಪುವ ಬಹುತೇಕ ಮಾಧ್ಯಮಗಳು ಟಿಆರ್ ಪಿ ಯ ಬೆನ್ನುಹತ್ತಿದೆ.ವ್ಯವಸ್ಥೆಯ ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಆವರಿಸಿದಾಗ ಆರೋಗ್ಯವಂತ ಸಮಾಜದ ಕಲ್ಪನೆ ಮೂಡುವುದಾದರೂ ಹೇಗೆ!?ಅರವತ್ತೊಂಬತ್ತು ವರ್ಷದ ಹಿಂದೆ ಅರ್ಧರಾತ್ರಿಯ ನಿದ್ರೆಗಣ್ಣಿನಲ್ಲಿ ಪಡೆದ ಸ್ವಾತಂತ್ರ್ಯವೆಂಬ ಅನರ್ಘ್ಯ ರತ್ನ ಮಂಗನ ಕೈಗೆ ಕೊಟ್ಟ ಮಾಣಿಕ್ಯ ಆಯಿತೆ?!ಅಂದು ಶಾಂತಿಕಾರಿಗಳು,ಕ್ರಾಂತಿಕಾರಿಗಳು,ಸಾಮಾನ್ಯರು ಹೋರಾಡಿದ್ದು ,ಸ್ವತಂತ್ರರಾಗಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೇಲಿಬಿಟ್ಟಂತಾಯ್ತೆ!?
ಆಕಾಶಕ್ಕೆ ಕ್ಷಿಪಣಿ ಹಾರಿಸಿದ್ದೇವೆ,ಕೋಟ್ಯಾಂತರ ಬಂಡವಾಳ ತಂದಿದ್ದೇವೆ.ಬೆಳೆ ಬರಬೇಕಾದ ಜಾಗದಲ್ಲೆಲ್ಲಾ ವಿದೇಶಿ ದುಡ್ಡಿನ ಹೊಗೆ ಉಗುಳುವ ಕಾರ್ಖಾನೆ ನಿರ್ಮಿಸುತ್ತಿದ್ದೇವೆ.ಮನುಷ್ಯರು ಹುಟ್ಟಿದಂತೆ ಮನುಷ್ಯತ್ವ ಸಾಯುತ್ತಿದೆ.ವಾಹನಗಳು ಹೆಚ್ಚಿವೆ,ರಸ್ತೆ ಚಿಕ್ಕದಾಗಿದೆ.ನಾನು ನನ್ನದು ಎಂಬ ದಾಹದಲ್ಲಿ ಎಲ್ಲವೂ ಇಂಗಿ ಹೋಗಿ ಬರಡಾಗುತ್ತಿದೆ.ಸ್ವತಂತ್ರಕ್ಕೂ ಎರಡು ವರ್ಷ ಮೊದಲೇ ಅಪಕ್ವರಾದವರಿಗೆ ಸ್ವತಂತ್ರ ಸಿಕ್ಕರೆ ಏನಾಗುತ್ತದೆ ಎಂದು ಚರ್ಚಿಲ್ ಎಂಬ ಪುಣ್ಯಾತ್ಮ ಹೇಳಿದಂತೆ "power will go to the hands of rascals,rogues,and freebooters.
All indians leaders will be of low caliber and men of straw.
They will have sweet toungues and silly hearts.
They will fight amongst themselves for power and India will be lost in political squabbles.
A day would come when even air and water would be taxed in India."ಆಗಿ ಹೋಗಿದೆ.
ಆದರೂ ಉತ್ಸವ ಮಾಡಬೇಕಿದೆ.ಬಾವನೆಗಳೆಲ್ಲಾ ಟಿವಿ ದಾರಾವಾಹಿಗಳಿಗೆ ಸೀಮಿತವಾದ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಒಂದು ಹಬ್ಬವಾಗಿ ಹೋಗಿದೆ ಅಷ್ಟೆ.ಪಕ್ಷ ಯಾವುದೇ ಇರಲಿ,ವ್ಯವಸ್ಥೆಗಳೇ ಹೊದ್ದು ಮಲಗಿದಾಗ ಎಳೆದು ಕೂರಿಸಬೇಕಾದ ಕರ್ತವ್ಯ ಜನಸಾಮಾನ್ಯರದ್ದು.
ಚೆಂದದ ಡ್ರೆಸ್ ಹಾಕಿ,ಬ್ಯಾಂಡ್ ಬಾರಿಸಿ,ಬಾವುಟ ಹಾರಿಸಿ,ಉದ್ದುದ್ದ ಭಾಷಣ ಮಾಡಿ,ಚಾಕಲೇಟ್ ತಿಂದು,ಅದಕ್ಕೂ ನಮ್ಮದೇ ತೆರಿಗೆಹಣ ಉಪಯೊಗಿಸಿ ಉತ್ಪಾದಕತೆ ಇಲ್ಲದೆ  ದಿನ ದೂಡಿದರೆ ಪ್ರಯೋಜನವೇನು!?ಮನುಷ್ಯತ್ವ ಮರೆತು ಜಾತಿ ಧರ್ಮದ ದೃಷ್ಟಿಯಲ್ಲಿ ಆಡಳಿತ ನೆಡೆದರೆ,ಪಾಸಿಟೀವ್ ಆಲೋಚನ ಕ್ರಮ ಮೂಡದೇ ಇದ್ದರೆ ಸ್ವಾತಂತ್ರೋತ್ಸವ ಅರವತ್ತೊಂಬತ್ತು ಅಲ್ಲ ಆರುಸಾವಿರದ ಒಂಭತ್ತು ವರ್ಷ ಕಳೆದರೂ ತೂತು ಬಿದ್ದ ಬಲೂನಿಗೆ ಗಾಳಿ ತುಂಬಿದಂತಾಗುತ್ತದೆ ಅಷ್ಟೆ.ಸ್ವತಂತ್ರ ಭಾರತದ ಸ್ವಚ್ಚ ಆಡಳಿತದ ಕನಸು ಕಂಡ ಮಹಾತ್ಮ ಗಾಂಧೀಜಿ,ಅಬ್ದುಲ್ ಕಲಾಂರ ಕನಸಿಗೆ ಇನ್ನಾದರೂ ಸಿಕ್ಕಬಹುದೇ ಮನ್ನಣೆ!?
ಸ್ವೇಚ್ಚಾಚಾರವಾಗದ ಸ್ವತಂತ್ರ ಉಳಿಯಬಹುದೇ!? ಹೆಮ್ಮೆಯಿಂದ ಶುಭಾಶಯ ಕೋರಬಹುದೇ!?
#ವೆಂಕಟೇಶಸಂಪ. 9448219347
#ಓದಿಸಂಪದಸಾಲುಪತ್ರಿಕೆ   Venkatesha Sampa
ಸಂಪದ ಸಾಲು ಪತ್ರಿಕೆ
ಸಂಪದ ಸಾಲು ಪತ್ರಿಕೆ

ಕಟ್ಟುವಿಕೆಯ ಕನಸು ಕಂಡು #ವೆಂಕಟೇಶಸಂಪ

ಕಟ್ಟುವಿಕೆಯ ಕನಸು ಕಂಡು
        #ವೆಂಕಟೇಶಸಂಪ

ಕಟ್ಟುವಿಕೆಯ ಬದುಕು ನಮ್ಮದಾಗಬೇಕು.ಕಟ್ಟುವಿಕೆಯ ಸಂಸ್ಕೃತಿ ನಮ್ಮದಾಗಬೇಕು,ಕಟ್ಟುವಿಕೆಯನ್ನು ಜೀವನ ಪದ್ದತಿ ಮಾಡಿಕೊಳ್ಳಬೇಕಿದೆ,ಸಂಪದ ಸಾಲು ಪತ್ರಿಕೆ

ಆದರೆ ನೋಡಿ ಇಂದಿನ ದಿನದ ವಿದ್ಯಮಾನಗಳನ್ನು!
ಆಧುನೀಕತೆಯ ತುಟ್ಟತುದಿಯಲ್ಲಿ ನಿಂತು ಬೀಗುತ್ತಿದ್ದೇವೆ.ವಿದ್ಯಾವಂತರಾಗಿದ್ದೇವೆಂದು ಕೊಚ್ಚಿಕೊಳ್ಳುತ್ತಿದ್ದೇವೆ.ನಾಗರೀಕತೆಯ ವಿಕಾಸ ಎಂದೆಲ್ಲಾ ಬಾಯಿ ಬಡಿದುಕೊಳ್ಳುತ್ತಿದ್ದೇವೆ.ಆದರೆ ಎಲ್ಲಾ ಎಲ್ಲೆಯನ್ನೂ ಮೀರಿದ್ದೇವೆ ಎನ್ನುವ ನಾವೇ
ಮಾನವೀಯತೆಯ ತಳಹದಿಯನ್ನು ಮರೆಯುತ್ತಿದ್ದೇವೆ.
ಯಾಕೆ ಹೀಗೆ!?
ಪ್ರತಿ ಸ್ವತಂತ್ರೋತ್ಸವ ಬಂದಾಗಲೂ ಅಷ್ಟೇ
ನಾವು ಸ್ವಾತಂತ್ರ ಅನುಭವಿಸುತ್ತಿದ್ದೇವೆ.ನಾವು ಸ್ವಾವಲಂಬಿಗಳು ಅಂತೆಲ್ಲಾ ನಮಗೆ ನಾವೇ ಭಾಷಣ ಮಾಡಿ ಸ್ವೀಟು ತಿಂದು ಅವತ್ತೂ ಕೆಲಸಕ್ಕೆ ರಜೆ ಘೋಷಿಸಿ ಮನೆಯಲ್ಲಿ ಉಳಿದುಬಿಡುತ್ತೇವಲ್ಲವಾ!?  

ಆದರೆ ಇಷ್ಟು ವರ್ಷಕ್ಕೆ ನಾವು ಕಟ್ಟುವಿಕೆಯ ಬಗ್ಗೆ ಯೋಚಿಸಲೇ ಇಲ್ಲ ನೋಡಿ,ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಕಟ್ಟುವಂತೆ ಸುಂದರ ಸೌಧ ನಿರ್ಮಿಸಿದಂತೆ ನಮ್ಮ ಆಲೋಚನೆಗಳು ಮತ್ತು ಒಂದಕ್ಕೊಂದು ಮನಸ್ಸುಗಳು ಕಟ್ಟಬೇಕಿದೆ,
ಒಂದಕ್ಕೊಂದು ಸಮಾಜಗಳು ಪರಸ್ಪರ ಕಟ್ಟಬೇಕಿದೆ. ಧರ್ಮ ಧರ್ಮಗಳ ನಡುವೆ ಮಾನವೀಯತೆ ಬೆಸೆಯಬೇಕಿದೆ.ಸಂಸ್ಕೃತಿ ಆಚರಣೆಗಳ ನಡುವೆಯೂ ದೇಶ ಕಟ್ಟಬೇಕಿದೆ.ದ್ವೇಶ ಅಸೂಯೆ ಸಿಟ್ಟು ದುಃಖ ಎಲ್ಲದರ ನಡುವೆ ನಾವು ನಾವಾಗುವುದು ಯಾವಾಗ!?

ಒಂದೆಡೆ ದೇಶದ ದ್ವೇಷ ಸಾಧಿಸಲು ಹವಣಿಸುವ ಶತ್ರುರಾಷ್ಟ್ರಗಳು,ಮತ್ತೊಂದೆಡೆ ದೇಶದ ಒಳಗೆ ಇದ್ದು ನಮ್ಮವರ ಮೇಲೆಯೇ ಹಗೆ ಸಾಧಿಸಲು ಹಗೆ ಸಾಧಿಸಲು ಸಂಚು ರೂಪಿಸುವವರು.
ಇದರ ಮಧ್ಯೆ ಧರ್ಮದ ಹೆಸರಲ್ಲಿ    ದೇವರ ಹೆಸರಲ್ಲಿ ಜಾತಿಯ ಹೆಸರಲ್ಲಿ ವಿಷ ಬೀಜ ಬಿತ್ತಿ ಮತ್ತೆ ಕೆಡಹುವ ಒಂದಷ್ಟು ರಾಜಕಾರಣಿಗಳು,ಮತ್ತೊಂದಷ್ಟು ಧಾರ್ಮಿಕ ಮುಖಂಡರುಗಳು,       ಅರ್ಧಂಬರ್ದ ತಿಳಿದುಕೊಂಡ ಬುದ್ದಿಜೀವಿ ಸೋಗಿನ ಮನುಷ್ಯರುಗಳು,     ಕೇವಲ ಗದ್ದಲ ಸೃಷ್ಟಿಸೋದೇ ಮಾಧ್ಯಮ ಎಂಬ ಕಲ್ಪನೆಯಂತೆ ವರ್ತಿಸುವ ಒಂದಷ್ಟು ಪತ್ರಕರ್ತರು,  
  ತಿಳಿದೂ ತಿಳಿದು ಭ್ರಷ್ಟರನ್ನೇ ಆಯ್ಕೆ ಮಾಡುವ ಕೆಟ್ಟದ್ದನ್ನೇ ಪ್ರೋತ್ಸಾಹಿಸುವ  ಒಳ್ಳೆಯದನ್ನು ತಿರಸ್ಕರಿಸಿ ಬೆಳೆಸದೇ ಇರುವ ಒಂದಷ್ಟು ಜನ ಸಾಮಾನ್ಯರು!
ಆದರೂ ದ್ವೇಷ ಅಳಿಸಬೇಕಿದೆ! ದೇಶ ಕಟ್ಟಬೇಕಿದೆ!
ಸುಂದರ ಆಲೋಚನೆಗಳ ಸ್ವತಂತ್ರ ಬದುಕಿನ ಸುಸಂಸ್ಕೃತ ಮನಸ್ಥಿತಿಯ ಸಾಧಿಸುವ ಹಂಬಲದ    ಚೆಂದನೆಯ  ವಾತಾವರಣದ ಉತ್ತಮ ದೇಶ ಕಟ್ಟಲು ಜೊತೆಯಾಗೋಣ ಬನ್ನಿ , 9448219347
ಸರ್ವರಿಗೂ ಸ್ವತಂತ್ರೋತ್ಸವದ ಶುಭಾಶಯಗಳು,
ಸಸಂಪದ ಸಾಲು ಪತ್ರಿಕೆ
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu