Sunday, November 11, 2018

ಸಂಪದ ಸಾಲು ಪತ್ರಿಕೆ ರಾಜ್ಯ ಮಟ್ಟದ ಕತೆ ಕವನ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ 2018

2018 ರ ಸಂಪದ ಫೌಂಡೇಶನ್ ಮತ್ತು ಸಂಪದ ಸಾಲು ಪತ್ರಿಕೆಯ11 ನೇ ಯಶಸ್ವಿ ವರ್ಷದ ಸಲುವಾಗಿ ರಾಜ್ಯ ಮಟ್ಟದ ಕತೆ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ 10/11/2018 ರ ಶನಿವಾರದೊಂದು ಸಾಗರದ ಅಜಿತ್ ಸಭಾ ಭವನ (ಸೇವಾ ಸಾಗರ ಶಾಲೆ ರೈಲ್ವೆ ಸ್ಟೇಶನ್ ಹತ್ತಿರ)ದಲ್ಲಿ ಸಂಜೆ 5.30 ಗೆ ನೆಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ.ನಾ ಡಿಸೋಜ ಖ್ಯಾತ ಸಾಹಿತಿಗಳು,
ಡಾ.ಸತೀಶ್ ಕುಮಾರ್ ಹೊಸಮನಿ, ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ.
ವೆಂಕಟೇಶ ಎಸ್ ಸಂಪ,ಸಂಪಾದಕರು ಸಂಪದ ಸಾಲು ಪತ್ರಿಕೆ.
ಬಿ ಆರ್ ಉಮೇಶ್ ,ಉದ್ಯಮಿಗಳು,ಮಥನ ಹೋಮ್ ಇಂಡಸ್ಟ್ರೀಸ್ 
ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.
2018 ರ ಮಾರ್ಚ್ ಅಲ್ಲಿ ಆಹ್ವಾನಿಸಲ್ಪಟ್ಟ ಕತೆ ಕವನ ಸ್ಪರ್ಧೆಯಲ್ಲಿ 1891 ಕವನಗಳು ಮತ್ತು 819 ಕತೆಗಳು ಕರ್ನಾಟಕವಷ್ಟೇ ಅಲ್ಲದೇ ಹೊರರಾಜ್ಯ ಹೊರ ರಾಷ್ಟ್ರದ ಕನ್ನಡಿಗರು ಕೂಡ ಭಾಗವಹಿಸಿದ್ದರು.
ಡಾ.ನಾ ಡಿಸೋಜ ಅವರ ನೇತೃತ್ವದಲ್ಲಿ ತೀರ್ಪು ಪ್ರಕಟಿಸಲಾಗಿತ್ತು.
ಕಥಾ ವಿಭಾಗದಲ್ಲಿ ಮಂಜುನಾಥ ಹಿಲಿಯಾಣ ಅವರ ಸೀತಾ ಪ್ರಲಾಪ ಕಥೆಗೆ ಪ್ರಥಮ, ವಿಷ್ಣು ಭಟ್ ಹೊಸ್ಮನೆ ಅವರ ಪಯಣ ಕಥೆಗೆ ದ್ವಿತೀಯ ಮತ್ತು ಹೆಚ್ ಎಸ್ ಅರ್ಪಣಾ ಅವರ ಪಂಕ್ತಿಬೇಧ ಕಥೆಗೆ ತೃತೀಯ ಬಹುಮಾನ ನೀಡಲಾಗಿದೆ.
ಕವನ ವಿಭಾಗದಲ್ಲಿ ಡಾ.ರತ್ನಾಕರ್ ಮಲ್ಲಮೂಲೆ ಅವರ ಭೂತ ಕವಿತೆ ಪ್ರಥಮ,
ವಿನಾಯಕ ಅರಳಸುರಳಿ ಅವರ ದೇವರ ಹೊತ್ತವನು ಕವನ ದ್ವಿತೀಯ, ಡಾ ಅಜಿತ್ ಹೆಗಡೆ ಹರೀಶಿ ಅವರ ವೇದಾಂತದ ವಿಗತ ಕವನಕ್ಕೆ ತೃತೀಯ ಬಹುಮಾನ ಸಂದಿವೆ.
ಕಥೆಗೆ ಪ್ರಥಮವಾಗಿ 7500 ರೂಪಾಯಿ, ದ್ವಿತೀಯ 4000 ರೂಪಾಯಿ, ತೃತೀಯ 2500 ರೂಪಾಯಿ ನಗದು, ಹಾಗು ಕವನಗಳಿಗೆ ಪ್ರಥಮ ಬಹುಮಾನವಾಗಿ 3000 ರೂಪಾಯಿ, ದ್ವಿತೀಯ ಬಹುಮಾನವಾಗಿ 2000 ರೂಪಾಯಿ, ತೃತೀಯ ಬಹುಮಾನವಾಗಿ 1000 ರೂಪಾಯಿಗಳು ಹಾಗು ಸ್ಮರಣಿಕೆ ಪ್ರಶಸ್ತಿ ಪತ್ರ ನೀಡಲಾಗುವುದು.
ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತ.
ದಿನಾಂಕ 10/11/18 ರ ಶನಿವಾರ .ಸಂಜೆ 5.30 ಕ್ಕೆ.
ಸ್ಥಳ:ಅಜಿತ್ ಸಭಾ ಭವನ ( ಸೇವಾ ಸಾಗರ ಶಾಲೆ ರೈಲ್ವೆ ಸ್ಟೇಶನ್ ಹತ್ತಿರ ಸಾಗರ)




























































































































































































































No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu