Tuesday, September 13, 2016

Mathura is so restricted

ಇಲ್ಲಿ ಫೋಟೋ ತೆಗದ್ರೆ ಕ್ರಷ್ಣನ  ಜನ್ಮ ಸ್ಥಾನಕ್ಕೆ ಕಳಸ್ತೀನಿ ಅಂದಿದ್ದ ಅಲ್ಲಿರೋ ಪೋಲಿಸ್,ನಾವು ಅದನ್ನೇ ನೋಡೋಕೆ ಬಂದಿದ್ದು ಸಾರ್ ಅಂದ್ವಿ,      ಅಂದ ಹಾಗೆ ಇವತ್ತು ಮಥುರಾದ ಕ್ರಷ್ಣನ ಹುಟ್ಟಿದ ಸ್ಥಳ ನೋಡಿದೇವು,    ಆತ ಹುಟ್ಟಿದ್ದು ಜೈಲಲ್ಲಾದರೂ ಹಿ ಈಸ್ ದ ಸಿಂಬಾಲ್ ಆಫ್ ಹ್ಯಾಪಿನೆಸ್ಸ್,    ಆತ ಒಬ್ಬ ಅದ್ಭುತ  ಚಿಂತಕ,ದಾರ್ಶನಿಕ,ಆಡಳಿತಗಾರ, ತಂತ್ರಿ,ಕನಸುಗಾರ ಅದೆಲ್ಲಕ್ಕಿಂತ ಹೆಚ್ಚಾಗಿ ತನ್ನ ಜೀವನವನ್ನೂ ಎಷ್ಟು ಸಾಧ್ಯವೋ ಅಷ್ಟು ಪ್ರೀತಿಸುತ್ತಿದ್ದ ಜೀವನ ಪ್ರೀತಿಯ ಹರಿಕಾರ,     
ಜೊತೆಗಿದ್ದ ಯಾರೋ ಹೇಳಿದರು"ಮೀಸೆ ತೆಗೆದು ಬಣ್ಣ ಹಚ್ಚಿದ್ರೆ ನೀನು ಸೇಮ್ ಕ್ರಷ್ಣನೇ ಕಾಣಯ್ಯ ಅಂದ್ರು.
ನಾನು ಹೇಳಿದೆ ,ಆತನ ಬದುಕಿನ ಪ್ರೀತಿಯನ್ನು ನಾನು ಅಳವಡಿಸಿಕೊಳ್ಳೊ ಆಸೆ ಇರೋನು ಹೌದು ಕಾಣಯ್ಯ ಅಂದೆ,      #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

ಕನ್ನಡಿಗರ ರಕ್ಷಣೆಗಾಗಿ ಇದನ್ನು ಶೇರ್ ಮಾಡಿ. ನಿಮ್ಮ ಸುರಕ್ಷತೆ ನಮ್ಮ ಕಾಳಜಿ.ಇದು ನಮ್ಮ ಸಂಪದ ಸಾಲು ಪತ್ರಿಕಾ ಅಭಿಯಾನ.

ಕನ್ನಡಿಗರ ರಕ್ಷಣೆಗಾಗಿ ಇದನ್ನು ಶೇರ್ ಮಾಡಿ.
ನಿಮ್ಮ ಸುರಕ್ಷತೆ ನಮ್ಮ ಕಾಳಜಿ.ಇದು ನಮ್ಮ ಸಂಪದ ಸಾಲು ಪತ್ರಿಕಾ ಅಭಿಯಾನ.
ಕಾವೇರಿ ಗಲಭೆಗೆ ಒಂದು ಬಲಿ . ದಯವಿಟ್ಟು ಎಚ್ಚರ ಎಚ್ಚರ  ಎಚ್ಚರ!
ಬೆಂಗಳೂರು,ಮಂಡ್ಯ ಮೈಸೂರು,ಚಾಮರಾಜನಗರದ ನಲ್ಮೆಯ ಕನ್ನಡಿಗರೇ,
ನಮ್ಮ ಕಾವೇರಿಗಾಗಿ ಎಲ್ಲಾ ಪಕ್ಷಗಳ ಸೋಗಲಾಡಿ ಮನಸ್ಥಿತಿಯಿಂದ ಬೆಂಕಿ ಹತ್ತಿ ರಾಜ್ಯ ಉರಿಯುವಂತಾಗಿದೆ.ಈ ಮಾಧ್ಯಮಗಳ ಟಿ ಆರ್ ಪಿ ಯ  ಉಪಠಳದಲ್ಲಿ ಕ್ರೈಮನ್ನೇ ವಿಜೃಂಬಿಸಿ ಟೆಂಪ್ಟ್ ಮಾಡುತ್ತಿದ್ದಾರೆ.ನಿಮ್ಮಲ್ಲಿ ಕಳಕಳಿಯ ವಿನಂತಿ.ವಿಕೃತ ಮನಸ್ಥಿತಿಯ ಮಂದಿ ಎಲ್ಲಿ ಏನು ಬೇಕಾದರೂ ಹಿಂಸೆ ಮಾಡಬಹುದು.  ಹಣ ಮತ್ತು ಲಾಭದ ಬೆನ್ನುಬಿದ್ದ  ನಿಮ್ಮ ಕಂಪನಿಗಳು ರಜೆ ಕೊಡದೇ ಇರಬಹುದು.ಒಂದೆರಡು ದಿನ ಹುಶಾರಾಗಿರಿ. ಮನೆಯಿಂದಲೇ ಕೆಲಸ ಮಾಡಿ.ಅಥವಾ ರಜೆ ಹಾಕಿ.ಒಮ್ಮೆ ಜೀವ ಹೋದರೆ,  ಅಪಾಯ ಆದರೆ ಮತ್ತೆ ಸರಿ ಮಾಡಲಾಗದು. ಜೀವ ಮತ್ತು ಆರೋಗ್ಯ ಇದ್ದರೆ ಇನ್ನೊಂದು ಉದ್ಯೋಗ ಪಡೆಯದ ಬಹುದು. ಹಿಂಸೆಯಿಂದ ಏನೂ ಸಿಗುವುದಿಲ್ಲ.
ನೀವೂ ಬದುಕಿ,ನಿಮ್ಮವರನ್ನೂ ಬದುಕಿಸಿ.  #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

https://m.facebook.com/story.php?story_fbid=10207533969173001&id=1402623747

Worst administration by uttarapradEsha government

ಇದು ಉತ್ತರಪ್ರದೇಶ. ಕೆಟ್ಟ ರಸ್ತೆಗಳು, ಕೊಳಕು ವ್ಯವಸ್ಥೆ, ಪ್ರತಿಯೊಂದಕ್ಕೂ ಹಣ,ಚೀಪ್ ಕ್ವಾಲಿಟಿ ಸೇವೆ,ಮಳೆ   ಬಂದರೂ ನೀರು ಹರಿಯಲಾಗದ ಸ್ಥಿತಿ, ಹೊಂಡಗಳೇ ತುಂಬಿರುವ ರಸ್ತೆ,ಅತಿ ಹೆಚ್ಚು ಕ್ರೈಂ ನೆಡೆಯೋ ರಾಜ್ಯ.  ಮಾಯಾವತಿ ಮತ್ತು ಸಮಾಜವಾದಿಯ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಅವರ ಭ್ರಷ್ಟ ಆಡಳಿತದಲ್ಲಿ ಸಂಪೂರ್ಣವಾಗಿ      ನಲುಗಿಹೋದ ಉತ್ತರಪ್ರದೇಶದ ಊರುಗಳಿವು,
ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದ್ದರೂ, ಇಲ್ಲಿನ ಕೊಳಕಿನಿಂದಾಗಿ ,ಪ್ರವಾಸಿಗರಿಗೆ ಮತ್ತೆ ಬರಲು ಆಸಕ್ತಿಯೇ ಬರದಂತೆ ಮಾಡುತ್ತದೆ.  
ಭೌಗೋಳಿಕವಾಗಿಯೂ ದೊಡ್ಡದಾಗಿರುವ ರಾಜ್ಯದಲ್ಲಿ ಹೋಪ್ ಲೆಸ್ ಆಡಳಿತವಿದ್ದರೂ,      
ತಾಜ್ಮಹಲ್(ತೇಜೋಮಹಲ್)ಆಗ್ರಾ ಕೋಟೆ, ನೋಡುವಂತದ್ದು.
ಇದರ ಇತಿಹಾಸ ಇಂತಿದೆ:

ದೇಶದ ರಾಜಧಾನಿಯಾದ ದೆಹಲಿಯಿಂದ 200 ಕಿ.ಮೀ ದೂರದಲ್ಲಿ, ಉತ್ತರ ಪ್ರದೇಶ ರಾಜ್ಯದಲ್ಲಿ ನೆಲೆಗೊಂಡಿದೆ ಆಗ್ರಾ ನಗರ. ಆಗ್ರಾ ಎಂದರೆ ತಕ್ಷಣ ನೆನಪಿಗೆ ಬರುವುದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಕಟ್ಟಡ. ಹಾಗೆಂದು ಇಲ್ಲಿ ಕೇವಲ ತಾಜ್ ಮಹಲ್ ಮಾತ್ರ ಇಲ್ಲ. ಆಗ್ರಾದಲ್ಲಿ ತಾಜ್ ಮಹಲ್‍ ಹೊರತಾಗಿ ಆಗ್ರಾ ಕೋಟೆ  ಮತ್ತು ಫತೇಪುರ್ ಸಿಕ್ರಿಗಳು ಯುನೇಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಆಗ್ರಾದ ಇತಿಹಾಸವು ಅಧಿಕೃತವಾಇ 11ನೇ ಶತಮಾನದಲ್ಲಿ ದಾಖಲೆಗಳಲ್ಲಿ ಸೇರ್ಪಡೆಗೊಂಡಿದೆ. ಆಗಿನಿಂದ ಆಗ್ರಾವು ಹಿಂದೂ ಮತ್ತು ಮುಸ್ಲಿಂ ರಾಜರ ಆಳ್ವಿಕೆಗೆ ಒಳಪಟ್ಟು, ಅವರ ಸಾಂಸ್ಕೃತಿಕ ಹೆಜ್ಜೆಗುರುತುಗಳನ್ನು ತನ್ನಲ್ಲಿ ಇಂದಿಗು ಉಳಿಸಿಕೊಂಡು ಬಂದಿದೆ.

ಆಗ್ರಾವು 1526 ರಿಂದ 1628ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾಲದಲ್ಲಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯಿತು. ಮೊಘಲ್ ಸಾಮ್ರಾಟ ಬಾಬರ್ 1526 ರಲ್ಲಿ ಆಗ್ರಾವನ್ನು ಈ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿದನು. ಮೊಘಲ್ ಸಾಮ್ರಾಟರು ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ನಿಷ್ಣಾತರು. ಈ ನಗರವನ್ನು ಆಳಿದ ನಿಕಟ ಪೂರ್ವ ರಾಜ, ರಾಣಿಯರ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಇವರು ನಿರ್ಮಿಸಿದ ಅತ್ಯಂತ ವೈಭವಯುತ ಸ್ಮಾರಕಗಳು, ಇಂದಿಗು ವಾಸ್ತುಶಿಲ್ಪದ ಹೆಗ್ಗುರುತುಗಳಾಗಿ ಉಳಿದುಕೊಂಡು, ಅವರ ನೈಪುಣ್ಯತೆಯನ್ನು ಇಂದಿನವರಿಗು ಸಾರಿ ಸಾರಿ ಹೇಳುತ್ತಿವೆ.
ಅದರಲ್ಲಿಯೂ ಚಕ್ರವರ್ತಿ ಶಾ ಜಹಾನ್ ತನ್ನ ಪ್ರೀತಿ ಪಾತ್ರ ಮಡದಿಗಾಗಿ ನಿರ್ಮಿಸಿದ, ಸರಿಸಾಟಿಯಿಲ್ಲದ ಪ್ರೀತಿಯ ಧ್ಯೋತಕವಾಗಿ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿರುವ ತಾಜ್ ಮಹಲ್ ಗೋರಿಯು ಅಪರಿಮಿತ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡು ನಿಂತಿದೆ. ಇದರ ಜೊತೆಗೆ ಅಕ್ಬರ್ ಚಕ್ರವರ್ತಿಯು ಆಗ್ರಾ ನಗರದ ಹೊರಭಾಗದಲ್ಲಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗಳನ್ನು ನಿರ್ಮಿಸಿ ಈ ಊರಿಗೆ ಮತ್ತಷ್ಟು ಮೆರಗು ನೀಡಿದನು.

ಆಗ್ರಾವು ಆಗ್ರಾ , ಜೈಪುರ್ ಮತ್ತು ದೆಹಲಿಗಳನ್ನು ಒಳಗೊಂಡಿರುವ ಸುವರ್ಣ ತ್ರಿಕೋನದ ಒಂದು ಭಾಗವಾಗಿದೆ. ದೆಹಲಿಗೆ ಇದು ಹತ್ತಿರವಿರುವುದರಿಂದಾಗಿ ಹಲವಾರು ಪ್ರವಾಸಿಗರು ಒಂದು ದಿನದ ಪ್ರವಾಸದ ಸಲುವಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ತಾಜ್ ಮಹಲ್ ಜೊತೆಗೆ ಮತ್ತಷ್ಟು ಸ್ಥಳಗಳನ್ನು ನೋಡಲು ಬರುವ ಪ್ರವಾಸಿಗರಿಗಾಗಿ ಇಲ್ಲಿ ಹಲವಾರು ಹೋಟೆಲ್ ಮತ್ತು ಲಾಡ್ಜ್ ಗಳು ಇಲ್ಲಿವೆ.
ಸಮೀಪದಲ್ಲಿರುವ ಫತೇಪುರ್ ಸಿಕ್ರಿ ಮತ್ತು ಮಥುರಾಗಳಿಗೆ ಇಲ್ಲಿ ಸ್ಥಳ ವೀಕ್ಷಣಾ ಪ್ರವಾಸಗಳು ಲಭ್ಯವಿವೆ. ಈ ನಗರದಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿರುವ ಒಂದು ಮಾರುಕಟ್ಟೆಯಿದೆ. ಇದರಲ್ಲಿ ಪ್ರವಾಸಿಗರು ತಮಗೆ ಬೇಕಾದ ಆಭರಣಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ಕೊಂಡು ಕೊಳ್ಳಬಹುದು. ಇದರ ಜೊತೆಗೆ ಇಲ್ಲಿನ ದಲ್ಲಾಳಿಗಳು, ರಿಕ್ಷಾದವರು ಮತ್ತು ಅನಧಿಕೃತ ಮಾರ್ಗದರ್ಶಿಗಳನ್ನು ನಿಭಾಯಿಸಲು ತಯಾರಾಗಿರಿ.

ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡಗಳು ನಿಸ್ಸಂಶಯವಾಗಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಪ್ರವಾಸಿಗರು ತಾಜ್ ಮಹಲ್ ಜೊತೆಗೆ ಯಮುನಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಆಗ್ರಾ ಕೋಟೆ ಮತ್ತು ಅಕ್ಬರನ ಸಮಾಧಿಗೆ ಭೇಟಿ ನೀಡಬಹುದು. ಚೀನಿ ಕಾ ರೌಝಾ, ದಿವಾನ್- ಇ-ಅಮ್ ಮತ್ತು ದಿವಾನ್- ಇ-ಖಾಸ್ ಕಟ್ಟಡಗಳು ಮೊಘಲರ ಕಾಲದ ವಾಸ್ತುಶಿಲ್ಪ ವೈಭವದ ಒಳನೋಟವನ್ನು ಒದಗಿಸುತ್ತವೆ. ಇತ್‍ಮಡ್- ಉದ್- ದೌಲಾಹ್ ಸಮಾಧಿ, ಮರಿಯಂ ಝಮಾನಿ ಸಮಾಧಿ, ಜಸ್ವಂತ್ ಕಿ ಛಾತ್ರಿ, ಚೌಸತ್ ಖಂಬ ಮತ್ತು ತಾಜ್ ವಸ್ತು ಸಂಗ್ರಹಾಲಯ ಇಲ್ಲಿ ನೋಡಬೇಕಾಗಿರುವ ಆಕರ್ಷಣೆಗಳ ಪಟ್ಟಿಯಲ್ಲಿ ಸೇರಿವೆ.
ಭಾರತದ ಇತರ ನಗರಗಳಂತೆ ಆಗ್ರಾವು ಸಹ ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತಿದೆ. ಇಲ್ಲಿರುವ ಜಾಮಾ ಮಸೀದಿಯು ಪ್ರಖ್ಯಾತ ಹಿಂದೂ ದೇವಾಲಯವಾದ ಬಾಗೇಶ್ವರ್ ದೇವಾಲಯದೊಂದಿಗೆ ಸ್ಥಳವನ್ನು ಹಂಚಿಕೊಂಡಿದೆ. ಬೇರೆ ನಗರಗಳಲ್ಲಿರುವಂತೆ ಆಗ್ರಾದಲ್ಲಿ ಸಹ ನಯನ ಮನೋಹರ ತಾಣಗಳು, ವಾಸನೆಗಳು ಮತ್ತು  ಗೌಜು ಗದ್ದಲಗಳನ್ನು ತನ್ನಲ್ಲಿ ಒಳಗೊಂಡಿದೆ. ಇದರ ಜೊತೆಗೆ ಸೋಮಿ ಬಾಗ್ ಮತ್ತು ಮೆಹ್ತಾಬ್ ಬಾಗ್‍ನಂತಹ ಪ್ರಶಾಂತವಾದ ಉದ್ಯಾನವನಗಳನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ನೋಡಲು ತುಂಬಾ ಸೊಗಸಾಗಿರುತ್ತವೆ. ಅಲ್ಲದೆ ತಾಜ್ ಮಹಲ್ ಸಹ ಜನರ ಗೌಜು ಗದ್ದಲದಿಂದ ದೂರದಲ್ಲಿ ನೆಲೆಗೊಂಡಿದೆ. #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu